Showing posts with label ರುದ್ರಾಂತರ್ಗತ ನಾರಸಿಂಹ vijaya vittala suladi ಅಪಮೃತ್ಯು ನಿವಾರಣ ಸುಳಾದಿ RUDRANTARGATA NAARASIMHA APAMRUTYU NIVAARANA SULADI. Show all posts
Showing posts with label ರುದ್ರಾಂತರ್ಗತ ನಾರಸಿಂಹ vijaya vittala suladi ಅಪಮೃತ್ಯು ನಿವಾರಣ ಸುಳಾದಿ RUDRANTARGATA NAARASIMHA APAMRUTYU NIVAARANA SULADI. Show all posts

Sunday 8 December 2019

ರುದ್ರಾಂತರ್ಗತ ನಾರಸಿಂಹ vijaya vittala suladi ಅಪಮೃತ್ಯು ನಿವಾರಣ ಸುಳಾದಿ RUDRANTARGATA NAARASIMHA APAMRUTYU NIVAARANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಅಪಮೃತ್ಯು ನಿವಾರಣ ಸುಳಾದಿ 

( ಜ್ಞಾನಿಗಳಾದ ಶ್ರೀವಿಜಯದಾಸಾರ್ಯರು , ಶ್ರೀಹರಿಯ ಕೃಪೆಗೆ ವಿಶೇಷ ಪಾತ್ರರಾಗಿದ್ದ , ಜ್ವರಪೀಡಿತನಾದ ಛಾಗಿ ಕೇಶವರಾಯರಿಗೆ ಒದಗಲಿರುವ ಅಪಮೃತ್ಯುವಿಗೆ ಕಾರಣವಾದ ವ್ಯಾಧಿಯನ್ನು ಪರಿಹರಿಸಿ , ಅಪಮೃತ್ಯುವು ಬಾರದಂತೆ ಮಾಡೆಂದು ಪ್ರಾರ್ಥಿಸುತ್ತಾ , ಜ್ವರಪರಿಹಾರಕನಾದ ರುದ್ರಾಂತರ್ಗತ ನಾರಸಿಂಹ ನನ್ನು ಭಕ್ತಿಯಿಂದ ಸ್ಮರಿಸುತ್ತಾ ಈ ಸುಳಾದಿಯನ್ನು ರಚಿಸಿದರು. )

 ರಾಗ ಹಿಂದೋಳ 

 ಧ್ರುವತಾಳ 

ರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿ 
ಭದ್ರಫಲದಾಯಕ ದೋಷದೂರ 
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ 
ಅದ್ರಿಧರಿಸಿ ಗೋಕುಲ ಕಾಯ್ದ ವಿನೋದ 
ನಿದ್ರಾರಹಿತ ನಿಗಮವಂದ್ಯ ಭಕ್ತಾನಂದ 
ಉದ್ರೇಕ ತಂದು ಕೊಡುವ ಕಾಮಿತಾರ್ಥ 
ಭದ್ರ ಪ್ರದಾಯಕ ದೋಷದೂರ 
ಮುದ್ರೆ ಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ - 
ಮುದ್ರದೊಳಗೆ ಲೋಲ್ಯಾಡುತಿಪ್ಪ
ಶೂದ್ರಗಾದರು ಆಶಾಭಂಗವಿಲ್ಲವೆಂದು ಮಹ -
ರುದ್ರಾದಿಗಳು ಪೇಳುತಿಪ್ಪರದಕೋ 
ಕದ್ರುವೆ ಮಗ ವಾಸುಕಿಯಾ , ಗರುಡನ್ನ ಉ -
ಪದ್ರವ ಬಿಡಿಸಿ ನೀನೇ ಪಾಲಿಸಿದಂದು 
ಕ್ಷುದ್ರ ದೇವತೆಗಳಿಗೆ ಈ ಪರಿ ಶಕ್ತಿಯುಂಟೆ 
ಛಿದ್ರತನ ಎಣಿಸದಿರು ಪರಮ ಕರುಣೀ
ರೌದ್ರಮೂರುತಿ ಶಾಂತ ವಿಜಯವಿಠ್ಠಲ ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳಗೆ ॥ 1 ॥

