Showing posts with label ಏನು ಹೇಳಿದರೇನು ಹೀನ ಮನಕ ತಾನು ಎಚ್ಚರ ಹಿಡಿಯ ದನಕಾ gurumahipati. Show all posts
Showing posts with label ಏನು ಹೇಳಿದರೇನು ಹೀನ ಮನಕ ತಾನು ಎಚ್ಚರ ಹಿಡಿಯ ದನಕಾ gurumahipati. Show all posts

Wednesday 1 September 2021

ಏನು ಹೇಳಿದರೇನು ಹೀನ ಮನಕ ತಾನು ಎಚ್ಚರ ಹಿಡಿಯ ದನಕಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ 


ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1 

ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2 

ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3 

ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4 

ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5

***