Showing posts with label ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ namagiri. Show all posts
Showing posts with label ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ namagiri. Show all posts

Thursday 5 August 2021

ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ನಂದತೀರ್ಥರಾನಂದದಿ ಭಜಿಸಿರೊ

ಬಂದು ಸಲಹಬೇಕೆಂದು ಬೇಡುತ ಪ


ಶ್ರದ್ಧೇ ರಮಣನು ಮಧ್ಯಗೇಹರ

ಶುದ್ಧಕುಲದೊಳು ಉದ್ಭವಿಸಿದ 1


ಗೋಪ್ರದಾಯಕ ವಿಪ್ರವರ್ಯಗೆ

ಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ 2


ದೂಷ್ಯವಾದ ದುರ್ಭಾಷ್ಯ ಖಂಡಿಸಿ

ಶಿಷ್ಯರಿಗೆ ಸದ್ಭಾಷ್ಯ ಪೇಳಿದ 3


ಯವನ ನೃಪತಿಯ ಭವನಕೆ ಪೋಗಿ

ಅವನ ಅರ್ಧರಾಜ್ಯವನೆ ತಂದ 4


ದೇವಗಂಗೆಯು ಪಾವನಾಂಶನ

ಸೇವೆಮಾಡಿ ತಾ ಪಾವನಳಾದ 5


ನಾಮಗಿರಿ ಸಿರಿ ಸ್ವಾಮಿ ನೃಹರಿಯ

ಪ್ರೇಮಬಲದಿ ನಿಸ್ಸೀಮರಾದ 6

***