Showing posts with label ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ venkatakrishna. Show all posts
Showing posts with label ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ venkatakrishna. Show all posts

Tuesday 1 June 2021

ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ ankita venkatakrishna

by yadugiriyamma  

ಮಂಗಳಂ ಶ್ರೀಕೃಷ್ಣವೇಣಿಗೆ

ಜಯ ಮಂಗಳಂ ಜಗದುದ್ಧಾರಳಿಗೆ ಪ

ರಂಗನ ಪಾದದಿ ಗಂಗೆ ಉದ್ಧವಿಸಲು

ಅಂಗದಿಂದಾಗಲೆ ತಾನುದಿಸಿ ಬಂದು

ಗಂಗಾಧರನ ದೇಹದಿ ಬಂದು ವೇಣಿಯ

ಸಂಗಮವಾಗಿ ಬಂದ ದೇವಿಗೆ ಅ.ಪ

ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ

ಕನ್ಯಾರಾಶಿಗೆ ಗುರು ಬಂದಿರಲು

ಒಂದುಸಂವತ್ಸರ ವಾಸವ ಮಾಡಲು

ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ 1

ಇಂದ್ರನ ಪಾಪವ ನದಿಗಳಿಗೆ ಬಿಡಲು

ನಿಂದಿತರಾಗಿ ದುಃಖಿಸುತ ಪೋಗಿ

ಇಂದಿರೆರಮಣನ ಆಜ್ಞೆಯಿಂದಲೆ

ಬಂದ ಕೃಷ್ಣವೇಣಿಗೆ ಗಂಗಾದೇವಿಗೆ 2

ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು

ನೇಮದಿಂ ಬಾಗಿನಂಗಳ ಕೊಡಲು

ಮಾನಿನಿಯರೆಲ್ಲ ಮೌನದಿಂ ಕೊಡಲು

ಮಾಂಗಲ್ಯವಿತ್ತು ಸಲುಹುವ ದೇವಿಗೆ 3

ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು

ಋಷಿಗಳು ಪಾಷಾಣವಾಗಿರಲು

ನಕ್ರ ಮೊದಲಾದ ಜಂತುಗಳೆಲ್ಲ

ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು 4

ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ

ನಂದನ ನಳ ಹರಿಶ್ಚಂದ್ರರೆಲ್ಲ

ಬಂದು ಸ್ನಾನವ ಮಾಡೆ ಅವರ ಪಾಪಗಳ ಆ

ನಂದದಿಂ ಕಳೆದ ಕೃಷ್ಣವೇಣಿಗೆ 5

ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ

ದಲಾದ ಮಹಾನದಿಗಳನು ಕೂಡಿ

[ಒಲವಿ]ಂದ ಸ್ನಾನಪಾನವ ಮಾಡಿದವರಿಗೆ

[ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ 6

****