Showing posts with label ಹರಿಕಥಾಮೃತಸಾರ ಸಂಧಿ 10 ankita jagannatha vittala ಸರ್ವಪ್ರತೀಕ ಸಂಧಿ HARIKATHAMRUTASARA SANDHI 10 SARVAPRATEEKA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 10 ankita jagannatha vittala ಸರ್ವಪ್ರತೀಕ ಸಂಧಿ HARIKATHAMRUTASARA SANDHI 10 SARVAPRATEEKA SANDHI. Show all posts

Tuesday 8 December 2020

ಹರಿಕಥಾಮೃತಸಾರ ಸಂಧಿ 10 ankita jagannatha vittala ಸರ್ವಪ್ರತೀಕ ಸಂಧಿ HARIKATHAMRUTASARA SANDHI 10 SARVAPRATEEKA SANDHI

 


Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


 ಸರ್ವಪ್ರತೀಕ (ಸರ್ವಸಮರ್ಪಣ) ಸಂಧಿ 10
"ಆವ ಪರಬೊಮ್ಮನತಿವಿಮಲಾಂಗಾವ ಬದ್ಧರು " ,
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
ರಾಗ ಬೃಂದಾವನಸಾರಂಗ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ
ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ
ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ
ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು||1||

ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು
ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು
ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ
ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ||2||

ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು
ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು
ಅವರುಂಬ ಓದನವೇ ನೈವೇದ್ಯ
ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ||3||

ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು
ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು
ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು
ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ||4||

ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು
ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು
ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ
ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು||5||

ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ
ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು
ತಿಳಿದಿಹ ಸೂರಿಗಳು ದೇವತೆಗಳು
ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ||6||

ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು
ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ
ನೆಲೆಗೊಂಡು ಈವರು ಅಖಿಳಾರ್ಥಗಳನು
ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು||7||

ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ
ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ
ವಿಧಿ ನಿಷೇಧಗಳು ಆಚರಿಸುವರು ಬುಧರು
ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ||8||

ಕಲಿಯೆ ಮೊದಲಾದ ಅಖಿಳ ದಾನವರೊಳಗೆ
ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ
ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ
ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ||9||

ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?
ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?
ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ
ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು||10||

ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ
ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು
ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ
ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ||11||

ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ
ಜಲಕೆದುರು ಈಸಿದರೆ ಕೈಸೋತು ಮುಳುಗುವ
ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು
ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು||12||

ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ
ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ
ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ
ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು||13||

ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು
ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು
ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು
ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು||14||

ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು
ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು
ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ
ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು||15||

ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು
ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು
ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು
ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು||16||

ಏನು ಕೇಳಿದರೇನು ನೋಡಿದರೇನು ಓದಿದರೇನು
ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ
ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು
ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ||17||

ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ
ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ
ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು
ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು||18||

ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ
ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು
ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ
ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ||19||

ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು
ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ
ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ
ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು||20||

ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ
ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ
ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ
ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ||21||

ಲೋಕವಾರ್ತೆಯಿ ದಲ್ಲ ಪರಲೋ ಕೈಕನಾಥನ ವಾರ್ತೆ ಕೇಳ್ವರೆ |
ಕಾಕು ಮನುಜರಿ ಗಿದು ಸಮರ್ಪಕ ವಾಗಿ ಸೊಗಸುವುದೆ ||
ಕೋಕನದ ಪರಿ ಮಳವು ಷಟ್ಪದ ಸ್ವೀಕರಿಸುವಂ ದದಲಿ
ಜಲಚರ ಭೇಕ ಬಲ್ಲದೆ ಇದರ ರಸ ಹರಿ ಭಕ್ತಗಲ್ಲದಲೆ||22||

ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ
ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ
ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ
ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ||23||

ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ
ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ
ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ
ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ||24||

ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ
ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ
ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ
ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ||25||
********

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

Ava parabommana ativimala angAva baddharu endenipa
rAjIvaBava modalAda amararu anudinadi haripadava sEviparige
anukUlarallade tAvu ivaranu keDisaballare
SrIvilAsAspadana dAsarige unTe apajayavu||1||

