Showing posts with label ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ namagiri. Show all posts
Showing posts with label ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ namagiri. Show all posts

Thursday 5 August 2021

ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ

ದ್ವಿಪÀವರವರದನೇ ಬಾರಯ್ಯ ದೊರೆಯೆ ಪ


ದುರಿತಹರÀ ವರ ಚರಣಕಮಲನೆ

ಧರಣಿಧರವನು ಕರಸರೋಜದಿ

ಧರಿಸಿ ಸುಜನರ ಪೊರೆದ ಮುರಳೀ-

ಧರನೇ ಮೋದವಪಡಿಸಿದಂತೆ ಅ.ಪ


ನಂದನಂದನ ನಿನ್ನ ಚರಣ ಒಂದೇ ಶರಣ

ಎನಗೆಂದು ನಂಬಿರುವುದೇ ಒಳ್ಳೇ ಆಭರಣ

ಇಂದಿರೇಶನೆ ಮಾಡೋ ಕರುಣ ಸಿಂಧುಶಯನ

ಸುಂದರೀಮಣಿ ಸಹಿತದಲಿ ನೀ

ಬಂದು ಎನ್ನಯ ಮಂದಿರದಲಿ

ನಿಂದು ಎನ್ನವನೆಂದು ಭಾವಿಸಿ

ನಂದಪಡಿಸೈ ನಂದಬಾಲನೆ 1


ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ

ಸೂನಶರನಪಿತ ವಿಗತವಿಕಾರ

ಶ್ರೀನಾಥ ಸುಜನಮಂದಾರ ಮೀನಾಕಾರ

ನಾನು ನಿನ್ನವನಯ್ಯ ಎನ್ನಯ

ಮಾನ ಮತ್ತಪಮಾನ ನಿನ್ನದು

ಹೀನಮತಿ ಇವನೆಂದು ತಿಳಿದುದಾ-

ಸೀನಮಾಡದೆ ಸಾನುರಾಗದಿ 2


ಸೋಮ ಕುಲಾಂಬುಧಿಸೋಮರಾರಾಮ

ಬಲರಾಮ ಸಹಜನೇ ಸುರರಿಪು ಭೀಮ

ವಾಮಲೋಚನೇರಿಗೆ ಕಾಮ ಪ್ರೇಮಧಾಮ

ಕಾಮಜನಕನೆ ಸಾಮಗಪ್ರಿಯ

ನಾಮಗಿರಿ ಶ್ರೀ ರಾಮ ನರಹರೆ

ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3

***