Showing posts with label ಜಯ ಮುನಿಯ ಭಜಿಸಿ ಸಿರಿ ಪತಿಯ ದಯವ ಬಯಸುವ ಧೀರರು vasudeva vittala. Show all posts
Showing posts with label ಜಯ ಮುನಿಯ ಭಜಿಸಿ ಸಿರಿ ಪತಿಯ ದಯವ ಬಯಸುವ ಧೀರರು vasudeva vittala. Show all posts

Wednesday 1 September 2021

ಜಯ ಮುನಿಯ ಭಜಿಸಿ ಸಿರಿ ಪತಿಯ ದಯವ ಬಯಸುವ ಧೀರರು ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಜಯ ಮುನಿಯ ಭಜಿಸಿ | ಸಿರಿ ಪತಿಯ

ದಯವ ಬಯಸುವ ಧೀರರು ಪ


ಒಂದೊಂದು ವಚನಗಳು ಗುರುತರಾ

ನಂದತೀರ್ಥರ ಭಾವಕೆ

ಹೊಂದಿಸುವ ಯುಕತಿ ಬಾಣ | ತೆಗೆಯಲವು

ಕುಂದಿಲ್ಲ ಧೀಷುಧಿಗಳು 1


ವಂದಿಸುವ ಜನ ಬೇಡಿದ ಫಲಗಳಿಗೆ

ಮಂದಾರು ತರು ಸನ್ನಿಭ | ತಾವು

ವಂದಿಸುವ ಶಿಷ್ಯರಿಗೆ | ಹೃದಯದಲ್ಲಿ

ಕುಂದ ಕುಸುಮದ ಮಾಲಿಕೆ | ತಾವು 2


ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆ

ಕುಲಿಶಗಳಂತಿಹವೆ ಅವರ ವಚನ

ಫಲಿಸುವ ಶ್ರೀ ವಾಸುದೇವ | ವಿಠಲನ

ಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ 3

***