Showing posts with label ಸ್ಮರಣೆ ಒಂದೇ ಸಾಲದೆ ಈ ಗುರುಗಳ ಸ್ಮರಣೆ ಒಂದೇ ಸಾಲದೆ gurushyamasundara. Show all posts
Showing posts with label ಸ್ಮರಣೆ ಒಂದೇ ಸಾಲದೆ ಈ ಗುರುಗಳ ಸ್ಮರಣೆ ಒಂದೇ ಸಾಲದೆ gurushyamasundara. Show all posts

Monday 6 September 2021

ಸ್ಮರಣೆ ಒಂದೇ ಸಾಲದೆ ಈ ಗುರುಗಳ ಸ್ಮರಣೆ ಒಂದೇ ಸಾಲದೆ ankita gurushyamasundara

 ರಾಗ: [ಮಲಯಮಾರುತ] ತಾಳ: [ಆದಿ]


ಸ್ಮರಣೆ ಒಂದೇ ಸಾಲದೆ ಈ ಗುರುಗಳ

ಸ್ಮರಣೆ ಒಂದೇ ಸಾಲದೆ


ಪರಮಪುರುಷನನ್ನು ನೆರೆನಂಬಿ ತುತಿಸುವ

ಗುರುರಾಘವೇಂದ್ರರ ಚರಣವಾರಿಜ ಯುಗ್ಮ ಅ.ಪ

ಭಜಿಪರಘವ ಕಳೆವ ದುಷ್ಟರ ಜಾಲ

ನಿಜದಿ ದೂರದಲ್ಲಿಡುವ

ಸುಜನರ ಸಂಗವ ಸೇರಿಸಿ ಕೊಡುತಿಹ

ಅಜಕರಾರ್ಚಿತ ರಾಮನ ಪಾದದ ಭಜಕರ 1

ಕಡು ಮೂರ್ಖನಾದಂಥ ವೆಂಕಣ್ಣನು

ಹುಡುಗಾಟವಾಡಿರಲು

ದೃಢ ಭಕುತಿಯಿಂದ ಸ್ಮರಣೆ ಮಾಡಿರೆ

ಕಡು ಹರುಷದಲಿ ರಾಜ ಮನ್ನಣೆ ಪಡೆದ 2

ನಿರುತ ಭಕುತಿಯಿಂದಲಿ ಸ್ಮರಿಸುತಿರೆ

ವಿರಕುತಿ ಜ್ಞಾನಗಳು

ಭರದಿ ಬಂದೊದಗಿದವು ಮನ್ನಣೆ ವಾಂಛಿತವೆ

ಗುರುಶಾಮಸುಂದರ ನಿಜದಾಸ ಭಜಕರ 3

***