Showing posts with label ಬಾರೋ ದ್ವೈತಸಾರಶರಧಿ ಪೂರ್ಣಚಂದ್ರ tandevenkatesha vittala. Show all posts
Showing posts with label ಬಾರೋ ದ್ವೈತಸಾರಶರಧಿ ಪೂರ್ಣಚಂದ್ರ tandevenkatesha vittala. Show all posts

Monday 6 September 2021

ಬಾರೋ ದ್ವೈತಸಾರಶರಧಿ ಪೂರ್ಣಚಂದ್ರ ankita tandevenkatesha vittala

ankita ತಂದೆವೆಂಕಟೇಶವಿಠಲ

ರಾಗ: ವಸಂತ/ಪೀಲು ತಾಳ: ಆದಿ


ಬಾರೊ ದ್ವೈತಸಾರಶರಧಿ ಪೂರ್ಣಚಂದ್ರ ಉ-

ದ್ಧಾರ ಮಾಡೊ ಎನ್ನ ಗುರು ರಾಘವೇಂದ್ರ 


ಸಾಧಕರೆಲ್ಲರ ಸಕಲಮನದಾಭೀಷ್ಟ ಸುರ-

ಪಾದಪಾದಿಗಳ ಮೀರಿ ಕೊಡುವ ನಿಷ್ಠ

ಪಾದಾವಲಂಬಿಗಳಿಗೆ ಉಪದೇಷ್ಠನಾಗಿ

ಬೋಧಿಸುವೆಯೋ ದ್ವೈತತ್ತ್ವದ ಗುಟ್ಟ 1

ಧಾತಾಂಡದೊಳು ಯುಗಯುಗದಲ್ಲಿ ಸಂ-

ಭೂತನಾಗುವೆ ಹರಿಪ್ರೀತಿಯಲ್ಲಿ

ಮಾತರಿಶ್ವನ ಮತವನಧಿಯಲ್ಲಿ ಪ್ರ-

ಖ್ಯಾತಶಫರ ಕಾಯೊ ವಹಿಲದಲ್ಲಿ 2

ಮಾಯಾವಾದಿಗಳನೆಲ್ಲ ಖಂಡಿಸಿ ಸ-

ನ್ಯಾಯಸುಧೆಗೆ ಪರಿಮಳ ರಚಿಸಿ 

ಕಾಯವಾಙ್ಮನೋಮಯನನು ತಿಳಿಸಿ ಪಾಪ

ಭೂಯಿಷ್ಠನನು ಪೊರೆ ಪತಿಕರಿಸಿ 3

ದುರ್ಮದಾಂಧರನೆಲ್ಲ ನಿಗ್ರಹಿಸಿ ನೀತ

ಧರ್ಮ ಕರ್ಮಂಗಳನಾಚರಿಸಿ

ಕರ್ಮಂದಿಜನಶಿರೋಮಣಿಯೆನಿಸಿ ಮೋಕ್ಷ

ಮರ್ಮತಿಳಿಸೊ ಸಾಧನೆ ಬಲಿಸೀ 4

ಭೂತ ಬೇತಾಳ ಪ್ರೇತಜಾತಬಾಧ ಸನ್ನಿ

ಪಾತ ಅಶುಭಗ್ರಹ ಸರಿಸೃಪದ-

ಘಾತ ದಾರಿದ್ರ್ಯಭಯ ವಿಷಮಿಸಿದದೋಷ

ವ್ರಾತ ಹಿಂಗಿಸುವದೊ ತವಪಾದ 5

ಹೃದ್ರೋಗ ಹರಿಸಿ ಪೊರೆಯನವರತಾ ತುಂಗ-

ಭದ್ರಾತೀರಗ ನಿರ್ಗತದುರಿತ

ರುದ್ರಾಂತರ್ಗತನಂಘ್ರಿಮಧುಪವ್ರತ ಶ್ರೀ-

ಮದ್ರಾಘವೇಂದ್ರಯತಿ ಶುಭಚರಿತ 6

ಪೊಂದಿರುವೆ ನಿಮ್ಮ ಪಾದಕಮಲಂಗಳ ದಯ-

ದಿಂದ ಕೇಳು ಬಾಲಕನ ವಚನಂಗಳ 

ತಂದೆವೆಂಕಟೇಶವಿಠಲನೆಮ್ಮ ಕಂಗಳ ಮುಂದೆ

ತಂದು ಸಲಿಸೊ ಇಂದೆ ನಮಗೆ ಸರ್ವಮಂಗಳ 7

***

ಸುರಪಾದಪಾದಿಗಳ=ಕಲ್ಪವೃಕ್ಷ; 

ಕಾಯವಾಙ್ಮನೋಮಯನನು=ಕಾಯಾ, 

ವಾಚಾ ಮನಸ್ಸಿನಲ್ಲಿ ವ್ಯಕ್ತನಾದ; 

ಭೂಯಿಷ್ಠ=ತುಂಬಿದ, ಭರಿತವಾದ; 

ಸರಿಸೃಪದಘಾತ=ಹಾವಿನಿಂದ ಆಗುವ ತೊಂದರೆ;