Showing posts with label ನರಹರಿ ತೀರ್ಥಯತಿವರ್ಯ ಇಷ್ಟೆಂದೊ karpara narahari. Show all posts
Showing posts with label ನರಹರಿ ತೀರ್ಥಯತಿವರ್ಯ ಇಷ್ಟೆಂದೊ karpara narahari. Show all posts

Monday 2 August 2021

ನರಹರಿ ತೀರ್ಥಯತಿವರ್ಯ ಇಷ್ಟೆಂದೊ ankita karpara narahari

ನರಹರಿ ತೀರ್ಥಯತಿವರ್ಯ ಇಷ್ಟೆಂದೊ

ರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ಪ


ಸುರವಿನುತ ಪದಹರುಷತೀರ್ಥರ

ಕರಕಮಲ ಸಂಜಾತರೆನಿಸುತ

ಧರೆಯೊಳಗೆ ಸಿರಿಸಹಿತರಾ ಮನ

ಕರೆದು ಧರೆಸುರ ಜನಕೆ ತೋರಿದ ಅ.ಪ

ಚರಿಸುತ ಬರಲು ಗಜಪುರದಿ ಪುರ-

ದರಸನಿಲ್ಲದಿರೆ ಯೋಚಿಸುತ ಕರಿಕರದಿ

ವರಮಾಲಿಕೆಯ ಕೊಡಲಾಕ್ಷಣದೀ ಯತಿ

ವರರ ಕಂಠದಲಿ ಹಾಕಲು ಜನ ಸಭದಿ

ಪುರಜನದ ಪ್ರಾರ್ಥನದಿ ದ್ವಾದಶ ವರುಷ

ಪ್ರಜರನು ಪೊರೆದು ಕೋಶದೊಳಿ-

ರುವ ಧರಿಜಾಸಹಿತ ರಾಮನ ತರಿಸಿ

ಪೊರಟರು ಕುದುರೆಯೇರುತ1


ಆ ಮಹಾಮುನಿಪರು ತ್ವರದಿ ಬಂದು

ಶ್ರೀ ಮದಾನಂದ ತೀರ್ಥರ ಪದಯುಗದಿ

ಪ್ರೇಮವಂದನ ಪೂರ್ವಕದಿ ಸೀತಾ

ರಾಮಮೂರ್ತಿಯ ನೊಪ್ಪಿಸಿದರು ಕರದೀ

ಶ್ರೀ ಮನೋಹರ ನಂಘ್ರಿಯುಗಲವ

ಪ್ರೇಮದಿಂದಲಿ ಪೂಜಿಸುತಲಿರೆ

ಈ ಮಹಾತ್ಮರ ಕರೆದು ಕೊಟ್ಟರು

ನೇಮದಿಂದರ್ಚಿಸಿರಿ ಎನುತಲಿ 2


ಭಾಸುರ ಹೇಮಮಂಟಪದಿ ನಿತ್ಯಾ

ಶ್ರೀಸೀತಾರಾಮನರ್ಚಿಪರು ವೈಭವದೀ

ಭೂಸುರ ಕೃತ ವೇದಘೋಷದಿ ಮತ್ತೆ

ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ

ದೇಶ ದೇಶಗಳಲ್ಲಿ ಚರಿಸುತ

ತೋಷತೀರ್ಥರ ಮತವ ಬೋಧಿಸಿ

ಶ್ರೀಶಕಾರ್ಪರ ವಾಸ ಸಿರಿ ನರ

ಕೇಸರಿಗೆ ಪ್ರಿಯದಾಸರೆನಿಸಿದ 3

****