Showing posts with label ಹರಿಕಥಾಮೃತಸಾರ ಸಂಧಿ 28 ankita jagannatha vittala ಗಣಪತಿ ಸ್ತೋತ್ರ ಸಂಧಿ HARIKATHAMRUTASARA SANDHI 28 GANAPATI STOTRA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 28 ankita jagannatha vittala ಗಣಪತಿ ಸ್ತೋತ್ರ ಸಂಧಿ HARIKATHAMRUTASARA SANDHI 28 GANAPATI STOTRA SANDHI. Show all posts

Wednesday 27 January 2021

ಹರಿಕಥಾಮೃತಸಾರ ಸಂಧಿ 28 ankita jagannatha vittala ಗಣಪತಿ ಸ್ತೋತ್ರ ಸಂಧಿ HARIKATHAMRUTASARA SANDHI 28 GANAPATI STOTRA SANDHI

    

1st Audio by Mrs. Nandini Sripad

by madhwa community in Dallas, Texas

ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ

ಗಣಪತಿ ಸ್ತೋತ್ರ ಸಂಧಿ 28  ರಾಗ - ಹಂಸಧ್ವನಿ 


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ

ಪರಮ ಭಗವದ್ ಭಕ್ತರಿದನಾದರದಿ ಕೇಳುವುದು ||


ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು

ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ

ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ

ಮಹದಾಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ||೧||


ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ

ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು

ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ

ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ||೨||


ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ ಮಹದೋ ಷಘ್ನ ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ

ಲಗ್ನವಾಗಲಿ ನಿತ್ಯಾನರಕಭಯಾಗ್ನಿಗಳಿಗಾನಂಜೆ ಗುರುವರ ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ||೩||

ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ|

ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆ

ಲಕುಮೀವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ||೪||


ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿ

ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ|

ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿ

ತ್ವತ್ಪಾ ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ||೫||


ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭ

ಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ|

ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗ

ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ ||೬||


ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು

ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು|

ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳ

ಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ||೭||

ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಶೃಂಗಗ

ದಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ|

ಮೂಷಕಾಸುರ ವಾಹನ ಪ್ರಾಣಾವೇಶಯುತ ಪ್ರಖ್ಯಾತ

ಪ್ರಭು ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ||೮||


ಶಂಕರಾತ್ಮಜ ದೈತ್ಯರಿಗತಿಭಯಂಕರಗತಿಗಳೀಯಲೋಸುಗ ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು|

ಮಂಕುಗಳ ಮೋಹಿಸುವೆ ಚಕ್ರಧರಾಂಕಿತನೆ ದಿನದಿನದಿ

ತ್ವತ್ಪದ ಪಂಕಜಗಳಿಗೆ ಎರಗಿ ಬಿನ್ನಯಿಸುವೆನು ಪಾಲಿಪುದು||೯||


ಸಿದ್ಧವಿದ್ಯಾಧರಗಣಸಮಾ ರಾಧ್ಯ ಚರಣಸರೋಜ

ಸರ್ವಸುಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ|

ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿವಿರಕ್ತಿನಿರುತನ

ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ||೧೦||


ರಕ್ತವಾಸದ್ವಯವಿಭೂಷಣ ಉಕ್ತಿಲಾಲಿಸು ಪರಮ

ಭಗವದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ|

ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ||೧೧||


ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು

ಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ|

ಚಕ್ರವರ್ತಿ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ

ವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು||೧೨||


ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ

ಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ|

ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮ

ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ||೧೩||


ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪ

ಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು|

ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ||೧೪||


ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯನಿಯಮನ

ಜ್ಞಾನತ್ರಯಪ್ರದ ಬಣ್ಧ್ಮೋಚಕ ಸುಮನಸಾಸುರರ |

ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನ

ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು||೧೫||

ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿ

ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು|

ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತಯಿಸು ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ||೧೬||


ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ ಪ್ರಾಣಪತಿತತ್ತ್ವೇಶರಿಂದೊಡಗೂಡಿ ಗುಣಕಾರ್ಯ|

