Showing posts with label ಜಯತು ಜಗದೀಶ ಇಂದಿರೇಶ ಜಯತು ವೈಕುಂಠರಮಣಾ ಉಪ್ಪವಡಿಸಾ vaikunta vittala. Show all posts
Showing posts with label ಜಯತು ಜಗದೀಶ ಇಂದಿರೇಶ ಜಯತು ವೈಕುಂಠರಮಣಾ ಉಪ್ಪವಡಿಸಾ vaikunta vittala. Show all posts

Sunday 1 August 2021

ಜಯತು ಜಗದೀಶ ಇಂದಿರೇಶ ಜಯತು ವೈಕುಂಠರಮಣಾ ಉಪ್ಪವಡಿಸಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಜಯತು ಜಗದೀಶ ಇಂದಿರೇಶ

ಜಯತು ವೈಕುಂಠರಮಣಾ ಉಪ್ಪವಡಿಸಾ ಪ


ಏಕಾರ್ಣವದಲಿ ವಟದೆಲೆಯಲಿ ಸಕಲಲೋಕ

ವಾಕಾರವಳಿಯೆ ಬಾಲಕತನವನಳ ವಡಿಸಿ

ಶ್ರೀಕರಾಂಬುಜದಿಂದ ಪಾದಾಂಗುಟವ ಪಿಡಿದ ತನುಜನಂದದೀ

ಏಕಮೇವಾದ್ವಿತೀಯನೆಂಬಾಗಮದ

ವಾಕ್ಕಿಂಗೆ ದೃಷ್ಟಾಂತವಾಗಿ ಪವಡಿಸಿಹ ಲ

ಕ್ಷ್ಮೀ ಕಾಂತ ಸಕಲ ಲೋಕದ ಭಕುತರನು ಸಲಹ

ಬೇಕು ನಲಿದುಪ್ಪವಡಿಸಾ 1


ಘಣಿರಾಜನಂತರಂಗತಲ್ಪದ ಮೇಲೆ ತತ್ಫಣಾ

ಮಣಿಯ ಬೆಳಗಿನಲಿ ಸುರನಿಕರವೆಡಬಲದಿ ಸಂ

ದಣಿಸಿ ಬರಲು ನಾರದ ತುಂಬುರರು ಭವದೀಯ

ಗುಣಗಣಂಗಳ ಪಾಡಲೂ

ಗುಣನಿಧಿಗಳೆನಿಪ ಶ್ರೀದೇವಿ ಭೂದೇವಿಯರು

ಕ್ಷಣವಗಲಲರಿಯದೇ ಪಾದಾಂಬುಜವ ಮನ

ದಣಿಯಲೊತ್ತಲು ಸುಖದೊಳೊರಗಿಹ ದಿವಿಜ ಶಿಖಾ

ಮಣಿಯೆ ಟಿಲಿದುಪ್ಪವಡಿಸಾ 2


ಖಗರಾಜ ನವರತ್ನಮಯದ ತೊಟ್ಟಿಲುಮಾಗೆ

ನಿಗಮನಾಲಕು ಕುಂದಣದ ಸರಪಣಿಗಳಾಗೆ

ಬಗಸಿಗಂಗಳ ಭಾವಕಿಯರಾಗಿ ಉಪನಿಷ

ತ್ತುಗಳು ನೆರೆದಾನಂದದೀ

ಮುಗುದರರಸಾ ಮುಕುಂದಾಯೆನಲು ನಲಿಯೆ

ಪಾಲ್ಗಡಲಲೊಡೆಯ ವೇಲಾಪುರದ ಚೆ

ನ್ನಿಗರಾಯ ವೈಕುಂಠರಮಣ ತವಶರಣ ಜನ

ರುಗಳ ಸಲಹುಪ್ಪವಡಿಸಾ 3

***