Showing posts with label ಮೋಹನದಾಸರ ಮನಸಾರ ನೆನೆ madhwesha krishna MOHANADAASARA MANASAARA NENE MOHANA DASARA STUTIH. Show all posts
Showing posts with label ಮೋಹನದಾಸರ ಮನಸಾರ ನೆನೆ madhwesha krishna MOHANADAASARA MANASAARA NENE MOHANA DASARA STUTIH. Show all posts

Sunday 5 December 2021

ಮೋಹನದಾಸರ ಮನಸಾರ ನೆನೆ ankita madhwesha krishna MOHANADAASARA MANASAARA NENE MOHANA DASARA STUTIH



ಶ್ರೀ  ಮೋಹನದಾಸರ ಸ್ಮರಣೆ

 ಮೋಹನದಾಸರ ಮನಸಾರ ನೆನೆದರೆಮರೆಯದೆ ಪೊರೆಯುವರು
 ಕಾಮನ ಪಿತನ ದಯದಿ ಬೆಳೆದವರು ಆಮಹ ವಿಜಯದಾಸರ ಮುದ್ದು
ಕುವರರು||ಪಲ್ಲ||

 ಚಕ್ರತೀರ್ಥದ ಬಳಿ ಅಸುನೀಗಲೆಂದು ಬಂದ
 ತಾಯಿಯ ಕಂಡು ಅನುಗ್ರಹಿಸಿ
ಕರದಲ್ಲಿ ಮಗುವೆತ್ತಿ ಮೋಹನನೆಂದು ಕರೆಯತ್ತ
 ಮಡದಿಗೆ ಕೊಟ್ಟರು ವಿಜಯ ದಾಸಾರ್ಯರು||೧||

 ಎಣ್ಣೆ ನೀರನೆ ಹಾಕಿ ಬಿಸಿನೀರನೆರೆಯಲು
ಸಣ್ಣಕಾದ ದೇಹ ಚೇತರಿಸಿಕೊಂಡು
ಚಿರಂಜೀವಿಯಾಗೆಲೊ ಚಿಣ್ಣ  ನೀನೆಂದ್ಹರಸಲು
ಕಣ್ಣಿಗಾನಂದ ನೀಡುತ ಬೆಳೆದರು||೨||

ಅಪಮೃತ್ಯು ಬಂದರೆ ಮೃತನಾಗಿಹನೆಂದು
ಪತಿತರುಅಲ್ಲಿ ಗುಮಿಗೂಡೆ
ಭೃಗುಋಷಿ ರೂಪದಿ ಯಮನಲ್ಲಿ ವಾದಿಸಿ
ಉಧ್ಧಾರ ಮಾಡಿದ  ವಿಜಯದಾಸಾರ್ಯ||೩||

 ವಿಜಯದಾಸರ ನೆನೆದು ಸಂತಸಪಡುತ
 ಕೋಲಾಟದ ಪದಗಳ  ಲೀಲೆಯಲಿ ರಚಿಸಿ 
ಅವರ ಅನುಗ್ರಹದಿಂದ ಕುಲ ಕೋಟಿ ಉಧ್ಧಾರ
 ಇನ್ನು ಜೀವಿಸುವರು ಇವರ ಪರಿವಾರ||೪||

 ಪರಿ ಪರಿ ವಿಧವಾಗಿ ಗುರುಗಳ  ನೆನೆದು
 ಪರಮಾತ್ಮನಲಿ ಅತಿಭಕ್ತಿ ಮಾಡುತ್ತ
 ಜ್ಯೇಷ್ಠ ಶುಕ್ಲ ಸಪ್ತಮಿ ದಿನದಿ
 ಮಧ್ವೇಶಕೃಷ್ಣನ  ಪಾದ ಸೇರಿದ||೫||
*******