Showing posts with label ಶ್ರೀನಿವಾಸ-ಶ್ರೀನಿವಾಸ ದೀನರಕ್ಷಕ ದಾನಿ ನೀನೆಂದು ನಂಬಿದೆ uragadrivasa vittala. Show all posts
Showing posts with label ಶ್ರೀನಿವಾಸ-ಶ್ರೀನಿವಾಸ ದೀನರಕ್ಷಕ ದಾನಿ ನೀನೆಂದು ನಂಬಿದೆ uragadrivasa vittala. Show all posts

Monday 2 August 2021

ಶ್ರೀನಿವಾಸ-ಶ್ರೀನಿವಾಸ ದೀನರಕ್ಷಕ ದಾನಿ ನೀನೆಂದು ನಂಬಿದೆ ankita uragadrivasa vittala

 ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ

ದಾನಿ ನೀನೆಂದು ನಂಬಿದೆ ಪ


ಜ್ಞಾನಗಮ್ಯನೆ ವಾಙ್ಮನೋಮಯ

ಮಾನಿ ಮಾನಸರಾಜಹಂಸ ಅ.ಪ


ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ

ಶ್ರೀಕಮಲಭವಾದಿವಂದಿತ

ಮುಕುತಾಮುಕುತಜನ ಸಂಸೇವಿತ

ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ

ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1


ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ-

ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ

ನೀಗಿಸಿ ವನವನವಾ ಚರಿಸಿದೆ

ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ

ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2


ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ

ಪ್ರಾಂತಕಾಣದೇ ನಿರಂತರದಿ ನಿಂತು

ಸಿರಿ ನಿತ್ಯಮುಕ್ತಳಾದಳೋ

ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ

ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3


ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ

ಸ್ವಪ್ರಯೋಜನರಹಿತ ಸತತ

ತ್ವತ್ಪ್ರಸಾದದಿಂದ ಜಗವು

ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ

ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4


ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ

ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ

ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ

ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5

****