Thursday 5 August 2021

ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆ ankita kamalanabha vittala

 ..

kruti by Nidaguruki Jeevubai


ವಂದಿಪೆ ತವ ಪಾದಕೆ ಭವದ

ಬಂಧನ ಕಳೆವುದಕೆ ಪ


ಹಿಂದೆ ಮುಂದೆ ಎಂದೆಂದಿಗು ಎನ್ನಯ

ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ


ಅಪರಾಧಿಯು ಎಂದು ತಿಳಿದರು

ಗುಪಿತದಿ ಸಲಹುವದು

ಅಪಮೃತ್ಯುವು ಪರಿಹಾರಕೆ ನಿಮ್ಮಯ

ಉಪದೇಶದ ಮಂತ್ರವೆ ಪರಮೌಷಧಿ 1


ಕಾಯಕ್ಲೇಶದಿಂದ ಮನಸಿನ

ಹೇಯ ವ್ಯಥೆಗಳಿಂದ

ಕಾಯಜ ಪಿತನಂಘ್ರಿಯ ಸೇವಿಸದಲೆ

ಆಯಾಸದಿ ಮನ ಕಳವಳಗೊಳುತಿದೆ 2


ದೇಹದಿ ಬಾಂಧವರು ಅವರು

ಆರು ಮಂದಿ ಇಹರು

ಮಾಯಾ ಪಾಶಾದಿ ಬಂಧಕ ಪಡಿಸುತ

ಹಾಯಲೀಸರೊ ಹರಿ ಅಂಘ್ರಿಗಳಲಿ 3


ಆರಿಗುಸುರಲೇನು ಮಾಡಿದ

ಕಾಂiÀರ್iವು ಮುಂದಿನ್ನೂ

ಆನಂದಮಯ ವಿಠ್ಠಲದಾಸರ ಕೂಡಿ

ಆದರುಸುವುದಿನ್ನೂ ಮುನ್ನೂ4


ಕಮಲನಾಭ ವಿಠ್ಠಲನೊಲುಮೆಯು

ಸುಲಭದಿ ಪಡೆವುದಕೆ

ನಮಿಸಿ ತಂದೆ ವೆಂಕಟೇಶ ವಿಠ್ಠಲ ದಾ-

ಸರಿಗೆ ನಮಿಸಿ ಬೇಡಿ ಅನುದಿನ ಪ್ರಾರ್ಥಿಸುತ5

***


No comments:

Post a Comment