SrIdana anGri sarOjayugaLa EkAdaSa sthAna AtmadoLagiTTu
Adaradi santutisi higguvarige I navagrahavu
AditEyaru santatAdhi vyAdhigaLa pariharisuta avarana
kAdukonDiharu ellarondAgi ISana Aj~jeyali||2||

mEdiniya mEluLLa gOShpAda udakagaLu ella Amala tIrthavu
pAdapAdri dharAtaLave sukShEtra jIvagaNa SrIdana pratimegaLu
avaruMba OdanavE naivEdya
nityadi hAdi naDevudE nartanagaLu endaritavane yOgi||3||

sarva dESavu puNya dESavu sarva kAlavu parva kAlavu
sarva jIvaru dAna pAtraru mUru lOkadoLu
sarva mAtugaLu ella mantravu sarva kelasagaLu ella pUjeyu
Sarva vandyana vimala mUrti dhyAnavuLLavage||4||

dEvaKAta taTAkavApi sarOvaragaLa aBimAni suraru
kaLEvaradoLagiha rOma kUpagaLoLage tuMbiharu
A viyatgangAdi nadigaLu BAvisuvudu eppatteraDenipa sAvira
sunADigaLoLage pravahisutalihavu endu||5||

mUru kOTiya mEle SOBipa Iru adhika eppattu sAvira
mAruta antaryAmi mAdhava prati divasadalli tA ramisutihanendu
tiLidiha sUrigaLu dEvategaLu
avara SarIravE sukShEtra avara arcaneyE haripUje||6||

SrIvaranige aBiShEkavendaridu I vasundhareyoLage ballavaru
Ava jaladali miMdareyu gangAdi tIrthagaLu tA olidu bandalli
nelegonDu Ivaru aKiLArthagaLanu
ariyada jIvaru amara tarangiNiyanu aididaru PalavEnu||7||

nadanadigaLu iLeyoLage parivavu udadhi pariyantaradi
taruvAyadali ramisuvavu alli tanmayavAgi tOradale
vidhi niShEdhagaLu Acarisuvaru budharu
BagavadrUpa sarvatradali cintane baralu tyajisuvaru aKiLa karmagaLa||8||

kaliye modalAda aKiLa dAnavaroLage
brahma BavAdi dEvarkaLu niyAmakarAgi hariyAj~jeyali
avaravara kaluSha karmava mADi mADisi
jalaruhEkShaNage arpisuta niScala suBakti j~jAna pUrNaru suKiparu avaroLage||9||

Ava jIvaroLiddarEnu? innAva karmava mADalEnu?
innAva guNa rUpagaLa upAsane mADalEnavaru?
kAvanayyana parama kAruNya avalOkana baladi carisuva
dEvategaLanu muTTalu Apave pApa karmagaLu||10||

patiyoDane manabanda teradali prati divasadali ramisi mOdisi
sutara paDedu iLeyoLu jita indriyaLu endu karesuvaLu
kRuti pati kathAmRuta suBOjana rata mahAtmarige
itara dOSha pratatigaLu saMbaMdhisuvavEnu acyutana dAsarige||11||

sUsibaha nadiyoLage tanna sahAsa tOruvenenuta
jalakeduru Isidare kaisOtu muLuguva
hariya biTTavanu klESavaiduva anAdiyali sArvESa kluptiya mADiduda biTTu
ASeyindali anyara ArAdhisuva mAnavanu||12||

nAnu nannadu eMba jaDamati mAnavanu dinadinadi mADuva
snAna japa dEvArcaneyE modalAda karmagaLa
dAnavaru seLedoyvarallade SrInivAsanu svIkarisa
maddAne pakva kapittha Pala BakShisida vOlahudu||13||

dhAtriyoLaguLLa aKiLa tIrthakShEtra carisidarEnu
pAtrApAtravaritu annAdi dAnava mADi PalavEnu
gAtra nirmalanAgi mantra stOtra paThisidaru Enu
hari sarvatragatanu eMdariyade tA kartRu eMbuvanu||14||

kanDa nIroLu muLugi dEhava danDisida PalavEnu
danDa kamanDalaogaLa dharisi yatiyendenisi PalavEnu
anDajAdhipanu aMsagana pada punDarIkadi manavaharniSi
banDuNiyavOl irisi suKapaDade ippa mAnavanu||15||

vEda SAstra purANa kathegaLa Odi pELidarEnu
sakala niShEdha karmagaLa toredu satkarmagaLa mADi Enu
OdanangaLa jaridu SvAsa nirOdhagaisidarEnu
kAma krOdhava aLiyade nAnu nannadeMba mAnavanu||16||

Enu kELidarEnu nODidarEnu OdidarEnu
pELidarEnu pADidarEnu mADidarEnu dinadinadi
SrInivAsana janma karma sadA anurAgadi nenedu
tattat sthAnadali tadrUpa tannAmakana smarisadava||17||

buddhi vidyAbaladi pELida aSuddha kAvyavu idalla
tatva supaddhatigaLanu tiLida mAnavanu alla budharinda
madhva vallaBa tAnE hRudayadoLu iddu nuDidaMdadali nuDidenu
apaddhagaLa nODadale kivigoTTu Alipudu budharu||18||

kabbinoLagiha rasa vidantige abbu ballude
BAgya yauvana mabbinali mai maredavage hari sucaritAmRutavu laByavAgadu
haripadAbjadi habbida ati sadBakti rasa
uMDu ubbi kobbi suKAbdhiyoLage ADuvavage alladale||19||

