Showing posts with label ಮಂಗಳಂ ಮಂಗಳಂ ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ gurupranesha vittala. Show all posts
Showing posts with label ಮಂಗಳಂ ಮಂಗಳಂ ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ gurupranesha vittala. Show all posts

Thursday, 11 March 2021

ಮಂಗಳಂ ಮಂಗಳಂ ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ ankita gurupranesha vittala

 ತಾಯಿ ಮಹಾಲಕ್ಷ್ಮೀದೇವಿಯರು ಕೊಲ್ಹಾಪುರಕ್ಕೆ ಬಂದ ಚಂದವನ್ನು ವಿವರಿಸುವ ಶ್ರೀ ಗುರುಪ್ರಾಣೇಶವಿಠಲದಾಸಾರ್ಯರ ರಚನೆಯ ಪದ


ಮಂಗಳಂ ಮಂಗಳಂ 

ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ ॥


ಭೃಗುಕಾಲಿಲೊದಿಯಾಲು ಅಗಲಿ ಬಂದಳು ಎಂಬೊ

ಬಗೆತೋರಿ ಮೋಹಿಸಿ ಇಗಡ ಜನರನಾ ॥


ಪರಮ ಧಾರ್ಮಿಕನಾದ ವರನಾರಾಯಣ ಋಷಿ-

ಗೊರವಿತ್ತು ನಡೆತಂದೆ ಮೆರೆವ ಸನ್ನತಿಗೆ ॥


ಕೋಲಾಸುರನ ಕೊಂದು ಪಾಲಿಸಿ ಪುರವನ್ನು

ಶೀಲೆ ಚಂದ್ರಾದೇವಿ ಆಳಿದ ಗೊಲಿದೇ ॥


ಆತ ತಕ್ಷಣದಲ್ಲಿ ಶ್ವೇತುರಾಯನ ಕೊಂದು

ಮಾತು ಲಾಲಿಸಿ ಅವನ ಪಾತಕ ಕಳದೇ ॥


ಗುರುಪ್ರಾಣೇಶಾವಿಠಲಾ ಇರುವ ನೀನಿದ್ದಲ್ಲೀ

ಎರವಿಲ್ಲೀಮಾತಿಗೆ ಸುರರ ಸಮ್ಮತವೂ ॥

***