Showing posts with label ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯಮೂರುತಿ shreenidhi vittala SURYANTARGATA NARAYANA PAHI ARYA MOORUTI. Show all posts
Showing posts with label ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯಮೂರುತಿ shreenidhi vittala SURYANTARGATA NARAYANA PAHI ARYA MOORUTI. Show all posts

Monday 1 February 2021

ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯಮೂರುತಿ ankita shreenidhi vittala SURYANTARGATA NARAYANA PAHI ARYA MOORUTI

 ರಾಗ ಪೂರ್ವಿಕಲ್ಯಾಣಿ   ಆದಿತಾಳ 
Audio by Mrs. Nandini Sripad

ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ -ಶ್ರೀನಿಧಿವಿಠಲ ಅಂಕಿತ
(ಶ್ರೀನಿಧಿವಿಠಲ ಅಂಕಿತರು - ಶ್ರೀವಿಜಯದಾಸರ ಶಿಷ್ಯರಾದ ಶ್ರೀವೇಣುಗೋಪಾಲದಾಸರ ಶಿಷ್ಯಪೀಳಿಗೆಯಲ್ಲಿ ಶ್ರೀ ತಂದೆಶ್ರೀಪತಿವಿಟ್ಠಲ ದಾಸರ ಶಿಷ್ಯರು)


ಸೂರ್ಯಾಂತರ್ಗತ ನಾರಾಯಣ । ಪಾಹಿ
ಆರ್ಯಮೂರುತಿ ಪಂಚಪ್ರಾಣ ॥ ಪ ॥
ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದು
ವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ ॥

ದ್ರುಪದನ ಸುತೆ ನಿನ್ನ ಕರೆಯೆ । ಅಂದು
ಕೃಪಣವತ್ಸಲ ಶೀರೆ ಮಳೆಯೇ ।
ಅಪರಿಮಿತವು ನೀರ ಸುರಿಯೆ । ಸ್ವಾಮಿ
ಕುಪಿತ ದೈತ್ಯರ ಗರ್ವ ಮುರಿಯೇ ॥
ಜಪಿಸೋ ಜನರ ವಿಪತ್ತು ಕಳೆದೆ 
ಈ ಪರಿಯ ದೇವರನೆಲ್ಲಿ ಕಾಣೆನೊ
ತಪನಕೋಟಿಪ್ರಕಾಶ ಬಲ ಉಳ್ಳ
ಕಪಿಲರೂಪನೆ ಜ್ಞಾನದಾಯಕ ॥ 1 ॥

ಹೃದಯ ಮಂಟಪದೊಳಗೆಲ್ಲ । ಪ್ರಾಣ -
ದದುಭುತ ಮಹಿಮೆಯ ಬಲ್ಲ
ಸದಮಲನಾಗಿ ತಾನೆಲ್ಲ । ಕಾರ್ಯ
ಮುದದಿ ಮಾಡಿಸುವ ಶ್ರೀನಲ್ಲ ॥
ಹದುಳ ಕೊಡುತಲಿ ಬದಿಲಿ ತಾನಿದ್ದು
ಒದಗಿ ನಿನಗೆನ್ನ ಮದುವೆ ಮಾಡಿದ
ಪದುಮಜಾಂಡೋದರ ಈ ಸುದತಿಯ
ಮುದದಿ ರಮಿಸೆಂದು ಒದಗಿ ಬೇಡುವೆ ॥ 2 ॥