 ಮಟ್ಟತಾಳ 

ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ 
ಶರೀರದೊಳಗೆ ನಿಂದು ಸ್ತೋತ್ರ ಮಾಡಿಸಿಕೊಂಡೆ 
ಅರಮರೆಯಿದಕಿಲ್ಲ ಶಾಶ್ವತ ವಾಕ್ಯವೆಂದು
ನೆರೆನಂಬಿದೆ ನಾನು ನಾನಾವಿಧದಲ್ಲಿ 
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ 
ಪರಿಹರವಾಗುವುದು ಸಿದ್ಧವಾಯಿತು ಎನಗೆ
ಪುರಹರನುತಪಾದ ವಿಜಯವಿಠ್ಠಲರೇಯ 
ನರಹರಿ ಎಂದೆನೆ ಭಯಹರವೊ ॥ 2 ॥

 ತ್ರಿವಿಡಿತಾಳ 

ಅನ್ಯಥಾ ಗತಿ ಕಾಣೆ ನಿನ್ನ ಪಾದವಲ್ಲದೆ 
ಇನ್ನು ತ್ರಿಲೋಕದಲಿ ತಿರುವೆಂಗಳ 
ಎನ್ನ ನುಡಿ ಪುಶಿ ಮಾಡಿ ಅಪಹಾಸ ಗೈಸಿದರೆ 
ನಿನ್ನದಲ್ಲವೆ ಕೀರ್ತಿ ಅಪಕೀರ್ತಿಯು 
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು 
ಮುನ್ನ ಪೇಳುವುದೇನು ವಿಸ್ತರಿಸಿ
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು
ನಿನ್ನ ನಂಬಿಹಳಯ್ಯ ನೀನೇ ಬಲ್ಲೈ 
ಧನ್ಯ ಜೀವನದಾಯ ಸುವಾಸತನವಿತ್ತು
ಮನ್ನಿಸುವುದು ಇವಳ ತುತಿಗೆ ಮೆಚ್ಚಿ 
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ 
ಬಿನ್ನಹ ಮಾಡಿದೆ ಇಷ್ಟೇ ಮಾತ್ರ 
ತನ್ನ ಪತಿಯ ಕೂಡ ತಾಂಬೂಲ ಮೆಲುವ ಸಂ -
ಪನ್ನ ಭಾಗ್ಯವ ಕೊಡು ಕಮಲನಾಭ 
ಕನ್ಯೆ ಲಕುಮೀರಮಣ ವಿಜಯವಿಠ್ಠಲರೇಯ 
ಘನ್ನಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ  ॥ 3 ॥

 ಅಟ್ಟತಾಳ 

ಆಳು ಗೆದ್ದರೆ ನೋಡು ಅರಸಗೆ ಜಯಪ್ರದ
ಆಳು ನುಡಿದದ್ದು ಅರಸು ನುಡಿದದ್ದು 
ಏಳಲ ಮಾಡದೆ ಯಾದವ ಕುಲಮಣಿ 
ಪಾಲಿಸಬೇಕಯ್ಯ ಪರಮ ಅನಿಮಿತ್ತ
ಮೂಲಬಾಂಧವ ಭಾಷೆ ಕೊಟ್ಟರೆ ತಪ್ಪದು
ಪಾಲಸಾಗರಶಾಯಿ ವಿಜಯವಿಠ್ಠಲರೇಯ 
ಕಾಲ ಕರ್ಮ ಗುಣ ನಿನಗೆದಿರೆ ಸ್ವಾಮೀ ॥ 4 ॥

