Showing posts with label ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ gurujagannatha vittala. Show all posts
Showing posts with label ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ gurujagannatha vittala. Show all posts

Wednesday 1 September 2021

ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ ankita gurujagannatha vittala

 ..

ಬಂದು ಸಂಸಾರದಿ ನೊಂದು ತಾಪತ್ರಯದಿ

ಬೆಂದು ಕಂದಿ ಕುಂದಿದೆ ದೇವಾ ಪ


ಪರಮ ಕರುಣಿಯೆ ನಿನ್ನ ಶರಣು ಪೊಕ್ಕಾ ಜನರ

ಪರಿಪಾಲಿಪನೆಂಬ ಬಿರಿದೊ ಅರಿದೂ ನೀನೆ

ಮೆರೆಯದಲೆ ಸಲಹÀಬೇಕೆನ್ನ ನಿನ್ನ

ಚರಣನೀರಜಯುಗ್ಮವನ್ನಾ ತೋರಿ

ಹರುಷವನೆ ನೀಡೆಲೋ ಮುನ್ನಾ ಘನ್ನ

ಪರಮಭಕುತಿ ವಿರಕುತಿ ನೀನೆ ಎನಗಿತ್ತೆನ್ನ

ಹರುಷದಲಿ ಪಾಲಿಸೈಯ್ಯಾ ಜೀಯಾ 1


ಮಾನುಷಾಧಮ ನಾನು ಹೀನಮತಿಯಲಿ ನಿನ್ನ

ಧ್ಯಾನವನು ಮಾಡದಲೆ ಬರಿದೆ ಜರಿದೆ ಇಂಥ

ಹೀನಭವದೊಳಗೆ ಬಾಯಿದೆರದೆ ದಿವ್ಯ

ಜ್ಞಾನಿಜನರನ್ನು ನಾ ಜರಿದೆ ಙÁ್ಞನ

ಹೀನನಾಗಿ ಕಾಲಕಳೆದೆ ಇನ್ನು

ಶ್ರೀನಿವಾಸನೆ ನಿನ್ನ ಧ್ಯಾನ ಮಾಡುವೆನೋವಿ -

ಜ್ಞಾನವನೆ ಪಾಲಿಸಯ್ಯಾ ಜೀಯಾ 2


ಈಸುವತ್ಸರ ನಿನ್ನುಪಾಸನವ ಮಾಡದಲೆ

ರಾಸಭಾನಂತೆ ಬದುಕಿದೆ ದೇವಾ ಈಗ

ವಾಸವಾಗೆಲೋ ಮನದಿ ಸ್ವಾಮೀ ನಾನು

ಈಸಲಾರೆನು ಭವದಿ ಪ್ರೇಮೀ ಎನ್ನ

ಆಸೆ ಪೂರ್ತಿಸೊ ಅಂತರ್ಯಾಮಿ ಇನ್ನು

ಎಸುವಿಧದಲಿ ಸರ್ವೇಶ ಪೇಳಲಿ ಮುನ್ನೆ

ಈಶ ಭವಶ್ರಮ ಕಳಿಯೋ ಈಗಾ ವೇಗಾ 3


ಆವ ಕರ್ಮದಲಿಂದ ಈ ವಸುಮತಿಯಲ್ಲಿ

ಈ ವಿಧಾದಿಂದ ಬಂದೆ ನಿಂದೆ ನಿನ್ನ

ಸೇವಕಾನಲ್ಲವೆ ತಂದೆ ಎನ್ನ

ಆವಾಗ ನೋಡುವಿಯೊ ಮುಂದೆ ಈಗ

ಕಾವವನಾರು ನಾ ಎಂದೆ ವೇಗ

ದೇವ ನಿನ್ನಯ ಪಾದಸೇವೆ ಸುಖವನು ಇತ್ತು

ಆವ(ಅವ)ರಂತೆ ಪೊರೆಯೊ ಎನ್ನಾ ಚೆನ್ನಾ 4


ಉರಗಾದ್ರಿ ನಿಲಯನೆ ವರಭೋಗಿಶಯನನೆ

ಪರಮಪುರುಷನು ಎಂದು ಮೊರೆಯಾ ಇಡುವೆ ನಿನ್ನ

ಪರಿಪರಿಯ ಜನರನ್ನು ಪೊರೆವೆ ಎನ್ನ

ತಿರಸ್ಕಾರ ಮಾಡುವುದು ಥsÀರವೇ ನಿನ್ನ

ಮರಿಯಾದೆಯಲ್ಲಮರತರುವೇ ಕೃಪಾ

ಕರನೇ ಸರ್ವರಿಗು ಸರಿಯಾಗಿ ಇರುತಿರುವಿ

ಗುರುಜಗನ್ನಾಥ ವಿಠಲಾ ವತ್ಸಲಾ 5

***