ತಾನೆ ಮಾಡುವನೆಂಬ ಈ ಸುಜ್ಞಾನವೆ ಕರುಣಿಸುವುದೆಮಗೆ

ಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು||೧೭||


ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರಕಲ್ಪ

ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ|

ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯ

ಗಳಾ ಕ್ರಮಿಸಿ ದಣಿಸುತಲಿಹವು ಭವದೊಳಗಾವಕಾಲದಲಿ ||೧೮||


ಜಯಜಯತು ವಿಘ್ನೇಶ ತಾಪ ತ್ರಯವಿನಾಶನ ವಿಶ್ವಮಂಗಳ

ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ|

ಜಯಜಯತು ಚಾರ್ವಾಂಗ ಕರುಣಾನಯನದಿಂದಲಿ ನೋಡಿ

ಜನ್ಮಾಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ||೧೯||


ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ

ಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು|

ನಡುನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮಕೀರ್ತನೆ

ನುಡಿನುಡಿಗೆ ಎನ್ನಿಂದ ಪ್ರತಿದಿವಸದಲಿ ಮರೆಯದಲೆ||೨೦||


ಏಕವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ

ಮೈನಾಕಿತನಯಾಂತರ್ಗತ ಶ್ರೀಪ್ರಾಣಪತಿಯೆನಿಪ|

ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ

ತಾ ಕೊಡುವ ಸೌಖ್ಯಗಳ ಭಕುತರಿಗಾವ ಕಾಲದಲಿ||೨೧||

**********


Harikathamrutasara gurugala

Karunadindapanitu peluve

Parama bhagavadbhaktaridanadaradi keluvudu


Shrishanamghri sarojabhrunga ma

Heshasambhava manmanadolu pra

Kashisanudina prarthisuve prematishayadinda

Ni salahu sajjanara veda

Vyasa karunapatra mahada

Kashapati karunalu kaipididemmanuddharisu||1||


Ekadanta ibhendramukha cha

Mikarakruta bhushananga kru

Pa kathashaadi nodu vignanapisuveninitendu

Nokaniyana tutisutippa vi

Vekigala sahavasa sukhagala

Ni karunisuvudemage santata paramakarunalu||2||


Vighnarajane durvishayadolu

Magnavagiha manavu mahado

Shaghnanghri sarojayugaladi bhaktipurvakadi

Lagnavagali nitya naraka bha

Yagnigaligananje guruvara

Bhagnagaisennavagunagalanu pratidivasadalli||3||


Dhanapa vishvaksena vaidya

Shvinigalige sariyenipa shanmukha

Nanuja sheshashatastha devottamma viyadganga

Vinuta vishvopasakane sa

Nmanadi vignanapisuve lakumi

Vaniteyarasana bhaktijnanava kottu saluhuvudu||4||


Charudeshnahvayanenisi ava

Tara madide rukminiyali

Gouriyarasana varadi uddhatarada rakshaasara

Shouriyajnanadi samharisi bhu

Bharaviluhida karuni tvatpa

Daravindake namipe karunipudemage sanmatiya||5||


Shurpakarnadvaya virajita kam

Darpashara uditarkasannibha

Sarpavara katisutra vaikruitagatra sucharitra

Svarpitankusha pashakara khala

Darbhanjana karmasakshiiga

Tarpakanu ninagi truptiya padisu sajjanara||6||


Khesha parama subhaktipurvaka

Vyasakruta granthagalanaritu pra

Yasavillade baredu vistarisideyo lokadolu

Pashapaniye prarthisuvenupa

Deshisenagadararthagala karu

Nasamudra krupakatakshaadi noduva pratidinadi||7||


Shrishanatinirmala sunabhi

Deshavasthita rakta gandha

Tishobhitagatra lokapavitra suramitra

Mushakasuvaravahana prana

Veshayuta prakhyata prabhu pu

Raisu bhaktaru bedidishtarthagala prati dinadi||8||


Shankaratmaja daityarigati bha

Yankaragatigaliya losuga

Sankata chaturthiganenisi ahitarthagala kottu