ಎನ್ನ ಬಿನ್ನಪವನ್ನು ಕೇಳೊ । ಪ್ರಿಯ
ಮನ್ನಿಸಿ ನೋಡೊ ದಯಾಳೋ
ಹೆಣ್ಣಬಲೆಯ ಮಾತು ಕೇಳೋ । ನಾನು
ನಿನ್ನವಳಲ್ಲವೇನು ಹೇಳೋ ॥
ನಿನ್ನ ಮನದನುಮಾನ ತಿಳಿಯಿತು
ಕನ್ಯಾವಸ್ಥೆಯು ಎನ್ನದೆನ್ನದೆ
ಚೆನ್ನ ಶ್ರೀನಿಧಿವಿಟ್ಠಲ ಪ್ರಾಯದ
ಕನ್ಯೆ ಇವಳನು ದೇವ ಕೂಡಿಕೊ ॥ 3 ॥
****

kruti by ಶ್ರೀನಿಧಿವಿಠಲರು shreenidhi vittalaru

ಸೂರ್ಯಾಂತರ್ಗತ ನಾರಾಯಣ ಪಾಹಿ

ಆರ್ಯ ಮಾರುತಿ ಪಂಚಪ್ರಾಣ ಪ


ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು

ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ.


ದ್ರುಪದನ ಸುತೆ ನಿನ್ನ ಕರೆಯೆ ಅಂದು

ಕೃಪಣ ವತ್ಸಲ ಶೀರೆ ಮಳೆಯೇ

ಅಪರಿಮಿತವು ನೀರ ಸುರಿಯೆ ಸ್ವಾಮಿ

ಕುಪಿತ ದೈತ್ಯರ ಗರ್ವ ಮುರಿಯೇ

ಜನಸೋ ಜನರ ವಿಪತ್ತು ಕಳೆದೆ

ಈ ಪರಿಯ ದೇವರನೆಲ್ಲಿ ಕಾಣೆನೊ

ತಪನಕೋಟ ಪ್ರಕಾಶ ಬಲ ಉಳ್ಳ

ಕಪಿಲರೂಪನೆ  ಜ್ಞಾನದಾಯಕ 1


ಹೃದಯ ಮಂಟಪದೊಳಗೆಲ್ಲ ಪ್ರಾಣ-

ದದುಭುತ ಮಹಿಮೆಯ ಬಲ್ಲ

ಸದಮಲನಾಗಿ ತಾವೆಲ್ಲ ಕಾರ್ಯ

ಮುದದಿ ಮಾಡಿಸುವ ಶ್ರೀನಲ್ಲ

ಹದುಳ ಕೊಡುತಲಿ ಬದಿಲಿ ತಾನಿದ್ದು

ಒದಗಿ ನಿನಗೆಲ್ಲ ಮದುವೆ ಮಾಡಿದ

ಪದುಮಜಾಂಡೋದರ ಸುದತಿಯ

ಮುದದಿ ರಮಿಸೆಂದು ಒದಗಿ ಬೇಡುವೆ 2


ಎನ್ನ ಬಿನ್ನಪವನ್ನು ಕೇಳೊ ಪ್ರಿಯ

ಮನ್ನಿಸಿ ನೋಡೊ ದಯಾಳೋ

ಹೆಣ್ಣಬಲೆಯ ಮಾತು ಕೇಳೂ ನಾನು

ನಿನ್ನವಳಲ್ಲವೇನು ಹೇಳೋ

ನಿನ್ನ ಮನದನುಮಾನ ತಿಳಿಯಿತು

ಕನ್ಯಾವಸ್ಥೆಯು ಎನ್ನದೆನ್ನದೆ

ಚೆನ್ನ ಶ್ರೀನಿಧಿವಿಠಲ ಪ್ರಾಯದ

ಕನ್ನೆ ಇವಳನು ದೇವ ಕೂಡಿಕೊ 3

***

ಈ ದೇವರನಾಮದಲ್ಲಿ , ಪರಮಾತ್ಮನನ್ನು ಪುರುಷ , ಮನಸ್ಸನ್ನು ಹೆಂಡತಿ ಎಂದು ದಾಸರಾಯರು ಸಂಬೋಧಿಸಿದ್ದಾರೆ. ನಮಗೆ ಸಾಮರ್ಥಿಕೆ ಬರುವುದೇ ಪರಮಾತ್ಮನಿಂದ (ಯಜಮಾನನಿಂದ)  ಆದ ಕಾರಣ ಮನಸ್ಸು ಹೆಂಡತಿ.


