Showing posts with label ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು gurushyamasundara. Show all posts
Showing posts with label ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು gurushyamasundara. Show all posts

Monday 6 September 2021

ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು ankita gurushyamasundara

 ರಾಗ: ಮಧ್ಯಮಾವತಿ ತಾಳ: ಏಕ

 

ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು


ವಂದಿಸುವ ಜನಸ್ತೋಮಕನುದಿನ

ಕುಂದು ಎಣಿಸದೆ ಬಂದ ಭಯಗಳ

ಇಂದುಧರನುತ ಗೋವಿಂದನೊಲುಮೆಲಿ

ಮಂದಹಾಸದಿ ನಗುತ ಹರುಷದಿ ಅ.ಪ

ಎಲ್ಲ ಕಾಲಕೆ ಇವರು ಶ್ರೀಲಕುಮಿವಲ್ಲಭ

ಮೂಲರಾಮನ ಭಜಕರು ಹೇಮಾದಿ ಅರಿಗಳ

ಲೀಲೆ ಇಂದಲಿ ಗೆದ್ದರು

ಕಾಲಕಾಲಕೆ ಲೋಲ ನೃಹರಿಯ

ಜಾಲತೋರಿದ ಭಜಿಪಜನರಘ

ಲೀಲೆಯಿಂದಲಿ ದೂರಗೈಸುತ 1

ತಾಪಸೋತ್ತಮರಿವರು ಸುಜ್ಞಾನವೀವರು

ಶಾಪಾನುಗ್ರಹ ಶಕ್ತರು ಬಲ್ಲವರಿಗೆಲ್ಲ

ಅಪಾರವರಗಳೀವರು

ಕೋಪರಹಿತರು ಶ್ರೀಪತೀಶನ ಪಾದದ್ವಯವನು ಧ್ಯಾನ

ಮಾಳ್ಪರು ತಾಪ ಕಳೆಯುತ ಭಕ್ತ ಜನರನು

ಪಾಪ ಕೂಪದಿಂ ಪಾರುಮಾಳ್ಪರು 2

ಕಾಮಾದಿ ವಿರಹಿತರು ಗುರುಶಾಮಸುಂದರನ

ನೇಮದಿ ಭಜಿಸುವರು ಕೋಮಲಕಾಯರು

ಸಾಮಾದಿ ವೇದ ಪ್ರಿಯರು

ಯಾಮಯಾಮಕೆ ಬರುವ ಭಕ್ತರ ಕಾಮಿತಾರ್ಥಗಳಿತ್ತು ಪೊರೆವರ

ಧಾಮ ಶ್ರೀಹರಿ ಮಾರ್ಗ ತೋರುವ ಉ-

ದ್ದಾಮ ಕರುಣೆ ಗುರುಗಳಿಲ್ಲೆ 3

***