ಶ್ರೀ  ಮೋಹನದಾಸರ ಸ್ಮರಣೆ
 ಮೋಹನದಾಸರ ಮನಸಾರ ನೆನೆದರೆಮರೆಯದೆ ಪೊರೆಯುವರು
 ಕಾಮನ ಪಿತನ ದಯದಿ ಬೆಳೆದವರು ಆಮಹ ವಿಜಯದಾಸರ ಮುದ್ದು
ಕುವರರು||ಪಲ್ಲ||
ಚಕ್ರತೀರ್ಥದ ಬಳಿ ಅಸುನೀಗಲೆಂದು ಬಂದ
 ತಾಯಿಯ ಕಂಡು ಅನುಗ್ರಹಿಸಿ
ಕರದಲ್ಲಿ ಮಗುವೆತ್ತಿ ಮೋಹನನೆಂದು ಕರೆಯತ್ತ
 ಮಡದಿಗೆ ಕೊಟ್ಟರು ವಿಜಯ ದಾಸಾರ್ಯರು||೧||
ಎಣ್ಣೆ ನೀರನೆ ಹಾಕಿ ಬಿಸಿನೀರನೆರೆಯಲು
ಸಣ್ಣಕಾದ ದೇಹ ಚೇತರಿಸಿಕೊಂಡು
ಚಿರಂಜೀವಿಯಾಗೆಲೊ ಚಿಣ್ಣ  ನೀನೆಂದ್ಹರಸಲು
ಕಣ್ಣಿಗಾನಂದ ನೀಡುತ ಬೆಳೆದರು||೨||
ಅಪಮೃತ್ಯು ಬಂದರೆ ಮೃತನಾಗಿಹನೆಂದು
ಪತಿತರುಅಲ್ಲಿ ಗುಮಿಗೂಡೆ
ಭೃಗುಋಷಿ ರೂಪದಿ ಯಮನಲ್ಲಿ ವಾದಿಸಿ
ಉಧ್ಧಾರ ಮಾಡಿದ  ವಿಜಯದಾಸಾರ್ಯ||೩||
ವಿಜಯದಾಸರ ನೆನೆದು ಸಂತಸಪಡುತ
 ಕೋಲಾಟದ ಪದಗಳ  ಲೀಲೆಯಲಿ ರಚಿಸಿ 
ಅವರ ಅನುಗ್ರಹದಿಂದ ಕುಲ ಕೋಟಿ ಉಧ್ಧಾರ
 ಇನ್ನು ಜೀವಿಸುವರು ಇವರ ಪರಿವಾರ||೪||
ಪರಿ ಪರಿ ವಿಧವಾಗಿ ಗುರುಗಳ ನೆನೆದು
 ಪರಮಾತ್ಮನಲಿ ಅತಿಭಕ್ತಿ ಮಾಡುತ್ತ
 ಜ್ಯೇಷ್ಠ ಶುಕ್ಲ ಸಪ್ತಮಿ ದಿನದಿ
 ಮಧ್ವೇಶಕೃಷ್ಣನ  ಪಾದ ಸೇರಿದ||೫||
*******
 
