Showing posts with label ಸ್ಮರಿಸೊ ಸಂತತ ಮಾನವ ಗುರು karpara narasimha vishnu teertha stutih. Show all posts
Showing posts with label ಸ್ಮರಿಸೊ ಸಂತತ ಮಾನವ ಗುರು karpara narasimha vishnu teertha stutih. Show all posts

Friday 27 December 2019

ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥ ankita karpara narahari vishnu teertha stutih

Song on Vishnu Teertha
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ ||pa||

ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ
ಕರುಣದಿ ಜನಿಸಿ
ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ
ತರಿದ ಭೀಷ್ಠೆಯ ಗರಿವರಂಘ್ರಿಯ ||a.pa||

ಪುರಹರಾಂಶಜರೆನಿಸಿ ಬಾಳಾಚಾರ್ಯರ
ತರುಣಿ ಗರ್ಭದಿ ಜನಿಸಿ
ಮಳಖೇಡ ಮಂದಿರ ಗುರುನಾಮದಲಿ ಕರಿಸಿ
ವಟು ವ್ರತವ ಧರಿಸಿ
ಗುರುಕುಲದಿ ರಾಮಾರ್ಯರಿಂದಲಿ ಅರಿತು
ವೇದವೇದಾಂತ ಶಾಸ್ತ್ರವ
ಗುರುಸುತನ ಮಹಜ್ವರ ಹರಣ ನರಹರಿಯ
ಮಂತ್ರವ ಜಪಿಸಿದವರನು ||1||

ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು
ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು
ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ
ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ
ವರವಧೂ ಮಣಿಸಹಿತ ವಿಭವದಿ ಸಿರಿಯ
ತನದೋಳ್ಮೆರೆವರಂಘ್ರಿಯ||2||

ಮಂಚದೊಳ್ ಸುಖತಲ್ಪದಿ ಪದವತ್ತು
ತಿರೆ ಮೃಗಲಾಂಚನ ಮುಖಸಹಿತದಿ
ಪವಡಿಸಿರಲೊಂದಿನ ಕಿಂಚಿದ್ದೇಹಾಸ್ವಾಸ್ಥ್ಯದಿ
ಹರಿದಾಸ ಪಾಡಿದ
ಮಂಚಬಾರದು ಮಡದಿಬಾರಳು ಮುಂಚೆ
ಮಾಡಿರಿ ಧರ್ಮವೆಂಬುವ
ಕಿಂಚಗೀತೆಯ ಕೇಳಿದೊಡನೆ ಪ್ರಪಂಚ
ಸುಖವನು ತ್ಯಜಿಸಿಪೊರಟರ ||3||

ಫಣಿಯ ರೂಪವ ನೋಡುತ್ತ ಮಾರ್ಗದೊಳು
ಚರಿಸುತ ಗಮನ
ನಿರೋಧಿಸುತ ಯೋಚನೆಯ ಮಾಡುತಯಿರಲು
ಸ್ವಪ್ನದಿ ಸೂಚಿತ
ಶಿಷ್ಯರ ಸಮೇತ ಅನವರತ ಶ್ರೀ ಮತ್ಸುಧಾ
ಪ್ರವಚನ ವಿಜಯ ಮುನಿ
ಮನಕೆ ಸಮ್ಮತವೆನುತ ಮುನಿ ವೃತ್ತಿಯಲಿ ಸತಿಸಹ
ಮುನಿಯವಲ್ಲಿ ಯೊಳಿರುವ ಗುರುಗಳ ||4||

ಸಾರ ಗ್ರಂಥಗಳ ರಚಿಸಿ ಸತ್ಯವರತೀರ್ಥ
ಕುಮಾರಕರೆಂದೆನಿಸಿ ಸುಕ್ಷೇತ್ರ
ಮೋದನೂರೊಳು ತನುವಿರಿಸಿ ಹರಿಪದವ
ಧ್ಯಾನಿಸಿ ಸೇರಿದವರ ಘ
ದೂರ ಮಾಡುವ ಚಾರು ಕೃಷ್ಣಾತೀರ
‘ಕಾರ್ಪರ ನಾರಶಿಂಹ’ ವಲಿಮೆ ಪಡೆದ
ಅಪಾರ ಮಹಿಮರ ಚಾರು ಚರಣವ||5||
********