Showing posts with label ತೆರಳಿದರು ಶ್ರೀ ಜಗನ್ನಾಥ shreeda vittala jagannatha dasa stutih TERALIDARU SRI JAGANNATHA DASA JAGANNATHA DASA STUTIH. Show all posts
Showing posts with label ತೆರಳಿದರು ಶ್ರೀ ಜಗನ್ನಾಥ shreeda vittala jagannatha dasa stutih TERALIDARU SRI JAGANNATHA DASA JAGANNATHA DASA STUTIH. Show all posts

Friday 27 December 2019

ತೆರಳಿದರು ಶ್ರೀ ಜಗನ್ನಾಥ ankita shreeda vittala jagannatha dasa stutih TERALIDARU SRI JAGANNATHA DASA JAGANNATHA DASA STUTIH

Audio by Mrs. Nandini Sripad

ಶ್ರೀ ಕರ್ಜಗಿ ದಾಸಪ್ಪನವರ ಕೃತಿ  ( ಶ್ರೀದವಿಠಲಾಂಕಿತ ) 

ರಾಗ ಭೌಳಿ           ಖಂಡಛಾಪುತಾಳ 

ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥

ವರ ಶುಕ್ಲವತ್ಸರದ ಭಾದ್ರಪದ ಶಿತಪಕ್ಷ ।
ಹರಿವಾರ ನವಮಿಯಲ್ಲೀ ।
ಸುರಸಿದ್ಧಸಾಧ್ಯ ಸನ್ಮುನಿಗಣಾರ್ಚಿತ ಪಾದ ।
ಹರಿಯೆ ಪರನೆಂದೆನುತಲಿ ।
ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ ।
ಬೆರೆದು ಸುರ ಸಂದಣಿಯಲಿ ॥
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ।
ವರ ವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥

ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ।
ಖತಿ ದೂರರಿವರು ಜಗದೀ ।
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ।
ಅತಿಶಯದಿ ಪೇಳಿ ಇಹಕೆ ।
ಸತತವು ಶರಣರ್ಗೆ ಗತಿಯಾಗುವಂತೆ ಸ - ।
ತ್ಪಥವಿಡಿಸಿ ಕರುಣದಿಂದ ॥
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ।
ಮತಿದೋರಿ ಕೊಟ್ಟು ಸದ್ಗತಿಗೋಸುಗವಾಗಿ ॥ 2 ॥

ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ।
ಖೇಚರಾರೂಢ ಹರಿಯಾ ।
ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ।
ವೈಚಿತ್ರವನ್ನು ತೋರಿ ।
ಈ ಚರಾಚರದಿ ಸಂಗೀತ ಸಾಹಿತ್ಯದಲ್ಲಿ ।
ಪ್ರಾಚುರ್ಯವಂತರೆನಿಸೀ ॥
ಆ ಚತುರ್ದಶಭುವನಪತಿ ಶ್ರೀದವಿಟ್ಠಲನ ।
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ॥ 3 ॥
**********

ಶ್ರೀ ಜಗನ್ನಾಥದಾಸಾರ್ಯರ ಮೇಲೆ  ಶ್ರೀದವಿಠಲದಾಸರ ಕೃತಿ 
ರಾಗ ಭೂಪಾಳಿ    ಖಂಡಛಾಪುತಾಳ 

ತೆರಳಿದರು ಶ್ರೀ ಜಗನ್ನಾಥದಾಸಾರ್ಯರು
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥

ವರಶುಕ್ಲವತ್ಸರದ ಭಾದ್ರಪದ ಸಿತಪಕ್ಷ
ಹರಿವಾರ ನವಮಿಯಲ್ಲಿ
ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ
ಹರಿಯೆ ಪರನೆಂದೆನುತಲಿ
ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ
ಬೆರೆದು ಸುರಸಂದಣಿಯಲಿ
ಪರಮಾರ್ಥವೈದಿ ಮನ ಹರಿಯ ಪಾದದೊಳಿಟ್ಟು
ವರವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥

ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು
ಖತಿದೂರರಿವರು ಜಗದೀ
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ
ಅತಿಶಯದಿ ಪೇಳಿ ಇಹಕೆ
ಸತತವು ಶರಣರ್ಗೆ ಗತಿಯಾಗುವಂತೆ ಸ -
ತ್ಕಥೆ ಪಿಡಿಸಿ ಕರುಣದಿಂದ
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ
ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ ॥2॥

ಆಚರಣೆಯಲ್ಲಿ ಒಂದರಘಳಿಗೆ ಬಿಡದೆ ಬಲು
ಖೇಚರಾರೂಢ ಹರಿಯಾ
ಸೋಚಿತಾರಾಧನೆಯ ಮಾಡಿ ಮರೆಯದೆ ಮಹಾ
ವೈಚಿತ್ರ್ಯವನ್ನು ತೋರಿ 
ಈ ಚರಾಚರದಿ ಸಂಗೀತ ಸಾಹಿತ್ಯದಲಿ
ಪ್ರಾಚುರ್ಯವಂತರೆನಿಸೀ
ಆ ಚತುರ್ದಶಭುವನಪತಿ ಶ್ರೀದವಿಠಲನ 
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ॥3॥

https://drive.google.com/file/d/1Zo503EDCn-bNV3BxqYfW8qokZ2qEMOvc/view?usp=drivesdk
*********