Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ನಿಂದು ತುಂಗಾತೀರದಲಿ venkatakrishna. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ನಿಂದು ತುಂಗಾತೀರದಲಿ venkatakrishna. Show all posts

Tuesday 1 June 2021

ಜಯ ಮಂಗಳಂ ನಿತ್ಯ ಶುಭಮಂಗಳಂ ನಿಂದು ತುಂಗಾತೀರದಲಿ ankita venkatakrishna

by yadugiriyamma 

ಜಯಮಂಗಳಂ ನಿತ್ಯ ಶುಭಮಂಗಳಂ ಪ


ನಿಂದು ತುಂಗಾತೀರದಲಿ ಮಂದರಗಿರಿಯಲ್ಲಿ

ಬಂದು ಜಮದಗ್ನಿಗಳಿಗೊಲಿದು

ಬಂದು ನಿಮ್ಮಯ ಸೇವೆ ಮಾಡಿದ ಭಕ್ತರಿಗೆ ಆ

ನಂದ ಪದವಿಯನೀವ ಇಂದಿರೇಶನಿಗೆ 1


ಅಂದು ಗೌತಮಸತಿಯ ಇಂದ್ರನು ಮೋಹಿಸಿ

ಬಂಧನಕ್ಕೊಳಗಾಗೆ ಬಂದು ನಿಮ್ಮ

ಪಾದಸೇವೆಯ ಮಾಡೆ ಪಾಪವೆಲ್ಲವ ಕಳೆದು

ಅಮರಪದವೀವ ನಿತ್ಯಪರಮಪುರಷನಿಗೆ2


ಇಂದ್ರಗಿರಿ ಮಹೇಂದ್ರತೀರ್ಥವೆಂದೆನುತ ಆ

ನಂದದಿಂದಲೆ ಪ್ರವಾಸ ಮಾಡೀ

ಬಂದು ಸ್ನಾನ ಪಾನ ಸೇವೆ ಮಾಡಿದವರ

ಜಾರದೋಷದ ಕಳೆವ ಶ್ರೀನಿವಾಸನಿಗೆ 3

****