Showing posts with label ವೆಂಕಟೇಶನೆಯೆನ್ನ ಪಾಲೀಪುದೂ uragadrivasa vittala ಅಂಕಿತ ಪದ tandevenkatesha vittala dasa stutih. Show all posts
Showing posts with label ವೆಂಕಟೇಶನೆಯೆನ್ನ ಪಾಲೀಪುದೂ uragadrivasa vittala ಅಂಕಿತ ಪದ tandevenkatesha vittala dasa stutih. Show all posts

Sunday 1 August 2021

ವೆಂಕಟೇಶನೆಯೆನ್ನ ಪಾಲೀಪುದೂ ankita uragadrivasa vittala ಅಂಕಿತ ಪದ tandevenkatesha vittala dasa stutih

" ಅಂಕಿತ ಪದ "

ರಾಗ : ಬಿಲಹರಿ  ತಾಳ : ಆದಿ

ವೆಂಕಟೇಶನೆಯೆನ್ನ ಪಾಲೀಪುದೂ ।
ಕಿಂಕರಾರ್ತಿಹರಣ ।। ಪಲ್ಲವಿ ।।

ಪಂಕಜೋದ್ಭವ ಹರ ವಂದ್ಯ ಪರಾತ್ಪರ ।
ನಿಖಿಳಾಗಮ ವಿಜ್ಞೇಯ ಲೋಕೊದ್ಧಾರ ।। ಅ ಪ ।।

ಇಂದು ಮಂದವಾರ ಚೈತ್ರ ವತ್ಸರ ಬಹುಧಾನ್ಯ ।
ಸಂದ ಶುಕ್ಲ ದ್ವಿತೀಯಾ ಸಂಧ್ಯಾಸವನ ।
ಬಂದು ಕೀರ್ತನ ಸೇವಾ ನಂತರದಿ ಯೆನ್ನ ।।
ಮಂದಿರದೊಳು ಸುಪ್ತಾವಸ್ಥೆಯೊಳಿರಲಾಗ ।
ಅಂದು ಕಡೆಯ ಯಾಮದಿ ತೈಜಸನೆ ನೀ । ಹಂಸ ।
ರಿಂದೆನ್ನ ಮನ ಸಂಶಯ ಹರಿಸಿದೆ ।। ಚರಣ ।।

ಅರುಣಾ ಉದಯದೊಳೆದ್ದೂ ಮುದದೀ ।
ಕರುಣಾ ಶುದ್ಧನಾಗೀ ।
ತ್ವರಿತದಿ ಸ್ವಪ್ನವಿವರಕಾಗಿ ಹರುಷದೀ ।
ಹರಿ ಪೂಜಾ ಕಾಲದಿ ಅರುಹಿದಾ ।
ಮರುತ ಮೂರುತಿಯಾ ।।
ಉರುತರ ಚರಿತೆಯ ।
ನಿರುತ ಪಾಡಿ ಪೊಗಳಲಾಣತಿಯಿತ್ತ ।
ತಿರುಪತಿ ಶೈಲಾಧಿಪ ಮಮ ಕುಲ ಸ್ವಾಮೀ ।। ಚರಣ ।।

ಸಾರಸದ್ಭಕುತಿಯನೂ ಕರುಣಿಸು ।    
ಹರಿ ಗುರು ಸೇವೆಯನೂ ।
ಸಾರ್ವಸದ್ಯೋಗ್ಯ ಸಾಧನವನ್ನೂ ।
ಪರಮಹಂಸರು ಇತ್ತ ।।
ಶ್ರೀ ವೆಂಕಟೇಶಾಂಕಿತ ಮೂರುತಿಯನೆ ನುತಿಪ ।
ನಿಜ ಹರಿ ಭಕುತರ ಚರಣ ಕಮಲ -
ಬಂಡುಣಿಯೆಂದೆನಿಸಿ ಇವನ ।
ನಿರುತ ರಕ್ಷಿಸೋ ಉರಗಾದ್ರಿವಾಸವಿಠ್ಠಲ ।। ಚರಣ ।।
****

ವೇಂಕಟೇಶನೆ ಎನ್ನಾ ಪಾಲಿಪುದೊ
ಕಿಂಕರಾರ್ತಿ ಹರಣ ಪ

ಪಂಕಜೋದ್ಭವ ಹರ ವಂದ್ಯ ಪರಾತ್ಪರ
ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ

ಇಂದು ಮಂದವಾರ ಚೈತ್ರ ವತ್ಸರ ಬ-
ಹುಧಾನ್ಯ ಸಂದ ಶುಕ್ಲ ದ್ವಿತೀಯ
ಸಂಧ್ಯಾಸವನ ಬಂದು ಕೀರ್ತನ ಸೇವಾ-
ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ
ಯಿಂದಿರಲಾಗ ಅಂದು ಕಡೆಯ ಯಾ-
ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1

ಅರುಣೋದಯಲೆದ್ದು ಮುದದಿ
ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ-
ವರಕಾಗಿ ಹರುಷದಿ ಹರಿಪೂಜಾಕಾಲದಿ
ಅರುಹಿದ ಮರುತ ಮೂರುತಿಯಾ
ಉರುತರ ಚರಿತೆಯ ನಿರುತಪೊಗಳಲಾಯತವಿತ್ತ
ತಿರುಪತಿಶೈಲಾಧಿಪ ಮಮಕುಲಸ್ವಾಮಿ2

ಸಾರ ಸದ್ದ್ಭಕುತಿಯನು ಕರುಣಿಸೋ
ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು
ಪರಮಹಂಸರು ಇತ್ತವೇಂಕಟೇಶಾಂಕಿತ
ಮೂರುತಿಯ ನುತಿಪಾ ನಿಜ ಹರಿಭಕುತರ
ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
****

Tande Venkatesha Vittala Dasaru

ಹೆಸರು : ಪರಮಪೂಜ್ಯ ಶ್ರೀ ಆರ್ ರಾಮಚಂದ್ರರಾಯರು

ಕಾಲ : ಕ್ರಿ ಶ 1907 - 1982
ಅಂಕೀತೋಪದೇಶ : by ಶ್ರೀ ಉರಗಾದ್ರಿವಾಸವಿಠ್ಠಲರು
ಅಂಕಿತ :  ಶ್ರೀ ತಂದೆ ವೇಂಕಟೇಶ ವಿಠ್ಠಲ
" ಅಂಕಿತ ಪದ "
***