Showing posts with label ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ venugopala vittala. Show all posts
Showing posts with label ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ venugopala vittala. Show all posts

Sunday 1 August 2021

ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ankita venugopala vittala

 kruti by venugopala dasaru


ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ಯುಗ ಸರಸಿಜವ ಪೂಜಿಸುವಗುರು ವಿಜಯರಾಯರ ಚರಣಾಬ್ಜ ಸಾರಿದವದುರಿತಾಬ್ಧಿ ಮೀರಿದವ ಹರಿಪುರವ ಸೇರಿದವನೊ ಪ


ಹಿಂದೆ ದ್ವಾಪರದಿ ಅರವಿಂದನಾಭನು ಭಕ್ತವೃಂದವನು ಸಲಹುವೆನೆಂದು ಅವತರಿಸಿ ಸಭೆವಂದು ದಿನ ವಿಸ್ತರಿಸಿ ಕುಳಿತಿರಲು ಸುರಮುನಿ ಬಂದು ನುತಿಗೈದು ವರವ ||ಪೊಂದಿ ಕಲಿಯುಗದಲ್ಲಿ ನಿಂದು ನರಹರಿಯನಲು-ವಿಂದ ವೊಲಿಸಿಕೊಳುತ ನಂದವನಧಿಯೊಳಗೆಸಂದಣಿಸಿ ಸತಿಸುತರೊಡನೆ ಜನರ ಅಘ ಬಂಧ ಪರಿಹರ ಮಾಡುತಾ ಜನರು 1


ಇನಿತು ಜನಸಮುದಾಯದೊಳು ಯಿರುತಿರ್ದ ಇಭವರದ ನನುದಿನವು ಗಾಯನದಿ ಕೊಂಡಾಡಿ ಮನಮುಟ್ಟಿವಿನಯಾತಿಶಯದಲ್ಲಿ ಗುರುವರ್ಯರಾ ಸೇವೆ ಘನವಾಗಿ ಮಾಡಿ ಮುದದಿ ||ತನುವೆತ್ತಿ ವರಸರಿತ ತೀರದಾ ಅಣು ಬದರಿಜನ ಶ್ರೇಷ್ಠರೊಳು ಹರಿಯ ದಾಸ ಪೆಸರಲಿ ಬಂದುಘನ ಯಾದವಾದ್ರಿ ಪಟ್ಟಣದೊಳಗೆ ಯಿದ್ದು ಬಗೆ ಜನನಿ ಅನುಜಾತಿ ಸಹಿತ 2


ಕೆಲವು ದಿನ ಸಂಸಾರ ಗಲಭಿಯೊಳು ಯಿರುತಿರ್ದುಜಲದೊಳಗೆ ಅಂಬುಜವು ಮಿಳಿತವಾಗಿದ್ದ ತೆರಹಳಿದು ದುಷ್ಟಾಸಿಯನು ಕಳೆದು ಕಡು ಮಮತೆಯನು ಪುಳಕೋತ್ಸ ಮನದಿ ತಾಳಿ ||ಜಲದೊಳುತ್ತಮವಾದ ಭಾಗೀರಥೀ ಯಾತ್ರಿಛಲ ಭಕುತಿಯಿಂದಲಿ ಮಾಡಿ ಮೋದದಿ ಹರಿಯಹಲವು ಬಗೆ ಲೀಲೆಯನು ಹರುಷದಿಂದಲಿ ಯಿನ್ನು ತಿಳಿದು ಗುರು ಕರುಣ ಬಲದಿ 3


