Showing posts with label ಈತನೇ ಗುರು ರಾಘವೇಂದ್ರಾ ಖ್ಯಾತ ಕಾಣಿರೋ lakshmipati vittala. Show all posts
Showing posts with label ಈತನೇ ಗುರು ರಾಘವೇಂದ್ರಾ ಖ್ಯಾತ ಕಾಣಿರೋ lakshmipati vittala. Show all posts

Friday 27 December 2019

ಈತನೇ ಗುರು ರಾಘವೇಂದ್ರಾ ಖ್ಯಾತ ಕಾಣಿರೋ ankita lakshmipati vittala

ಈತನೇ ಗುರು ರಾಘವೇಂದ್ರಾ – ಖ್ಯಾತ ಕಾಣಿರೋ        || ಪ ||
ವಾತಮತದುಗ್ದಾಬ್ಧಿ ಚಂದ್ರ ಸು-ಖಾತಿಶಯಗಳ ನೀವ ನಿರುತ        || ಅ ||

ಹಿಂದೆ ಹೇಮಕಶ್ಯಪನ ಸುತ
ನೆಂದು ಕರೆಸಲು ಓಂ ನಮಃ ಶಿವ
ಎಂದು ಬರೆಯಲು ಹೇಳಲಾಪಿತನು
ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು
ತೋರೆಲವೊ ಸ್ಥಂಭದಿ ಇಂದು ನಿನ್ನನು
ಕಾವದೇವರನು ಎಂದೆನ್ನಲವನು
ಇಂದಿರೇಶನ ದ್ವಂದ್ವರೂಪವ
ಅಂದುತೋರಿದ ಮಹಿಮನೋ            || ೧ ||

ವ್ಯಾಸಮುನಿಯಾಗವತರಿಸಿ ಜೀ
ವೇಶರೊಂದೆಂಬ ಮಾಯಿಗಳ ಕು
ಭಾಷ್ಯಗಳೆಲ್ಲ ತಾ ಕೆಡಿಸಿ – ಸರ್ವಜ್ಞ ಶಾಸ್ತ್ರವ
ಲೇಸಿನಲಿ ಸಜ್ಜನಕೆ ಬೊಧಿಸಿ – ದುರ್ವಾದಿಗಳ ಸ
ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ
ಹರಿಪ್ರೀತಿಗೊಳಿಸಿ
ಕೇಶವನೆ ಪರನೆಂದು ಸಾರುತ
ದಾಶರಥಿನಿಜದಾಸ್ಯ ಪಡೆದ        || ೨ ||

ವರಹದಂಷ್ಟ್ರಯುಗಳ ಸು
ತೀರದಲಿರುವ ಮಂತ್ರಾಲಯದ ಸ್ಥಳದೀ
ಸುರರು ಮಾಡುವ ಪರಮ ಆರಾಧನೆಯ ಕೈಗೊಳ್ಳುತಾ
ತ್ರಿವಿಧರ್ಗೆತಕ್ಕ ವರಗಳನು ದಿನದಲ್ಲಿ ನೀಡುತ್ತ
ಜಗದೊಳು ಪುನೀತಾ
ಗುರು ಸುಧೀಂದ್ರಸುತೀರ್ಥರ ಸಿರಿ
ಕರಕಮಲ ಸಂಜಾತ – ಪ್ರೀತಾ            || ೩ ||

ಮೆರೆವ ದ್ವಾದಶನಾಮ ಮುದ್ರೆಯು
ಕರದಿ ದಂಡಕಮಂಡಲು ಶ್ರೀ
ತರಳ ತುಳಸಿ ಸರವು ಕೊರಳಲ್ಲಿ – ಶ್ರೀ
ಹರಿಯ ಧ್ಯಾನವು ನಿರುತ ಮಾಡುತ ಮನದಲ್ಲಿ
ಸುಕ್ಷೇತ್ರತೀರ್ಥಕ್ಕೆ ಸರಿಮಿಗಿಲು ಎನಿಸುತ್ತಲಿಹರಿಲ್ಲಿ
ಇವರ ಅಂಘ್ರಿಯಲೀ
ನಿರುತ ಸೇವೆಮಾಳ್ಪ ಜನರಿಗೆ
ಪರಮಸುಖಗಳನೇ ಕೊಡುವರಿಲ್ಲಿ        || ೪ ||

ಚತುರವಿಧ ಫಲಗಳನು ಕೊಡುತ
ಯತಿಶಿರೋಮಣಿ ನಾಮದಲಿ ಶ್ರೀ
ಪತಿಯು ತಾನೇ ಚಕ್ರರೂಪದಲೀ – ಇವರಲಿ ನಿಂತು
ಕೃತಿಯ ನಡೆಸುವ ಸರ್ವಕಾಲದಲೀ – ಈ ಮಹಿಮೆಯನು ನಾ
ತುತಿಸಬಲ್ಲೆನೆ ಅಲ್ಪಮತಿಯಲ್ಲೀ-
ಸದ್ಭಕ್ತಿಯಲೀ
ತುತಿಸುವರ ಪಾಲಿಸುವ ಲಕ್ಷ್ಮೀ
ಪತಿವಿಠ್ಠಲ ಸತ್ಕರುಣದಲ್ಲಿ            || ೫ ||
***

