Showing posts with label ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆ kamalanabha vittala. Show all posts
Showing posts with label ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆ kamalanabha vittala. Show all posts

Thursday 5 August 2021

ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆ ankita kamalanabha vittala

 ..

kruti by Nidaguruki Jeevubai


ವಂದಿಪೆ ತವ ಪಾದಕೆ ಭವದ

ಬಂಧನ ಕಳೆವುದಕೆ ಪ


ಹಿಂದೆ ಮುಂದೆ ಎಂದೆಂದಿಗು ಎನ್ನಯ

ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ


ಅಪರಾಧಿಯು ಎಂದು ತಿಳಿದರು

ಗುಪಿತದಿ ಸಲಹುವದು

ಅಪಮೃತ್ಯುವು ಪರಿಹಾರಕೆ ನಿಮ್ಮಯ

ಉಪದೇಶದ ಮಂತ್ರವೆ ಪರಮೌಷಧಿ 1


ಕಾಯಕ್ಲೇಶದಿಂದ ಮನಸಿನ

ಹೇಯ ವ್ಯಥೆಗಳಿಂದ

ಕಾಯಜ ಪಿತನಂಘ್ರಿಯ ಸೇವಿಸದಲೆ

ಆಯಾಸದಿ ಮನ ಕಳವಳಗೊಳುತಿದೆ 2


ದೇಹದಿ ಬಾಂಧವರು ಅವರು

ಆರು ಮಂದಿ ಇಹರು

ಮಾಯಾ ಪಾಶಾದಿ ಬಂಧಕ ಪಡಿಸುತ

ಹಾಯಲೀಸರೊ ಹರಿ ಅಂಘ್ರಿಗಳಲಿ 3


ಆರಿಗುಸುರಲೇನು ಮಾಡಿದ

ಕಾಂiÀರ್iವು ಮುಂದಿನ್ನೂ

ಆನಂದಮಯ ವಿಠ್ಠಲದಾಸರ ಕೂಡಿ

ಆದರುಸುವುದಿನ್ನೂ ಮುನ್ನೂ4


ಕಮಲನಾಭ ವಿಠ್ಠಲನೊಲುಮೆಯು

ಸುಲಭದಿ ಪಡೆವುದಕೆ

ನಮಿಸಿ ತಂದೆ ವೆಂಕಟೇಶ ವಿಠ್ಠಲ ದಾ-

ಸರಿಗೆ ನಮಿಸಿ ಬೇಡಿ ಅನುದಿನ ಪ್ರಾರ್ಥಿಸುತ5

***