Showing posts with label ವ್ಯಾಸರಾಯರ ಬೇಸರದೇ ನೆನೆ pranesha vittala VYASARAYARA BESARADE NENE VYASARAJA STUTIH. Show all posts
Showing posts with label ವ್ಯಾಸರಾಯರ ಬೇಸರದೇ ನೆನೆ pranesha vittala VYASARAYARA BESARADE NENE VYASARAJA STUTIH. Show all posts

Friday 27 December 2019

ವ್ಯಾಸರಾಯರ ಬೇಸರದೇ ನೆನೆ ankita pranesha vittala VYASARAYARA BESARADE NENE VYASARAJA STUTIH

Audio by Mrs. Nandini Sripad

ಶ್ರೀ ಪ್ರಾಣೇಶವಿಠಲದಾಸರ ಕೃತಿ 

 ರಾಗ ಕಾಪಿ          ಖಂಡಛಾಪುತಾಳ 

ವ್ಯಾಸರಾಯರ ಬೇಸರದೆ ನೆನೆದಾಸೆ ಪೂರೈಸಿಕೊಂಬೆ ನಾ॥ ಪ ॥

ದಾಸರಾಯರಿಗಾಸು ಮಂತ್ರೋಪದೇಶ ಕರುಣದಿ ಮಾಡಿದ ।
ದೇಶದೊಳಗೆ ವಿಶೇಷ ಮೆರೆದು ಅಶೇಷ ಜನರುದ್ಧರಿಸಿದ ॥ 1 ॥

ವಾಸುದೇವನ ದ್ವೇಷಿಗಳ ಅನಾಯಾಸದಿಂ ನಿರಾಕರಿಸಿದ ।
ದಾಸವರ್ಗವ ಪೋಷಿಸಲು ನಿರ್ದೋಷ ಗ್ರಂಥ ವಿರಚಿಸಿದ ॥ 2 ॥

ಭಾಸುರ ಚರಿತ ಭೇಶಭಾಸ ಸುಕಾಷಾಯಾಂಬರ ಧರಿಸಿದ ।
ವೀಶವಾಹನ ಕ್ಲೇಶಹ ಪ್ರಾಣೇಶವಿಠ್ಠಲ ನೊಲಿಸಿದ ॥ 3 ॥
**********


ವ್ಯಾಸರಾಯರ ಬೇಸರದೇ ನೆನೆ |ದಾಸೆ ಪೂರ್ತಿಸಿಕೊಂಬೆ ನಾಂ ||pa||

ದಾಸರಾಯರಿಗಾಸು ಮಂತ್ರೋಪ |ದೇಶ ಕರುಣದಿ ಮಾಡಿದ ||
ದೇಶದೊಳಗೆ ವಿಶೇಷ ಮೆರೆದು ಅ |ಶೇಷ ಜನರುದ್ಧರಿಸಿದ ||1||

ವಾಸುದೇವನ ದ್ವೇಷಿಗಳ ಅನಾ |ಯಾಸದಿಂ ನೀ ಕರಿಸಿದ ||
ದಾಸ ವರ್ಗವ ಪೋಷಿಸಲು ನಿ |ರ್ದೋಷ ಗ್ರಂಥ ವಿರಚಿಸಿದ ||2||

ಭಾಸುರ ಚರಿತ ಭೇಶ ಭಾಸ ಸು |ಕಾಷಾಯಾಂಬರ ಧರಿಸಿದ ||
ವೀಶವಾಹನ ಕ್ಲೇಶಹ ಪ್ರಾ |ಣೇಶ ವಿಠ್ಠಲನೊಲಿಸಿದ ||3||
******