Showing posts with label ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ jayesha vittala. Show all posts
Showing posts with label ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ jayesha vittala. Show all posts

Friday 27 December 2019

ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ ankita jayesha vittala

ಶ್ರೀ ಜಯೇಶವಿಠಲದಾಸರ ರಚನೆ 

 ರಾಗ ಸಿಂಹೇಂದ್ರಮಧ್ಯಮ     ಖಂಡಛಾಪುತಾಳ 

ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ ॥ ಪ ॥
ತೃಣಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ॥ ಅ ಪ ॥

ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ ।
ಪರಮ ಭಾಗವತ ಪದ ನಿನ್ನದಯ್ಯ ॥
ಮರುದಂಘ್ರಿ ಕಮಲಮಧುಮತ್ತ ಷಟ್ಪದ ದೊರೆಯೇ ।
ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ ॥ 1 ॥

ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ ।
ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ ॥
ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸೋ ।
ಪ್ರಾಪ್ತಿ ಪಾಲಿಸು ಬಿಂಬಮೂರ್ತಿ ದರುಶನ ಭೋಗ ॥ 2 ॥

ಮಾರುತಿಯ ಕೈಗಿತ್ತುದಾರ ಸಾಗರ ಶಂಭೋ ।
ಘೋರ ಭವಹರ ಹರಿಯ ದಾಸವರ್ಯ ॥
ಮಾರಮಣ ಜಯೇಶವಿಠ್ಠಲನ ಭಜನೆಯಲಿ ।
ಧೀರ ದಿವಿಜರ ಧೊರೆಯೆ ಸಾರಸುಖ ನೀಡೆನಗೆ ॥ 3 ॥