 ಆದಿತಾಳ 

ಅರ್ಥವಾದವಲ್ಲ ಮನಸು ಪೂರ್ವಕದಿಂದ
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ
ಸ್ವಾರ್ಥಗೋಸುಗವಾಗಿ ಬೇಡಿಕೊಂಬುವನಲ್ಲ
ವ್ಯರ್ಥವಾಗ ಗೊಡದಿರು ವೇದದಲ್ಲಿ ಪೇಳಿದ
ಅರ್ಥ ಜ್ಞಾನಕ್ಕೆ ನಿತ್ಯ ಎಲ್ಲಿದ್ದರು ದೇವ
ಅರ್ಥಾತುರ ನೀನಲ್ಲ ಸಕಲ ಕಾಲದಲ್ಲಿ, ಸ -
ಮರ್ಥ ನೀನಹುದೋ ಸರ್ವೋತ್ತಮ, ಪರಹಿ -
ತಾರ್ಥವಾಗಲಿ ಇದೆ ಪುಶಿಯಾಗದಂತೆ ಕಾಯೊ 
ಆರ್ತಿವಿದೂರ ನಮ್ಮ ವಿಜಯವಿಠ್ಠಲ ಕೃ -
ತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು ॥ 5 ॥

 ಜತೆ 

ಭಕುತರ ಭಾಗ್ಯವೆ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯವಿಠ್ಠಲ ವೇಂಕಟ ॥
********

ಅಪಮೃತ್ಯು ನಿವಾರಣ ಸುಳಾದಿ Apamrutyu Nivarana Suladi


ಧ್ರುವತಾಳ

ರುದ್ರಾಂತರ್ಗತ ನಾರಸಿಂಹ ಮೃತ್ಯು ನಿವಾರಿ |
ಭದ್ರ ಫಲದಾಯಕ ದೋಷ ದೂರ |
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ |
ಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದ |
ನಿದ್ರಾ ರಹಿತ ನಿಗಮ ವಂದ್ಯ ಭಕ್ತಾನಂದ |
ಉದ್ರೇಕಾ ತಂದು ಕೊಡುವ ಕಾಮಿತಾರ್ಥ |
ಭದ್ರ ಪ್ರದಾಯಕ ದೋಷ ದೂರ |
ಮುದ್ರೆ ಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ- |
ಮುದ್ರದೊಳಗೆ ಲೋಲಾಡುತಿಪ್ಪ
ಶೂದ್ರಗಾದರು ಆಶಾ | ಭಯವಿಲ್ಲವೆಂದು ಮಹ |
ರುದ್ರಾದಿಗಳು ಪೇಳುತಿಪ್ಪರಿದೆ ಕೋ |
ಕದ್ರುವೆ ಮಗ ವಾಸುಕಿಯಾ ಗರುಡನ್ನ ಉ- |
ಪದವ್ರ ಬಿಡಿಸಿ ನೀನೆ ಪಾಲಿಸಿದಂದು |
ಕ್ಷುದ್ರ ದೇವತೆಗಳಿಗೆ ಈ ಪರಿ ಶಕ್ತಿಯುಂಟೆ |
ಛಿದ್ರತನ ಎಣಿಸದಿರು ಪರಮ ಕರುಣೀ |
ರೌದ್ರ ಮೂರುತಿ ಶಾಂತ ವಿಜಯ ವಿಠ್ಠಲ | ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳು
|| 1 ||

ಮಟ್ಟತಾಳ

ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ |
ಶರೀರದೊಳಗೆ ನಿಂದು ಸ್ತೋತ್ರ  ಮಾಡಿಸಿಕೊಂಡೆ |
ಅರೆ ಮರೆ ಇದಕಿಲ್ಲ ಶಾಶ್ವತ ವಾಕ್ಯವೆಂದು |
ನೆರೆ ನಂಬಿದೆ ನಾನು ನಾನಾ ವಿಧದಲ್ಲಿ |
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ |
ಪರಿಹರವಾಗುವುದು ಸಿದ್ಧವಾಯಿತು ಎನಗೆ |
ಪುರ ಹರನುತಪಾದ ವಿಜಯ ವಿಠ್ಠಲರೇಯ |
ನರಹರಿ ಎಂದೆನೆ ಭಯಹರವೊ
|| 2 ||

