Showing posts with label ದೋಷರಾಶಿಯ ಕಳೆದು ಪಾಲಿಸುವದು ಶ್ರೀಶ ಪ್ರಾಣೇಶ ದಾಸಾ varada vittala shreeshapranesha dasa stutih. Show all posts
Showing posts with label ದೋಷರಾಶಿಯ ಕಳೆದು ಪಾಲಿಸುವದು ಶ್ರೀಶ ಪ್ರಾಣೇಶ ದಾಸಾ varada vittala shreeshapranesha dasa stutih. Show all posts

Sunday 1 August 2021

ದೋಷರಾಶಿಯ ಕಳೆದು ಪಾಲಿಸುವದು ಶ್ರೀಶ ಪ್ರಾಣೇಶ ದಾಸಾ ankita varada vittala shreeshapranesha dasa stutih

 ..

ಶ್ರೀವರದ ವಿಠಲರ ಹಾಡು


ದೋಷರಾಶಿಯ ಕಳೆದು ಪಾಲಿಸುವದು |ಶ್ರೀಶ ಪ್ರಾಣೇಶ ದಾಸಾರ್ಯನೇ ಒಲಿದು ಪ


ಹರಷಮುನಿ ಮತ ತತ್ವಪರಮ ಹರುಷದಲಿಂದ |ಗರೆದು ಸುಜನರಿಗೆ ಸರಿಮಾರ್ಗತೋರಿ ||ಸಿರಿರಾಮನಾಮದ ಸವಿಯನುಣಬಡಿಸಿದೆ |ಕರಪಿಡಿದು ರಕ್ಷಿಪ ಭಾರ ನಿನ್ನದುಯೆಂದೆ 1


ದಾಸಕುಲರತ್ನ ಗುರು ಪ್ರಾಣೇಶದಾಸರಲಿ |ವಾಸುದೇವನ ಸ್ಥಿರದಾಸ್ಯ ಪಡೆದು ||ಶ್ರೀಶ ಪ್ರಾಣೇಶ ವಿಠಲನ ಕುಣಿಸಿದ ಧೀರ |ಆಶಪಾಶವ ಬಿಡಿಸು ಎಂದು ನಾ ಬಂದೆ 2


ನಂದ ವತ್ಸರದ ಭಾದ್ರಪದ ಮಾಸದಲ್ಲಿ |ಚಂದ್ರಪಕ್ಷವು ಅಷ್ಟಮಿ ತಿಥಿ ಭೌಮ್ಯದಿನದಿ ||ಮುಂದ ಕಾಲದಿ ನರಹರಿಯ ಧೇನಿಸಿ ನಲಿದು |ಇಂದಿರಾಧವ ವರದ ವಿಠಲನೂರಿಗೆ ನಡೆದೆ 3

***