Kagavaradhvajana anGri Bakutiya bageyanu ariyada mAnavarigidu
ogaTinandadi tOrutippadu ella kAladali
triguNa varjitana amala guNagaLa pogaLi higguva BAgavatarige
mige Bakuti vij~jAna suKavittu avara rakShipudu||20||

parama tatva rahasyavu idu BUsuraru kELuvudu sAdaradi
niShThurigaLige mUDharige panDita mAni piSunarige
arasikarige idu pELvudalla anavarata BagavatpAda
yugaLa aMburuha madhukaranu enisuvavarige idanu arupu mOdadali||21||

lOkavArteyi dalla paralO kaikanAthana vArte kELvare |
kAku manujari gidu samarpaka vAgi sogasuvude ||
kOkanada pari maLavu ShaTpada svIkarisuvaM dadali
jalacara BEka ballade idara rasa hari Baktagalladale||22||

svaprayOjanarahita sakalEShTa pradAyaka sarvaguNa pUrNa pramEya
jarAmaraNa varjita vigata klESa vipratama viSvAtma
GruNi sUrya prakASa ananta mahima
GRuta pratIka ArAdhita anGri sarOja surarAja||23||

vanacara adri dharA dharane jaya manuja mRugavara vESha jaya
vAmana trivikrama dEva jaya BRugu rAma BUma jaya
janakajA vallaBane jaya rugmiNi manOratha siddhidAyaka
jina vimOhaka kalividAraNa jaya jayAramaNa||24||

saccidAnandAtma brahma karArcita anGri sarOja
sumanasa prOcca sanmangaLada madhva antaHkaraNarUDha
acyuta jagannAtha viThala nicca neccida janara biDa
kADgiccanu unDu araNyadoLu gO gOparanu kAyda||25||
************

ಸರ್ವಪ್ರತೀಕ ಸಂಧಿ -10

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//

ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ
ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ
ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ
ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1//

ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು
ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು
ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ
ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ//2//

ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು
ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು
ಅವರುಂಬ ಓದನವೇ ನೈವೇದ್ಯ
ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ//3//

ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು
ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು
ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು
ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ//4//

ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು
ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು
ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ
ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು//5//

ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ
ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು
ತಿಳಿದಿಹ ಸೂರಿಗಳು ದೇವತೆಗಳು
ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ//6//

ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು
ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ
ನೆಲೆಗೊಂಡು ಈವರು ಅಖಿಳಾರ್ಥಗಳನು
ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು//7//
ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ
ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ
ವಿಧಿ ನಿಷೇಧಗಳು ಆಚರಿಸುವರು ಬುಧರು
ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ//8//

ಕಲಿಯೆ ಮೊದಲಾದ ಅಖಿಳ ದಾನವರೊಳಗೆ
ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ
ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ
ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ//9//
ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?
ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?
ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ
ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು//10//

ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ
ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು
ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ
ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ//11//

ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ
ಜಲಕೆದುರು ಈಸಿದರೆ ಕೈಸೋತು ಮುಳುಗುವ
ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು
ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು//12//

ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ
ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ
ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ
ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು//13//

ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು
ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು
ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು
ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು//14//

ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು
ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು
ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ
ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು//15//

ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು
ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು
ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು
ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು//16//

ಏನು ಕೇಳಿದರೇನು ನೋಡಿದರೇನು ಓದಿದರೇನು
ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ
ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು
ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ//17//

ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ
ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ
ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು
ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು//18//

ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ
ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು
ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ
ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ//19//

ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು
ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ
ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ
ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು//20//

ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ
ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ
ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ
ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ//21//

ಲೋಕವಾರ್ತೆಯು ಇದಲ್ಲ ಪರ ಲೋಕೈಕನಾಥನ ವಾರ್ತೆ ಕೇಳ್ವರೆ
ಕಾಕುಮನುಜರಿಗೆ ಪರಿಮಳವು ಷಟ್ಪದ ಸ್ವೀಕರಿಸುವಂದದಲಿ
ಜಲಚರ ಭೇಕ ಬಲ್ಲುದೆ? ಇದರ ರಸ ಹರಿ ಭಕುತಗಲ್ಲದಲೆ//22//

ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ
ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ
ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ
ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ//23//

ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ
ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ
ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ
ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ//24//

ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ
ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ
ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ
ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ//25//
//ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ//
**********
*******