Showing posts with label ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ kamalesha vittala KARUNADI KANNU TEREYE BAARAMMA SIRIYE. Show all posts
Showing posts with label ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ kamalesha vittala KARUNADI KANNU TEREYE BAARAMMA SIRIYE. Show all posts

Monday 6 September 2021

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ ankita kamalesha vittala KARUNADI KANNU TEREYE BAARAMMA SIRIYE



ಶ್ರೀ ಆನಂದದಾಸರು ಮೈಸೂರಲ್ಲಿದ್ದಾಗ ರಚಸಿದ ಶ್ರೀ ಲಕ್ಷ್ಮೀದೇವಿಯರ ಸ್ತೋತ್ರ.....

ಕರುಣದಿ ಕಣ್ಣು ತೆರೆಯೇ ।
ಬಾರಮ್ಮಾ ಸಿರಿಯೇ ।। ಪಲ್ಲವಿ ।।

ಧರಣಿಯೊಳಗೆ ಸುಂದರತರ । ಕೊಲ್ಹಾ ।
ಪುರ ಸಿಂಹಾಸನದಿ 
ಮೆರೆವ ಧೊರೆಯ ।। ಅ ಪ ।।

ವಿಧಿ ಭವಾದಿಗಳ ಸದನದೊಳಗೆ । ಅ ।
ಭ್ಯುದಯ ಕಟಾಕ್ಷದ 
ಸುಧೆಯವಗರೆಯ ।। ಚರಣ ।।

ಸುಂದರಾನನರವಿಂದದ ಮಲ್ಲಿಗೆ ।
ಮಂದಹಾಸ ಮಕರಂದ 
ಸುರಿಯೆ ।। ಚರಣ ।।

ಕಡು ಬೆಡಗಿನ ನಿನ್ನಡಿ-
ದಾವರೆಗಳ ।
ಬಿಡದೆ ಭಜಿಪ ವರ ಕೊಡು 
ಸುಂದರಿಯೆ ।। ಚರಣ ।।

ಬಡವರಭೀಷ್ಟೆಯ 
ಕೊಡುವಳೆಂದು ಬಡ ।
ಬಡಿಸಿ ಬಂದೆ ನೊನ್ನೊಡಲಿನ 
ಮೊರೆಯೆ ।। ಚರಣ ।।

ಕೊಟ್ಟರೆ ಕಮಲೇಶ-
ವಿಠ್ಠಲರಾಯನ ।
ಪಟ್ಟದರಸಿಯೆಂಬ 
ಕಟ್ಟಳೆ ಬರೆಯೆ ।। ಚರಣ ।।
***


ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII
ಕೊಲ್ಹಾಪುರ ಸಿ೦ಹಾಸನದಿ ಮೆರೆಯುವ ಸಿರೆಯೆ IIಅಪII 

ವಿಧಿಭವಾದಿಗಳ ಸದನಗಳಿಗೆ 
ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II 

ಕಡು ಬೆಡಗಿನ ನಿನ್ನಡಿದಾವರೆಗಳ 
ಬಿಡದೆ ಭಜಿಪವರ ಕೋಡು ಸು೦ದರಿಯೆ II೨II 

ಸುಂದರಾನ ಅರವಿಂದಮಲ್ಲಿಗೆ 
ಮಂದಹಾಸ ಮಕರ೦ದವ ಸುರಿಯೆ II೩II 

ಬಡವರಾಭಿ ಷ್ಟೆಯ ಕೋಡುವಳೆ೦ದು 
ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II 

ಕೊಟ್ಟರೆ ಕಮಲೇಶವಿಠಲರಾಯನ 
ಪಟ್ಟದರಸಿ ಯೋ೦ಬೊ ಕಟ್ಟಲೆ ಕರೆಯೆ II೫II
****