Showing posts with label ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು bheemesha krishna. Show all posts
Showing posts with label ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು bheemesha krishna. Show all posts

Wednesday 1 September 2021

ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ankita bheemesha krishna

 ..

ಧರೆಯನಾಳುವನೊಬ್ಬ ದೊರೆ ಜೈಶೀಲನಾ

ಹರದಿ ಮಂಜುಳೆಯಿರಲು ಮಕ್ಕಳಿಗಾಗಿ

ಮರುಗುತ ಸೊರಗಿರಲು ಈ ಪರಿಯ ನೋಡುತ

ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ

ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ

ತಿರುಗಿ ಪೋದನೆ ಉರಗಭೂಷಣ

ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ

ಮಂಗಳಾಂಗಿಯರು ಬ್ಯಾಗ 1


ನಂದಿವಾಹನನ ಪೂಜಿಸಿ ಫಲಗಳ ಬೇಡೆ

ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ-

ನ್ನೊಂದು ವರುಷವೆನಲು ವರ ನೀಡುತಿರಲು

ಮಂಜುಳೆಯು ಗರ್ಭವನೆ ಧರಿಸಲು

ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ-

ಮಂತ ಮಾಡಲು ತುಂಬಿತಾ ನವಮಾಸವಾಗಲೆ 2


ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ-

ನೆಂದ್ಹೆಸರಿಡುತ ಜಾವಳ ಜುಟ್ಟು

ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ

ಆತಘದಿನಾರ್ವರುಷ ಬರುತಿರೆ

ಮಾತುಳನ ಕರೆತಂದು ಬ್ಯಾಗನೆ

ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3


ಒಂದಾಗಿ ಅಳಿಯ ಮಾವಂದಿರು ಬರುತಿರೆ

ಕಂಡಿಳಿದರು ತೋಟವ ಗೆಳತಿಯರು

ಬಂದು ಹೂವಿಗೆ ಆಟವಾಡುತಲಿ ಕೋಪಿಸೆ

ಒಂದಕ್ಕೊಂದು ಮಾತಾಡೆ ರಾಜ

ನಂದನೆಯು ತಾ ನೊಂದುಕೊಳ್ಳದೆ

ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4


ಬಂದ ರಾಜನ ಮಗಳಿಗೆ ನಿಬ್ಬಣವು ಕರೆ-

ತಂದರಸುಕುಮಾರನ ಧಾರೆಯನೆರೆದು

ಮಂಗಳ ಸೂತ್ರವನು ಬಂಧನವ ಮಾಡಿದ-

ರÀಂದದಿಂದಲಿ ಲಾಜಹೋಮವ

ಬಂಧುಗಳ ಸಹಿತುಂಡು ಭೌಮವ

ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5


ಸತಿಪತಿಯರು ಭಾಳ ಹಿತದಿಂದ ಮಲಗಿರೆ

ಅತಿ ಹಸಿವೆನಗೆನಲು ಲಡ್ಡಿಗೆ ತಂದು

ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ

ಸತಿ ಸಹಿತ ಸುಖನಿದ್ರೆಲಿರೆ ಪಾ-

ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ

ಅತಿಬ್ಯಾಗದಿ ತುಂಬಿಟ್ಟಳುರಗವ 6


ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು

ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ-

ಭೂಷಿತಳು ಬಂದು ನೋಡುತಲಿ ನಿಂದು

ಥಟ್ಟನೆದ್ದು ತಾ ತಿರುಗಿ ಪೋಗೆನ್ನ

ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ

ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7


ಗಂಗಾಸ್ನಾನವÀ ಮಾಡಿ ಬಂದರಿಬ್ಬರು ಕರೆ

ತಂದು ಭೋಜನಮಾಡುತ ಕುಳಿತಿರಲಾಗ

ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ

ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು

ಬಂದು ಜನರು ನಿಂದು ಗುರುತೇನೆಂದು ಕೇಳಲು

ತಂದು ತೋರಿದುಂ(ದಳುಂ?) ಗುರವ ಜನರಿಗೆ 8


ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು

ಪನ್ನಂಗದ ಕಳಸವನು ತೆಗೆಯಲು ಬಾಯಿ

ರನ್ನ ಮುತ್ತಿನ ಸರವು ಆಗಿರಲು ಉರಗವು

ಕನ್ನೆಯರು ಹರಸ್ಹಾಕೆ ಕೊರಳಿಗೆ

ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು

ಉಡುಗೊರೆ ತನ್ನಳಿಯಗುಪಚಾರ ಮಾಡುತ 9


ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು

ರತುನದಂದಣವೇರಲು ಮಾರ್ಗದಿ ಗೌರೀ-

ವ್ರತ ಮಾಡಿ ನಡೆತರಲು

ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ-

ರಥಿಯು ಮಾತುಳ ಮಡದಿ ಸಹಿತ

ಹಿತದಿ ಬಂದೆರಗಿದರೆ ಸೊಸೆಮಗ

ಅತಿಹರುಷದಿಂದಪ್ಪಿ ಕೇಳುತ 10


ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು

ಮಂಗಳಗೌರಿ ದೇವಿ-

ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು

ಕಾಮಿತವನದೊಳಗೆ ದ್ರೌಪದಿಗ್ಹೇಳಿದನು

ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ

ಬೇಡಿದಿಷ್ಟಾರ್ಥಗಳ ಕೊಡುವೋಳು

ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ

ಮಂಗಳಾಂಗಿಯರು ಬ್ಯಾಗ 11

***