ರಾಗ - : ತಾಳ -
ಚರಣಕಮಲ ಭಜಿಸೋ ಗೋಪಾಲಕೃಷ್ಣನ ll ಪ ll
ಮುರಲೀ ವಾದ್ಯದಲಿ ಗೋಪರನ
ತರುಣಿಯರ ಮನವನು
ಮರುಳುಗೊಳಿಸಿದ ಪರಮ ಸುಂದರನ ಧರೆಯೊಳಗೆ
ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ll ಅ ಪ ll
ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ
ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ
ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ
ವೇಣುಗೋಪಾಲನಾ ll 1 ll
ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ
ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ
ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ
ಸಿಂದೂರವರದನಾ ll 2 ll
ಕೃಷ್ಣ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ
ಸೃಷ್ಟೀಷನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ
ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಟಗರಿಯುವನಾ
ಪರಮೇಷ್ಠಿ ಜನಕನ ll 3 ll
ಹರಿ ಮಹಿಮೆ ತಿಳಿಯದೆ ಸುರಪತಿಯು ಮಳೆ
ಗರಿಯೆ ಗೋಗಳನಾ
ರಕ್ಷಣೆಯ ಮಾಡಲು ಕಿರಿಯ ಬೆರಳಲಿ
ಗಿರಿಯ ಧರಿಸಿದನಾ ಇದ
ನರಿತು ಸುರಪನು ಸುರಭಿ ಸಹ ಬಂದೆರಗಿ
ಕೃಷ್ಣನ್ನ ಪೂಜಿಸಲು ಒಲಿದನ ll 4 ll
ಶರಣಾಗತ ಜನರ ಪೊರೆಯಲು ಬಂದಿನಿಂತಿಹನಾ ಕಾ
ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ
ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು
ತುರುಪಾಲ ಕೃಷ್ಣನ ll 5 ll
***