Showing posts with label ನಾರಾಯಣಯೆಂಬೊ ನಾಮವನು ನೆನೆದರೆ helavana katte. Show all posts
Showing posts with label ನಾರಾಯಣಯೆಂಬೊ ನಾಮವನು ನೆನೆದರೆ helavana katte. Show all posts

Tuesday 1 June 2021

ನಾರಾಯಣಯೆಂಬೊ ನಾಮವನು ನೆನೆದರೆ ankita helavana katte

ನಾರಾಯಣಯೆಂಬೊ ನಾಮವನು ನೆನೆದರೆ

ಹಾರಿ ಹೋಹುದು ಜನ್ಮಜನ್ಮದ ಪಾಪಗಳು

ಶ್ರೀರಮಣ ನಿಮ್ಮ ನಾಮಸ್ಮರಣೆ ನಿತ್ಯೆನಗೆ ದೊರೆಕಿಸಿ

ಮುಕ್ತಿದೋರಿಸು ಮುರಾರಿ ಪ.


ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ

ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ

ರಕ್ಷಣ್ಯವನು ಮಾಡಿ ಜಗದೊಳಗೆ ಖ್ಯಾತಿಯಲಿ

ಸುಕುಮಾರನೆನಿಸಿಕೊಂಡು

ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ

ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ-

ಮುಕನಾಗಿ ಮೈಮರೆದು ಅಜಮಿಳ ತಾನು ಪಾತಕವೆಂದು

ಅರಿತರಿಯದೆ 1

ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು

ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ

ಇಲ್ಲಿ ಬಾ ಅಂಜಬ್ಯಾಡೆಲೆ ಮುಗದÀವೆಂಗಳೆ

ಹುಲ್ಲೆನೋಟದ ಭಾವಕಿ

ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ

ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ

ಚೆಲ್ಲೆನ್ನಮ್ಯಾಲೆ ಕರುಣವನು ಕೋಮಲೆನಿಲ್ಲೆಂದು

ಸೆರಗ ಪಿಡಿದ 2

ಎಲೊ ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ

ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು

ಎಲ್ಲವುಗಳ ರಾಶಿ ಬೊಗಳುವ ಹಿಂಡು ನಾಯಿಗಳು

ಬಲು ಘೋರ ಎನಿಸಿಪ್ಪುದು

ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ

ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ

ಸಲೆ ಬಾಳಿ ಬದುಕಿ ನಾ ಸುಖದಲ್ಲಿ ಇಹೆನೆಂಬ

ಛಲವೊಂದೆ ಎನಗೆ ಎಂದ3

ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ

ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ

ಹೆತ್ತ ತಂದೆಯ ಕೇಳು ಸಮ್ಮತವಾದರೆ ಮತ್ತೆ

ನಿನಗೊಲಿವೆನೆಂ[ದಳು]

ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ

ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ

ಉತ್ತಮದ ಕುಲವನೀಡಾಡಿ ನೀ ಪಾತಕದ

ಮೊತ್ತಕೊಳಗಾಗದಿರೊ 4

ಆಗದಾಗದು ಎನ್ನ ಕುಲಬಂಧು ಬಳಗವÀನು

ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ

ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ

ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು

ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು

ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5

ಹಾಲಂತ ಕುಲವ ನೀರೊಳಗದ್ದಿಪೂರ್ವದ

ಶೀಲವನಳಿದು ಸತಿಯೊಡಗೂಡಿ ತಾನು ಚಾಂ-

ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ

ಆಲಂಬನದಲಿ ಅಜಾಮಿಳನು ಇರುತಿರಲಾಗ

ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು

ಜೋಲುದುಟಿ ಡೊಂಕು ಮಾರಿಲಭ್ರದಿಂ

ಯಮನಾಳುಗಳು ಇಳಿದರಾಗ 6

ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು

ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ]

ತುಡುಕಿ ಹಿಡಿ ಕೆಡೆಹಿ ಕಟ್ಟಿರೊ ಪಾತಕನನೆಂದು

ಘುಡುಘÀುಡಿಸುತಲಿ ನಿಂತರು

ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು

ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು

ಪಡೆದ ಮಗನ ನಾರಗನೆಂದು ಕರೆಯಲು ನುಡಿಯ

ಲಾಲಿಸಿದ ಸ್ವಾಮಿ 7

ಮರಣಕಾಲದಿ ಶ್ರೀಹರಿಯೆಂಬ ನಾಮವನು

ಸ್ಮರಣೆಯನು ಮಾಡಲು ಅವನ ಕೋಟಿಜನ್ಮದ ಪಾಪ

ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ

ಉರದೊಳೊಪ್ಪುವ ತುಳಸಿದಂಡೆ ಪೀತಾಂ-

ಬರವು ಗದೆ ಶಂಖ ಚಕ್ರ ದ್ವಾದಶನಾಮವನು

ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8

ಪುಂಡರೀಕಾಕ್ಷನ ಭೃತ್ಯನ ಭಾಧಿಸುವ

ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ

ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ

ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ-

ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ

ದಂಡವ ಮುರಿದವರನು ನಾ ಕಾಣೆ ನೀವೆ

ಉದ್ದಂಡರಹುದೆಂದರಾಗ 9

ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು

ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು

ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ

ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ

ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು

ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10

ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು

ಬಿದ್ದ ಕಾಯವನು ಭಾದಿಸಿದವರ್ಯಾರು ಉ-

ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ

ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ

ಅದ್ದಿದೆ ನೂರೊಂದು ಕುಲವ ನರಕದೊಳೆಂದು

ಹದ್ದಿನ ಬಾಯೊಳಗಿನುರಗನಂತಜಾಮಿಳನು ಇದ್ದ

ತಾನತಿ ಮರುಗುತ 11

ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ

ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು

ಒಪ್ಪಿ ಧಾರೆಯ ನೆರೆದ ಕುಲಸ್ರ್ತೀಯಳ ಬಿಟ್ಟು ಮದನ

ಬಾಧೆಗೆ ಸಿಲುಕಿ ದುಷ್ಟ

ತಾಪವ ಪೊತ್ತೆ ಜನನಿಂದಕನಾದೆ

ಅಪ್ರತಿಮ ಅನಂತಪಾತಕಿ ಭುವನದಲಿ

ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ

ವಿಧಿ ಎಂದನು 12

ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು

ದುಷ್ಟಯವÀುದೂತರನು ಕಂಡು ಚಂಡಾಲತಿಗೆ

ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು

ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ

ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ

ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ

ಗಟ್ಯಾಗಿ ಧ್ಯಾನಿಸಿದನು 13

ತನ್ನ ನಾಮವ ನೆನೆವ ಭಕ್ತರಾದವರೆಲ್ಲ

ಧನ್ಯರಿವರಹುದೆಂದು ಜಗವರಿಯಬೇಕೆಂದು

ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ

ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು

ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು

ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ .

ಸನ್ನಿಧಿಗೆ ನಡೆದ 14

ಜಲಜನಾಭನ ದಿವ್ಯನಾಮವನು ನೆನೆದರೆ

ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ

ಛಲವÀ ಮಾಡದೆ ನೀವು ಬನ್ನಿರೊ ನಮಗವರು

ಸಲುವರಲ್ಲೆಂದ ಯಮನು

ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ

ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ

ಸುಲಭನಹನು ಸ್ವಾಮಿ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15

****