Showing posts with label ಶ್ರೀಹರಿಯೇ ನಿನ್ನುಪಕೃತಿಯು ಮರೆಯ muddumohana vittala. Show all posts
Showing posts with label ಶ್ರೀಹರಿಯೇ ನಿನ್ನುಪಕೃತಿಯು ಮರೆಯ muddumohana vittala. Show all posts

Friday 27 December 2019

ಶ್ರೀಹರಿಯೇ ನಿನ್ನುಪಕೃತಿಯು ಮರೆಯ ankita muddumohana vittala


ಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮ
ಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾ
ಕಾಳಿಯ ದಮನಾ ಭುವನತ್ರಯಾಕ್ರಮಣ
ಪದ್ಮಾಲಯಾ ರಮಣ 1
ಧನದಮಾತಿರಲಿ ಗೋಧನದ ಮಾತಿರಲಿ
ಭೂ ಧನದ ಮಾತಿರಲಿ ಶೌರೀ
ಧನವೆಲ್ಲವೂ ಕರ್ಮವನು ಬೆನ್ಹಿಡಿದು
ಬಹದೆನುತಾಡುವರೊ ಮುರಾರಿ
ತನುವು ನಿನ್ನಯ ಸೇವೆಯನು ಮಾಡುತಿರಲಿ ಕಂಸಾರಿ
ಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿ
ಈ ಕೃಪೆಯಭೂರೀ ದುರ್ಜನವಿದಾರೀ
ಸುಜನೋಪಕಾರೀ ಗಿರಿನಾಥ ಧಾರೀ
ಪಾಪಹಾರಿ ದಿತಿಜಾರಿ ನಿರ್ವಿಕಾರಿ ಉದಾರಿ 2
ನಾಕದೊಳಗಿರಲಿ ಭೂಲೋಕದೊಳಗಿರಲಿ
ಅಧೋಲೋಕದೊಳಗಿರಲಿ ನಾನೂ
ಶ್ರೀಕಾಂತ ನಿನಗೆ ಬೇಕಾದವನೆನುತ್ತ
ಸಾಕಬೇಕೆನ್ನ ನೀನೂ ಭಕ್ತಜನಕಾಮಧೇನು
ಹೇಳಬೇಕಾದುದಿನ್ನೇನು 3
ಬಿದ್ದಿರುವೆನೈ ರಜೋಗುಣದಿ
ಒದ್ಯಾಡುತಿಹೆನೊ ಸಂಕಟದಿ
ಇದ್ದು ಫಲವೇನೊ ಈ ಭವದಿ
ಉದ್ಧರಿಸು ಕೃಪಾಜಲಧಿ 4
ಬದ್ಧನಾನಯ್ಯ ಈ ಜಗದಿ
ಶುದ್ಧಬುದ್ಧಿಯ ನೀಯೊ ಮುದದಿ
ಕೃದ್ಧನಾಗದಿರೆನ್ನ ದುಷ್ಕøತದಿ
ಎದ್ದು ಬಾರೆನ್ನಡಿಗೆ ದಯದಿ

ಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ
**********