ಅಲ್ಲಿ ಗುರುಗಳ ಧ್ಯಾನದಲ್ಲಿ ದೃಢವಾಗಿ ಮನನಿಲ್ಲಿಸೀ ವರ ಪಡೆದು ನಾನಾಕು ಪರಿಯುಸಿರವಲ್ಲಭನ ಮೂರ್ತಿ ಮನದೊಳು ಕಂಡು ಸುಖವನಧಿಯಲ್ಲಿ ಲೋಲ್ಯಾಡಿಕೊಳುತ ||ಅಲ್ಲಿಂದ ತೆರಳಿ ಗಿರಿಯಲ್ಲಿದ್ದ ವೆಂಕಟನಸಲ್ಲುವಾ ಭಕುತರೊಳು ಸಲೆ ಶ್ರೇಷ್ಠನೆಂದೆನಿಸಿಮಲ್ಲ ಮರ್ದನನಾದ ಮುರಹರನ ಮಹಿಮೆ ಮನ ಬಲ್ಲನಿತು ವಿಸ್ತರಿಸುತ ಜನರು 4


ಈ ತೆರದಿ ಇಭವರದನಾತುಮದೊಳಗೆ ತಂದುಭೂತಳದ ಬಲು ವಿಧದ ತೀರ್ಥಕ್ಷೇತ್ರಗಳಲ್ಲಿಪ್ರೀತಿಯಿಂದಲಿ ಪರಮ ಪುರುಷನ್ನ ಧೇನಿಸುತ ಖ್ಯಾತಿ ಮಹಿಯೊಳಗೆ ಮೆರದು ||ವಾತಜಾತನ ಮತದ ವೊಳಗಿಪ್ಪ ವೈಷ್ಣವರತಾತನೆಂದೆನಿಸಿ ಸುಖವ್ರಾತದೊಳಗಿಡುವಲ್ಲಿಚಾತುರ್ಯದಿಂದ ಬಲುದಾತನೆನಿಸುತಲಿ ಭವತೀತರನ ಮಾಡಿ ಪೊರವ ಜನರು 5


ಆ ಬಗೆಯಲೀ ಕಮಲನಾಭ ಕರುಣಿಸಿ ಯಿವರಈ ಭುವನದೊಳು ಯಿಟ್ಟು ಜನರ ವುದ್ಧರಿಸುವಲೋಭದಿಂದಲಿ ಸಕಲ ಸಜ್ಜನರ ಸನ್ಮಾರ್ಗ ಲಾಭದೊಳು ಸೇರಿಸಿದನೊ ||ತ್ರ್ರಿಭುವನದೊಡೆಯನ್ನ ಕಥೆಯ ತಿಳಿಸುವ ಜನಕೆಶೋಭಿಸುವ ಗಾಯನದ ಸೊಬಗಿನಿಂದಲಿ ಕೇಳಿಶ್ರೀಭೂರಮಣ ವೊಲಿದು ಪಾಲಿಸುವನಾಮೇಲೆ ಶೋಭನ ಗತಿಯ ನೀವನೊ 6


ಶ್ರೀಕಾಂತ ಸಕಲ ಜಗ ವ್ಯಾಪಕನು ಸರ್ವೇಶಲೋಕದೊಳು ಇವರಲ್ಲಿ ಬೇಕಾದ ಚರಿತೆಯು ಅ-ನೇಕ ಬಗೆಯಿಂದಿವರ ಮುಂಭಾಗ ತೊಲಗದಲೆ ತಾ ಕುಣಿವ ತೋರಿಕೊಳುತ ||ಕಾಕು ಜನರಿಗೆ ಕಲುಷ ವಾಕು ವುಪಜೀವರಿಗೆ ಏಕ ಮನದಿಂದಿರುವದೇ ಈ ಕಲಿಯುಗದಲಿಸಾಕಾರ ಗುಣಪೂರ್ಣ ಶ್ರೀನಿವಾಸನು ಬಿಡದೆ ಸಾಕುವನು ಸಮ್ಮೊಗದಲಿ ಜನರು 7