1ನೇ ನುಡಿಯಲ್ಲಿ ಭಕ್ತರು ಕರೆದಾಗಲೆಲ್ಲ ಪರಮಾತ್ಮ ಬಂದು ಒದಗಿರುವನು ಎಂಬ ವಿಷಯವನ್ನು ಹೇಳಿದ್ದಾರೆ.


2ನೇ ನುಡಿ - 

ಹದುಳ ಕೊಡುತಲಿ ಬದಿಲಿ ತಾನಿದ್ದು ।

ಒದಗಿ ನಿನಗೆನ್ನ ಮದುವೆ ಮಾಡಿದ ।


- ಕ್ಷೇಮ(ಹದುಳ)ದಿಂದ ನನ್ನ ಬದಿಯಲ್ಲೇ ಇದ್ದು , ದುರ್ವಿಷಯದೊಳು ಮಗ್ನವಾಗಿರುವ ನನ್ನ ಮನಸ್ಸನ್ನು ನಿನ್ನ ಪಾದಪದ್ಮಗಳಲ್ಲಿ ಭಕ್ತಿಪೂರ್ವಕದಿಂದ ಸ್ಥಿರ(ಮದುವೆ)ಗೊಳಿಸುವಂತೆ ಮಾಡು ಎಂದು ಬೇಡುತ್ತಾರೆ. ಪದುಮಜಾಂಡೋದರ(ಪರಮಾತ್ಮ)......

ಹೀಗಾಗಿ , ಮನಸ್ಸು ಹೆಂಡತಿ ಎನಿಸಿಕೊಳ್ಳುತ್ತದೆ. ಪರಮಾತ್ಮನೇ ಗಂಡ. ನನ್ನ ಮನಸ್ಸು ಸದಾ ಪರಮಾತ್ಮನ ಪಾದಾರವಿಂದಗಳಲ್ಲಿ ಇಟ್ಟಿರುವುದರಿಂದ ಸುದತಿ(ಪತಿವ್ರತೆ) ಎನಿಸಿಕೊಳ್ಳುತ್ತದೆ.


3ನೇ ನುಡಿ -

ಪ್ರಿಯ ಅಂತ ಗಂಡ(ಪರಮಾತ್ಮ)ನಿಗೆ ಸಂಬೋಧನೆ.

ನಿನ್ನವಳಲ್ಲವೇನೋ ಹೇಳೋ - ನಾನು ಮನಸ್ಸನ್ನು ನಿನ್ನಂಘ್ರಿಯಲ್ಲಿರಿಸಿದವಳಲ್ಲವೇ.....


ನಿನ್ನ ಮನದನುಮಾನ ತಿಳಿಯಿತು

ಕನ್ಯಾವಸ್ಥೆಯು ಎನ್ನದೆನ್ನದೆ.......

ನನ್ನ ಮನಸ್ಸು ಕನ್ಯಾವಸ್ಥೆ ಅಂದರೆ ನಾನು ನಿನಗೆ ಮೀಸಲಿಲ್ಲವೆಂದು ನಿನ್ನ ಅನುಮಾನವೆಂದು ನನಗೆ ತಿಳಿಯಿತು...


ಪ್ರಾಯದ ಕನ್ಯೆ ಇವಳನು ಕೂಡಿಕೋ.....

ಮನಸ್ಸನ್ನು ಬೇರೆಯವರಲ್ಲಿ ಸಮರ್ಪಿಸಿಲ್ಲವಾದ್ದರಿಂದ ಮನಸ್ಸೆಂಬ ಈ ಪ್ರಾಯದ ಕನ್ಯೆಯನ್ನು ಕೂಡಿಕೊ - ಅಂದರೆ ಮನಸ್ಸನ್ನು ನಿನ್ನ ಪಾದಾರವಿಂದದಲ್ಲಿ ಸ್ಥಿರಗೊಳಿಸುವಂತೆ ಮಾಡು ದೇವಾ.

****