ತ್ರಿವಿಡಿತಾಳ

ಅನ್ಯಥಾ ಗತಿ ಕಾಣೆ ನಿನ್ನ ಪಾದವಲ್ಲದೆ |
ಇನ್ನು ತ್ರಿಲೋಕದಲಿ ತಿರುವೆಂಗಳ |
ಎನ್ನ ನುಡಿ ಪುಶಿ ಮಾಡಿ ಅಪಹಾಸ ಗೈಸಿದರೆ |
ನಿನ್ನದಲ್ಲದೆ ಕೀರ್ತಿ ಅಪಕೀರ್ತಿಯು |
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು |
ಮುನ್ನ ಪೇಳುವುದೇನು ವಿಸ್ತರಿಸಿ |
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು |
ನಿನ್ನ ನಂಬಿಹಳಯ್ಯ ನೀನೆ ಬಲ್ಲೈ |
ಧನ್ಯ ಜೀವನದಾಯ ಸುವಾಸತನವಿತ್ತು |
ಮನ್ನಿಸುವುದು ಇವಳ ತುತಿಗೆ ಮೆಚ್ಚಿ |
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ |
ಬಿನ್ನಹ ಮಾಡಿದೆ ಇಷ್ಟೆ ಮಾತ್ರ |
ತನ್ನ ಪತಿಯ ಕೊಡ ತಾಂಬೂಲ| 
ಮೆಲುವ ಸಂಪನ್ನ ಭಾಗ್ಯವಕೊಡು ಕಮಲನಾಭ |
ಕನ್ಯ ಲಕುಮಿ ರಮಣ ವಿಜಯ ವಿಠ್ಠಲರೇಯ |
ಘನ್ನ ಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ 
|| 3 ||

ಅಟ್ಟತಾಳ

ಆಳು ಗೆದ್ದರೆ ನೋಡು ಅರಸಗೆ ಜಯಪ್ರದ |
ಆಳು ನುಡಿದದ್ದು ಅರಸು ನುಡಿದದ್ದು |
ಏಳಾಲ ಮಾಡದೆ ಯಾದವ ಕುಲ ಮಣಿ |
ಪಾಲಿಸಬೇಕಯ್ಯಾ ಪರಮ ಅನಿಮಿತ್ತ |
ಮೂಲ ಬಾಂಧವ ಭಾಷೆ ಕೊಟ್ಟರೆ ತಪ್ಪದು |
ಪಾಲ ಸಾಗರ ಶಾಯಿ ವಿಜಯ ವಿಠ್ಠಲರೇಯ |
ಕಾಲ ಕರ್ಮ ಗುಣ ನಿನಗಿದಿರೆ ಸ್ವಾಮೀ
|| 4 ||

ಆದಿತಾಳ

ಅರ್ಥವಾದವಲ್ಲ ಮನಸು ಪೂರ್ವಕದಿಂದ|
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ|
ಸ್ವಾರ್ಥಗೋಸುಗವಾಗಿ| ಬೇಡಿಕೊಂಬುವನಲ್ಲ|
ವ್ಯರ್ಥವಾಗ ಗೊಡದಿರು ವೇದದಲ್ಲಿ ಪೇಳಿದ|
ಅರ್ಥ ಜ್ಞಾನಕ್ಕೆ ನಿತ್ಯ ಎಲ್ಲಿದ್ದರು ದೇವ|
ಅರ್ಥಾತುರ ನೀನಲ್ಲ ಸಕಲ | 
ಕಾಲದಲ್ಲಿ, ಸಮರ್ಥ ನೀನಹುದೋ | 
ಸರ್ವೋತ್ತಮ, ಪರಹಿತಾರ್ಥವಾಗಲಿ | 
ಇದೆ ಪುಶಿಯಾಗದಂತೆ ಕಾಯೊ |
ಆರ್ತ ವಿದೂರ ನಮ್ಮ ವಿಜಯ ವಿಠ್ಠಲ | 
ಕೃತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು
|| 5 ||

ಜತೆ

ಭಕುತರ ಭಾಗ್ಯವೇ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯ ವಿಠ್ಠಲ ವೆಂಕಟ
|| 6 ||

*******