ದೇವಮುನಿ ನಾರದನು ಜೀವಿಗಳನುದ್ಧರಿಪಭಾವದಲಿ ಯಮಪುರಿಯ ದೇವನಲ್ಲಿಗೆ ಪೋಗಿಸಾವಧಾನದಿ ಸಕಲ ಸತ್ಕಾರಕೊಳಗಾಗಿ ನೋವು ಬಡವರನೀಕ್ಷಿಸಿ || ಸಾವಧಾನದಿ ಕೇಳಿ ಕಲಶಾರುಣೀ ಭಕ್ತ- ರಾವಳಿಯ ಸಲಹುವ ದೇವ ದೇವೇಶನನುತಾ ವದರಿ ಕೂಗಲಾ ಜೀವರೆಲ್ಲರು ಕೇಳಿ ಪಾವಿತ್ರವನೆಗೈದರೊ ಜನರು 8


ಸಾಧುಗಳು ಇದು ಕೇಳಿ ಸಂತೈಸುವದು ಶಬ್ದಬಾಧೆಗಳು ಯಿದ್ದರೂ ತಿಳಿದು ತಲೆದೂಗಿ ಮಹಮೋದಕೊಳಗಾಗುವುದು ಮನಮುಟ್ಟಿ ನಲಿದು ಬುಧರಾದವರು ಭವ ವರ್ಜರೊ ||ವೇದಶಾಸ್ತ್ರಗಳು ಬಲು ಸಾಧನ ಪುರಾಣಗಳುಶೋಧಿಸೀ ಮನದಲ್ಲಿ ಪೇಳಿದವನಲ್ಲ ಗುರುಪಾದ ರೇಣುಗಳನ್ನು ಆಶ್ರೈಸಿ ಅರ್ಪಿಸಿದೆ ಶ್ರೀಧವನ ಸಿರಿ ಚರಣಕೆ ಜನರು 9


ಪರಮಾತ್ಮ ಸಿರಿ ಬ್ರಹ್ಮ ಪುರಹರನು ಹರಿರಾಣಿ ಗಿರಿಜೆ ಗಿರಿವೈರಿ ಪ್ರಾಣಾನಿರುದ್ಧ ಮರುತ ತರಣಿ ವರುಣಾ ದೇವ ಮುನಿ ಭೃಗು ಋಷಿಗಳು ಸಪ್ತ ವರವಿಶ್ವಾಮಿತ್ರ ವೈವಸ್ವತಾನುತಾರಾದಿ ಚತುರಗಣಪ ಮೊದಲಾದ ಶೇಷಶತರು||ಭರತಾದಿ ಕರ್ಮಜರು ಗಂಗೆ ಸ್ವಹಾ ಬುಧನುಸುರರ ವೈದ್ಯರ ಮಡದಿ ಶನಿ ಪುಷ್ಕರಾಮತ್ತೆಇರುವ ದೇವತೆಗಳ ತಾರತಮ್ಯವ ತಿಳಿಸಿ ಶರಧಿ ಶಯನನ ತೋರುವ ಜನರು 10


ದಾನವಾಂತಕ ದನುಜರನ್ನು ಸಂಹರಿಸುವಾಜ್ಞಾನಪೂರ್ಣನು ಗುಪ್ತ ತಾನಾಗಿ ಜಗದೊಳಗೆಹಾನಿ ವೃದ್ಧಿಂಗಳಿಗೆ ಹೊರಗಾಗಿ ಜೀವಿಗಳ ಮಾಣದಲೆ ಪರಿಪಾಲಿಪ ||ಕ್ಷೋಣಿಯೊಳು ಭಕುತರಘ ಹಾನಿಗೈಸುವ ಬಗಿಗೆಈ ನಿರುದ್ಧಕೆ ಯಿವರಧೀನ ಮಾಡಿದ ನಮಗೆವೇಣುಗೋಪಾಲ ವಿಠಲರೇಯ ತಾನೊಲಿದು ಸ್ವಾನಂದವನೆ ವುಣಿಸುವ ಜನರು 11

***