..
kruti by Nidaguruki Jeevubai
ಸ್ವೀಕರಿಸೈ ಕರುಣಾಕರ ಶ್ರೀವರ
ಲೋಕವಂದಿತ ಪ್ರಭುವೆ ll ಪ ll
ಮಾಕಮಲಾಸನ ನಾಕಪಾಲವಂದ್ಯ
ಮಾತುಳಾಂತಕ ಮಧುಸೂದನ ಶ್ರೀಹರಿ ll ಅ ಪ ll
ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ
ಮೊದಲಾದ ಫಲಗಳೆಲ್ಲ
ಮಾಧವ ನೀನಿದನಾರೋಗಣೆ ಮಾಡು
ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ ll 1 ll
ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ
ನಾರಾಯಣ ನಿನಗೆ
ಬಾಲೆ ಲಕುಮಿ ಪರಮಾದರದಿಂದಲಿ
ಸೇವೆಗೆ ಪರಮಾನ್ನವನರ್ಪಿಸುವಳು ll 2 ll
ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ
ರ್ಮಲಮನವೆಂಬ ವಸ್ತ್ರವನ್ಹೊದಿಸಿ
ಸನ್ಮತವೆಂಬ ಸಾರಣೆಮಾಡಿ ನಮ್ಮ
ಗುರುಕರುಣದ ರಂಗವಲಿಯನ್ಹಾಕುವೆ ll 3 ll
ನವವಿಧ ಭಕುತಿಯ ನಳನಳಿಸುವ ವೀಳ್ಯ
ಚಲುವ ಶ್ರೀ ಹರಿ ನಿನಗೆ
ಸವಿನಯ ನುಡಿಗಳ ಮಂತ್ರ ಪುಷ್ಪಗಳು
ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ ll 4 ll
ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ
ಮಾರಜನಕ ಹರಿಯೆ
ಕಾರುಣ್ಯಸಾಗರ ಕಮಲನಾಭವಿಟ್ಠಲ ಪಾರುಗಾಣಿಸೊ ಭವಸಾಗರದಿಂದಲಿ ll 5 ll
***
ಸ್ವೀಕರಿಸೈ ಕರುಣಾಕರ ಶ್ರೀವರ
ಲೋಕವಂದಿತ ಪ್ರಭುವೆ ಪ
ಮಾಕಮಲಾಸನ ನಾಕಪಾಲವಂದ್ಯ
ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ
ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ
ಮೊದಲಾದ ಫಲಗಳೆಲ್ಲ
ಮಾಧವ ನೀನಿದನಾರೋಗಣೆ ಮಾಡು
ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1
ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ
ನಾರಾಯಣ ನಿನಗೆ
ಬಾಲೆ ಲಕುಮಿ ಪರಮಾದರದಿಂದಲಿ
ಸೇವೆಗೆ ಪರಮಾನ್ನವನರ್ಪಿಸುವಳು2
ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ-
ರ್ಮಲಮನವೆಂಬ ವಸ್ತ್ರವನ್ಹೊದಿಸಿ
ಸನ್ಮತವೆಂಬ ಸಾರಣೆಮಾಡಿ ನಮ್ಮ
ಗುರುಕರುಣದ ರಂಗವಲಿಯನ್ಹಾಕುವೆ 3
ನವವಿಧ ಭಕುತಿಯ ನಳನಳಿಸುವ ವೀಳ್ಯ
ಚಲುವ ಶ್ರೀ ಹರಿ ನಿನಗೆ
ಸವಿನಯ ನುಡಿಗಳ ಮಂತ್ರ ಪುಷ್ಪಗಳು
ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4
ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ
ಮಾರಜನಕ ಹರಿಯೆ
ಕಾರುಣ್ಯಸಾಗರ ಕಮಲನಾಭ ವಿಠ್ಠಲ
ಪಾರುಗಾಣಿಸೊ ಭವಸಾಗರದಿಂದಲಿ5
***