Showing posts with label ಹಿಡಿಮನ ರಾಘವೇಂದ್ರರ ಚರಣ tirumaleshahari vittala. Show all posts
Showing posts with label ಹಿಡಿಮನ ರಾಘವೇಂದ್ರರ ಚರಣ tirumaleshahari vittala. Show all posts

Monday 6 September 2021

ಹಿಡಿಮನ ರಾಘವೇಂದ್ರರ ಚರಣ ankita tirumaleshahari vittala

ankita ತಿರುಮಲೇಶಹರಿವಿಠಲ 

ರಾಗ: ವಸಂತ ತಾಳ: ಆದಿ


ಹಿಡಿಮನ ರಾಘವೇಂದ್ರರ ಚರಣ

ಕಡು ದುಃಖ ನಿವಾರಣವಾಗುವುದೀಕ್ಷಣ


ದಂಡ ಕಮಂಡಲ ಧರಿಸಿ ಕೊರಳೊಳು ತುಳಸಿ ಕೋ-

ದಂಡ ರಾಮನ ಹೃತ್ಕಮಲದಿ ಸ್ಥಾಪಿಸಿ

ತಂಡ ತಂಡದಿಂದಾಗಮಿಸುವ ಭಜಕರ ಪೋಷಿಸು-

ತ್ಹಿಂಡು ಅಘ ಕಳೆದ್ಹಂಬಲ ಸಲಿಪರ 1

ಫಾಲನೇತ್ರನ ಜಟೆಯಲಿ ಶೋಭಿಸುತಿರುವ

ಜಲಧಾರೆಯ ಜನಕನ ಸಂತತ ಭಜಿಪರ

ಮಲಿನರಿಗೆಟುಕದ ಮಹಿಮೆಯ ತೋರುವ

ಕಲಿಮಲ ಕಳೆಯುವ ಯತಿಕುಲ ತಿಲಕರ 2

ವರಹಜೆ ತೀರದಿ ದುರಿತವ ಕಳೆಯುತ

ವರ ಮಂತ್ರಾಲಯ ಕ್ಷೇತ್ರದಿ ಮೆರೆಯುವ

ತಿರುಮಲೇಶಹರಿವಿಠಲರಾಯನ ಶುಭ

ಪುರವನ್ನು ತೋರುವ ಕರುಣಿಗಳರಸರ 3

***