Wednesday 1 September 2021

ಜಯ ಮುನಿಯ ಭಜಿಸಿ ಸಿರಿ ಪತಿಯ ದಯವ ಬಯಸುವ ಧೀರರು ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಜಯ ಮುನಿಯ ಭಜಿಸಿ | ಸಿರಿ ಪತಿಯ

ದಯವ ಬಯಸುವ ಧೀರರು ಪ


ಒಂದೊಂದು ವಚನಗಳು ಗುರುತರಾ

ನಂದತೀರ್ಥರ ಭಾವಕೆ

ಹೊಂದಿಸುವ ಯುಕತಿ ಬಾಣ | ತೆಗೆಯಲವು

ಕುಂದಿಲ್ಲ ಧೀಷುಧಿಗಳು 1


ವಂದಿಸುವ ಜನ ಬೇಡಿದ ಫಲಗಳಿಗೆ

ಮಂದಾರು ತರು ಸನ್ನಿಭ | ತಾವು

ವಂದಿಸುವ ಶಿಷ್ಯರಿಗೆ | ಹೃದಯದಲ್ಲಿ

ಕುಂದ ಕುಸುಮದ ಮಾಲಿಕೆ | ತಾವು 2


ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆ

ಕುಲಿಶಗಳಂತಿಹವೆ ಅವರ ವಚನ

ಫಲಿಸುವ ಶ್ರೀ ವಾಸುದೇವ | ವಿಠಲನ

ಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ 3

***


No comments:

Post a Comment