Showing posts with label ಭೂವರಾಹ ಅವತಾರ vijaya vittala ankita suladi ಭೂವರಾಹ ಸ್ತೋತ್ರ ಸುಳಾದಿ BHUVARAHA AVATARA BHUVARAHA STOTRA SULADI. Show all posts
Showing posts with label ಭೂವರಾಹ ಅವತಾರ vijaya vittala ankita suladi ಭೂವರಾಹ ಸ್ತೋತ್ರ ಸುಳಾದಿ BHUVARAHA AVATARA BHUVARAHA STOTRA SULADI. Show all posts

Sunday 8 December 2019

ಭೂವರಾಹ ಅವತಾರ vijaya vittala ankita suladi ಭೂವರಾಹ ಸ್ತೋತ್ರ ಸುಳಾದಿ BHUVARAHA AVATARA BHUVARAHA STOTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಭೂವರಹಾವತಾರ ಸ್ತೋತ್ರ ಸುಳಾದಿ 

 ರಾಗ ತೋಡಿ 

 ಧ್ರುವತಾಳ 

ಭೂವರಹ ಅವತಾರ ಶೃಂಗಾರ ಗುಣಾಕಾರ
ದೇವರ ದೇವನೆ ಧಾರುಣಿಧರಾ ದಾ -
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಯಿಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತ
ಜೀವರಾಖಿಳರಿಗೆ ಬಲುಭಿನ್ನ ದಯ ಪಾ -
ರಾವರ ಮೂರುತಿ ಸುರನರೋರಗ ಪಾ -
ರಾವರ ವಿನುತಾ ವಿನುತಜ ಗಮನಾ ಕ್ಷೀರ -
ವಾರಿಧಿ ಶಯನಾ ವಾರಿಜನಯನಾ ಇಂ -
ದೀವರ ಶ್ಯಾಮ ಶ್ರೀವಿಜಯವಿಟ್ಠಲರೇಯಾ 
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂ ವರಹಾವತಾರಾ ॥ 1 ॥

 ಮಟ್ಟತಾಳ 

ಸುರರನ ಬೆಂಬತ್ತಿ ಧರಣಿಯನು ಕಿತ್ತಿ
ಸುರಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರಣಿಯ ನಿಜಪತ್ತಿ ವಿಜಯವಿಟ್ಠಲ ಮೂರ್ತಿ 
ಮೆರೆದನು ಸತ್ಕೀರ್ತಿ ಧರಣಿಯ ನಿಜಪತ್ತಿ ॥ 2 ॥

 ರೂಪಕತಾಳ 

ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದಾನಂದೂ
ರಸಹೀನವಾಗೆ ನೀರಸರಾಗಿ ಪೋಗಿ ಸುಮ -
ನಸರು ಚಿಂತೆಯಲಿ ಕಾಣಿಸದೆ ಪುಣ್ಯ -
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯದೆ ಬಿನ್ನೈಸೆ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯವಿಟ್ಠಲರೇಯಗೆ 
ಹಸುಳೆಯಂದದಲಿ ಉಬ್ಬಸವ ಪೇಳಿದನು ॥ 3 ॥

 ಝಂಪೆತಾಳ 

ಸೂಕರ ರೂಪವ ತಾಳಿ ಕೋರಿದಾಡಿಲಿಂದ 
ಭೀಕರ ಶಬ್ಧದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘುಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯವಿಟ್ಠಲನು ವಿ -
ವೇಕರನೊಡಗೂಡಿ ನೂಕಿದನು ಬಲವಾ ॥ 4 ॥

 ತ್ರಿಪುಟತಾಳ 

ಇಳಿಯಾ ಬಗದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೂ
ಕೊಲಹಾಲವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತ ನಾದವನಾ 
ಅಳಿದು ಆ ಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತು ಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯವಿಟ್ಠಲರೇಯಾ 
ವೊಲವ ಕಿಟಿದೇವಾನೆ ಇಳಿಯ ಭಾರಹರಣಾ ॥ 5 ॥

 ಅಟ್ಟತಾಳ 

ನಾರಾಯಣ ಕೃಷ್ಣ ಅಚ್ಯುತ ಗೋವಿಂದ
ನಾರದ ವರದ ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀರಮಣನೆ ಜ್ಞಾನಪುಂಜಾನೆ ಕುಂಜರ 
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ -
ಪಾರವಾಗಿ ಮಾಡೆ 
ಮಾರಜನಕ ಹರಿ ವಿಜಯವಿಟ್ಠಲರೇಯಾ 
ಗೀರವಾಣರ ಪ್ರತಿ ಸಾರವ ಹರಿಸಿದಾ ॥ 6 ॥

 ಆದಿತಾಳ 

ದುಂದುಭಿ ಮೊರೆಯೆ ಮೇಲೆ ಮಂದರ ಮೊಗ್ಗೆ ಗರಿಯೆ
ಗಂಧರ್ವಾದಿಗಳು ನಾರಂದ ತುಂಬರಾರು ನಿಂದು
ವಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆ ತುದಿಗೆ
ಸುಂದರ ವಸುಂಧರವು ಛಂದದಿಂದ ವೊಪ್ಪುತಿರೆ
ಮಂದಾಕಿನಿಜನಕ ವಿಜಯವಿಟ್ಠಲ ಉರ -
ಗೇಂದ್ರಗಿರಿಯಲ್ಲಿ ಬಂದು ನಿಂದ ನಿಗಮಗೋಚರ ॥ 7 ॥

 ಜತೆ 

ಸ್ವಾಮಿಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯವಿಟ್ಠಲ ತಿಮ್ಮಾ ॥
***********
Another version
Audio by Mrs. Nandini Sripad
ಭೂವರಾಹ ಅವತಾರ ಶೃಂಗಾರ ಗುಣಾಕಾರಾ
ಶ್ರೀ ಭೂವರಾಹದೇವರ ಸ್ತೋತ್ರ ಸುಳಾದಿ , 
ಶ್ರೀ ವಿಜಯದಾಸರ ರಚನೆ , ರಾಗ ತೋಡಿ

************