 ಶ್ರೀ ಲಕ್ಷ್ಮೀಪತಿ ವಿಠ್ಠಲ 

ಅಂಕಿತ ಗುರುಗಳು : ಶ್ರೀ ಗುರು ಶ್ರೀಶ ವಿಠ್ಠಲರು 

ರಾಗ : ಶಂಕರಾಭರಣ ತಾಳ : ಅಟ್ಟ 


ಈತನೇ ಗುರುರಾಘವೇಂದ್ರಾ 

ಖ್ಯಾತ ಕಾಣಿರೋ ।

 ವಾತಮತ ದುಗ್ಧಾಬ್ಧಿ ಚಂದ್ರ 

ಸುಖಾತಿಯಶಗಳ ನೀವ ನಿರುತ ।। ಪಲ್ಲವಿ ।। 


ಹಿಂದೆ ಹೇಮಕಶ್ಯಪನ ಸುತನೆಂದು 

ಕರಸಲು ಓಂ ನಮಃ ಶಿವ ।

ಯೆಂದು ಬರೆಯಲು ಹೇಳಲಾ 

ಪಿತನು ನಾರೇಯಣನೆ ಪರ ।

ನೆಂದು ಬರೆಯಲು ರೋಷದಲಿ 

ಖಳನು ತೋರೆಲವೋ ಸ್ತಂಭದಿ ।।

ಯಿಂದು ನಿನ್ನನು ಕಾವ 

ದೇವರನೂ ಯೆಂದೆನ್ನಲವನೂ ।

ಇಂದಿರೇಶನ ದ್ವಂದ್ವ ರೂಪವ 

ಅಂದು ತೋರಿದ ಮಹಿಮನೊ ।। ಚರಣ ।। 


ವ್ಯಾಸ ಮುನಿಯಾಗವತರಿಸಿ । ಜೀ ।

ವೇಶರೊಂದೆಂತೆ೦ಬ ಮಾಯಿಗಳ । ಕು ।

ಭಾಷ್ಯಗಳಿಗೆಲ್ಲಾ ತಾ ಕೆಡಿಸೀ ಸರ್ವಜ್ಞ ।

ಶಾಸ್ತ್ರವ ಲೇಶಿನಲಿ ಸಜ್ಜನಕೆ । ಬೋ ।

ಧಿಸಿ ದುರ್ವಾದಿಗಳ । ಸ ।

ಚ್ಛಾಸ್ತ್ರವೆಂಬಸಿಯಲ್ಲಿ 

ಖಂಡ್ರಿಸಿ ಹರಿ ಪ್ರೀತಿ ಗೊಳಸೀ ।

ಕೇಶವನೆ ಪರನೆಂದು ಸಾರುತ ।

ದಾಶರಥಿ ನಿಜ ದಾಸ್ಯ ಪಡೆದ ।। ಚರಣ ।। 


ವರಹದಂಷ್ಟ್ರಜಯಳ । ಸುತೀರದ ।

ಲಿರುವ ಮಂತ್ರಾಲಯ ಸ್ಥಳದೀ ।

ವರ ಸುವೃಂದಾವನದಿ ರಾಜಿಸುತಾ ।

ಭೂಸುರರು ಮಾಡುವ ।

ಪರಮ ಆರಾಧನೆಯ ಕೈಕೊಳುತಾ ।।

ತ್ರಿವಿಧರ್ಗೆತಕ್ಕ ।

ವರಗಳನುದಿನದಲ್ಲಿ ನೀಡುತ್ತಾ ।

ಜಗದೊಳು ಪುನೀತಾ ।

ಗುರು ಸುಧೀಂದ್ರ ಸು ತೀರಥರ ಸಿರಿ ।

 ಕರ ಕಮಲ ಸಂಜಾತಾ ಪ್ರೀತಾ ।। ಚರಣ ।। 


ಮೆರೆವ ದ್ವಾದಶ ಮುದ್ರೆಯು ।

ಕರದಿ ದಂಡ ಕಮಂಡಲವು । ಶ್ರೀ ।

ತರುಳ ತುಲಸೀ ಸರವು ಕೊರಳಲ್ಲಿ ।

ಶ್ರೀ ಹರಿಯ ಧ್ಯಾನವು ।

ನಿರುತ ಮಾಡುವ ತನ್ನ ಮನದಲ್ಲಿ ।।

ಸುಕ್ಷೇತ್ರ ತೀರ್ಥಕೆ ।

ಸರಿಮಿಗಿಲು ಯೆನಿಸುತ್ತಲಿಹ್ಯದಿಲ್ಲಿ ।

ಇವರಂಘ್ರಿಯಲ್ಲಿ ।

ನಿರುತ ಸೇವೆಯ ಮಾಳ್ಪ ಜನರಿಗೆ ।

ಸುಖಗಳನೆ ಕೊಡುವಲ್ಲಿ ।। ಚರಣ ।। 


ಚತುರ ಫಲಗಳನು ಕೊಡುತಾ ।

ಯತಿ ಶಿರೋಮಣಿ ನಾಮದಲಿ । ಶ್ರೀ ।

ಪತಿಯು ತಾನೇ ಚಕ್ರ ರೂಪದಲೀ ।

ಇವರಲ್ಲಿ ನಿಂತೂ ।

ಕಟಿಯ ನಡೆಸುವ ಸರ್ವ ಕಾಲದಲೀ ।।

ಈ ಮಹಿಮೆಯನುನಾ ।

ತುತಿಸ ಬಲ್ಲೆನೆ ಅಲ್ಪ-

ಮತಿಯಲ್ಲೀ ಸದ್ಭಕ್ತಿಯಲ್ಲೀ ।

ತುತಿಸುವರ ಪಾಲಿಸುವ । ಲಕ್ಷ್ಮೀ ।

ಪತಿ ವಿಠ್ಠಲ ಸತ್ಕರುಣದಲ್ಲೀ ।। ಚರಣ ।।

****