Showing posts with label ಏಕೆ ನೀಮರುಳಾದೆ ನಾಕೇಶ ವಿನುತೆ ರತ್ನಾಕರನ ತಾಯೆ shyamasundara. Show all posts
Showing posts with label ಏಕೆ ನೀಮರುಳಾದೆ ನಾಕೇಶ ವಿನುತೆ ರತ್ನಾಕರನ ತಾಯೆ shyamasundara. Show all posts

Wednesday 1 September 2021

ಏಕೆ ನೀಮರುಳಾದೆ ನಾಕೇಶ ವಿನುತೆ ರತ್ನಾಕರನ ತಾಯೆ ankita shyamasundara

 ..

ಏಕೆ ನೀಮರುಳಾದೆ ನಾಕೇಶ ವಿನುತೆ | ರ

ತ್ನಾಕರನ ತಾಯೆ ಪ


ಗೋಕುಲದೊಳಿದ್ದು | ಆಕಳ ಕಾಯ್ದಗೆ

ಲೋಕಪಾವನೆ ಸಿರಿಯೆ ಅ.ಪ


ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು

ಬೇರು ಮೆಲ್ಲುವನಿಗೆ |

ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ

ದ್ವಾರ ಕಾಯ್ದವಗೆ |

ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ

ಹಾರಮಾಡಿದವಗೆ |

ಭೂರುಹಚರ ಪರಿವಾರ ದೊಳಗಿದ್ದು ದಧಿ

ಚೋರನೆನಿಸಿದವಗೆ 1


ಸಂದೇಹವಿಲ್ಲದೆ ವಸನ ತ್ಯಜಿಸುತ

ಬಂದು ನಿಂದವನಿಗೆ |

ಇಂದಿರಾಧವ ನಿನ್ನ ಹಿಂದೆ ಬಂದವನ

ಅಂದು ಕೊಂಡವನಿಗೆ |

ಕುಂದರದನೆ ನಿನ್ನ ಪೊಂದದೆ ಛಂದದಿ

ಕಂದರ ಪಡೆದವಗೆ 2


ಜಾತಿಯನರಿಯದೆ ಶಬರಿಯ ಎಂಜಲ

ಪ್ರೀತಿಲಿ ಉಂಡವಗೆ

ಶ್ವೇತವಾಹನಜಗೆ ತಾ ಸೂತನೆಂದೆನಿಸುತ

ಖ್ಯಾತಿ ಪಡೆದವಗೆ

ನೀತಿ ಇಲ್ಲದೆಯ ಮಾತೆಯ ಅನುಜನ

ಘಾತಿಸಿದಾತನಿಗೆ ||

ವಾತಾಶನವರ ತಲ್ಪದೊಳು ಮಲಗಿದ

ಶಾಮಸುಂದರ ಧೊರೆಗೆ 3

***