ತಾಯಿ ಮಹಾಲಕ್ಷ್ಮೀದೇವಿಯರು ಕೊಲ್ಹಾಪುರಕ್ಕೆ ಬಂದ ಚಂದವನ್ನು ವಿವರಿಸುವ ಶ್ರೀ ಗುರುಪ್ರಾಣೇಶವಿಠಲದಾಸಾರ್ಯರ ರಚನೆಯ ಪದ
ಮಂಗಳಂ ಮಂಗಳಂ
ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ ॥
ಭೃಗುಕಾಲಿಲೊದಿಯಾಲು ಅಗಲಿ ಬಂದಳು ಎಂಬೊ
ಬಗೆತೋರಿ ಮೋಹಿಸಿ ಇಗಡ ಜನರನಾ ॥
ಪರಮ ಧಾರ್ಮಿಕನಾದ ವರನಾರಾಯಣ ಋಷಿ-
ಗೊರವಿತ್ತು ನಡೆತಂದೆ ಮೆರೆವ ಸನ್ನತಿಗೆ ॥
ಕೋಲಾಸುರನ ಕೊಂದು ಪಾಲಿಸಿ ಪುರವನ್ನು
ಶೀಲೆ ಚಂದ್ರಾದೇವಿ ಆಳಿದ ಗೊಲಿದೇ ॥
ಆತ ತಕ್ಷಣದಲ್ಲಿ ಶ್ವೇತುರಾಯನ ಕೊಂದು
ಮಾತು ಲಾಲಿಸಿ ಅವನ ಪಾತಕ ಕಳದೇ ॥
ಗುರುಪ್ರಾಣೇಶಾವಿಠಲಾ ಇರುವ ನೀನಿದ್ದಲ್ಲೀ
ಎರವಿಲ್ಲೀಮಾತಿಗೆ ಸುರರ ಸಮ್ಮತವೂ ॥
***