Showing posts with label ಎಂತು ಪೊಗಳಲಿ ಜಗನ್ನಾಥದಾಸರನ gurushreesha vittala ENTU POGALALI JAGANNATHADASARANA JAGANNATHA DASA STUTIH. Show all posts
Showing posts with label ಎಂತು ಪೊಗಳಲಿ ಜಗನ್ನಾಥದಾಸರನ gurushreesha vittala ENTU POGALALI JAGANNATHADASARANA JAGANNATHA DASA STUTIH. Show all posts

Saturday 11 December 2021

ಎಂತು ಪೊಗಳಲಿ ಜಗನ್ನಾಥದಾಸರನ ankita gurushreesha vittala ENTU POGALALI JAGANNATHADASARANA JAGANNATHA DASA STUTIH



 " ಶ್ರೀ ಜಗನ್ನಾಥದಾಸರ ಸಂದರ್ಶನ " 

ಶ್ರೀ ಶ್ರೀಶವಿಠ್ಠಲರಿಂದ ಅಂಕಿತವನ್ನು ಪಡೆದು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಜಗನ್ನಾಥದಾಸರ ಸನ್ನಿಧಾನಕ್ಕೆ ಬಂದು ಭಕ್ತಿ ಶ್ರದ್ಧೆಗಳಿಂದ ಅವರ ಸೇವೆಯನ್ನು ಮಾಡಿ ಅವರನ್ನು ಸ್ತೋತ್ರ ಮಾಡುತ್ತಿದ್ದಾರೆ. 

ಎಂತು ಪೊಗಳಲಿ 

ಜಗನ್ನಾಥದಾಸರನ ।

ಕಂತುಪಿತ ಒಲಿದವರನ 

ಅಂತರಂಗದಿ ಪೊಳೆವ ।। ಪಲ್ಲವಿ ।। 


ಶ್ರೀ ರಮಾದೇವಿ ಪತಿಯೊಡನೆ 

ಇವರಲಿ ನಿಂತು ।

ಈರೆರಡು ದೇಹ ಅವ್ಯಕ್ತ ಸಹಿತ ।

ಆರು ನಾಲಕು ತತ್ತ್ವದ-

ಭಿಮಾನಿಗಳ ಕೂಡಿ ।

ಮೂರು ಗುಣ ಕಾರ್ಯಗಳ ಮಾಡಿ 

ತೋರ್ಪರು ಸುಖವ ।। ಚರಣ ।। 


ಚತುರಮುಖ ವಾಯು 

ನಿಜ ಸತಿಯರಿಂದೊಡಗೂಡಿ ।

ಇತರ ದೇವತೆಗಳು ಸತತ ಇದ್ದು ।

ವಿಹಿತ ಮಹಿಮನ 

ಸೇವಿಸುತಲಿ ಸುಜ್ಞಾನವನು ।

ಹಿತದಿಂದಲಿವರಿಗಿತ್ತತಿ 

ತೋಷ ಪಡಿಸುವರು ।। ಚರಣ ।। 


ಕರಣ ಮಾನಿಗಳು ಶಿವ ಇಂದ್ರ  

ಸೂರ್ಯರು ತಾವು ।

ಇವರಧೀಷ್ಠಾನದಲಿ 

ಹರಿಯನರ್ಚಿಸೀ ।

ಸುರ ನರರ ತರತಮವ 

ಪಂಚಭೇದವನರುಪಿ ।

ಹರಿದಾಸ್ಯವನು ಇತ್ತು ಅರ 

ದೂರವೆನಿಸುವರಾ ।। ಚರಣ ।। 


ಈ ಪರಿ ನಿರಂತರದಿ 

ಅಪಾದಮೌಳಿ । ತವ ।

ಕಾಪಯೋಜಜ 

ಮುಖರ ರೂಪಗಳಲಿ ।

ಆ ಪರಮ ಪುರುಷನ 

ಸುವ್ಯಾಪಾರ ನೋಡುತಲಿ ।

ಅಪಾರ ಮಹಿಮನ 

ಸ್ವರೂಪ ಸ್ಮರಿಸುತಲಿ ।। ಚರಣ ।। 


ಈ ಸುಮನಸರ ಮಹಿಮೆ 

ಸೋಸಿನಲಿ ತಿಳಿದವರ ।

ದಾಸನಾದವನ ಅಘ  

ನಾಶವಹುದು ।

ಕಾಸಿನಾಶೆಗೆ ನರರ 

ದಾಸನಾದವನು । ಗುರು ।

ಶ್ರೀಶವಿಠ್ಠಲನ ನಿಜ 

ದಾಸರನು ಬಲ್ಲನೆ ।। ಚರಣ ।।

****