Mankugala mohisuve chakrada

Rankitana dinadinadi tvatpada

Pankajagalige binnaisuvenu palipudu emma||9||


Siddha vidyadharagana sama

Radhya charanasaroja sarvasu

Siddhidayaka shighradim palipudu binnapava

Buddhi vidya jnana bala pari

Shuddha bhakti virakti nirutana

Vadyana smrutililegala sustavana vadanadali||10||


Raktavasadvaya vibhushana

Ukti lalisu paramabhagava

Dbhaktavara bhavyatma bhagavatadishastradali

Saktavagali manavu vishaya

Virakti palisu vidhvadhadhya vi

Muktanendenisenna bhavabhayadindalanudunadi||11||


Shukra shishyara samharipudake

Shakra ninnanu pujisidanu u

Rukrama shriramachandranu setumukhadalli

Chakravartipa dharmarajanu

Chakrapaniya nudige bhajisida

Vakratundane ninnolentuto Ishanugrahavu||12||


Kouravendranu ninna bhajisada

Karanadi nijakula sahita sam

Hara aidida guruvara vr^ikodarana gadeyinda

Tarakantakananuja enna

Shariradolu ninintu dharma

Prerakanu ninagi santaisenna karunadali||13||


Ekavimshati modaka priya

Mukaranu vagnangnigala malpe kru

Pakaresha kruitajnana kamada kayo kaipididu

Lekhakagrani manmanada du

Rvyakulava pariharisu dayadi pi

Naki bharya tanuja mrudbhava prarthisuve ninna||14||


Nitya mangala charita jagadu

Tpattisthiti laya niyamana jnana

Natrayapada bandhamochaka sumanasasura

Chittavruittigalante nadeva pra

Mattanalla suhrujjanaptana

Nityadali nenenenedu sukhisuva bhagya karunipudu||15||


Panchabheda jnanavarupu vi

Rinchijanakana toru manadali

Vanchitaprada olumeyimdali dasanendaridu

Panchavaktrana tanaya bhavadolu

Vanchisade santaisu vishayadi

Sancharidandadali madu manadikaranagala||16||


Enu beduvudilla ninna ku

Yonigalu baralanje lakumi

Pranapati tatvesharindodagudi gunakarya

Tane maduvanenba I su

Jnanavane karunisuvudemage ma

Hanubhava muhurmuhuh prarthisuveninitendu||17||


Namo namo guruvarya vibudho

Ttama vivarjitanidra kalpa

Drumanenipe bhajakarige bahugunabharita shubhacharita

Umeya nandana pariharisa

Hanmamate buddhyadin driyagala

Kramisi danisutalihavu bhavadolagava kaladali||18||


Jayajayatu vighnesha tapa

Trayavinashana vishvamangala

Jayajayatu vidyapradayaka vitabhayashoka

Jayajayatu charvanga karuna

Nayanadindali nodi januma

Maya mrutigalanu pariharisu bhaktarige bhavadolage||19||


Kadukaruni ninendaridu he

Rodala namisuve ninnadige bem

Bidade palisu parama karunasindhu endendu

Nadu naduve barutippa vighnava

Tadedu bhagavannama kirtane

Nudidu nudisenninda prati divasadali mareyadale||20||


Ekavimshati padagalenisuva

Kokanada navamalikeya mai

Nakitanayantargata shripranapatiyenipa

Shrikara jagannathavitthala

Svikarisi svargapavargadi

Ta koduva soukhyagala bhaktarigava kaladali||21||

***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀಶನಂಘ್ರಿ ಸರೋಜಭೃಂಗ ಮಹೇಶಸಂಭವ ಮನ್ಮನದೊಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದವ್ಯಾಸ ಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು...

18ನೇ ಕಕ್ಷ್ಯದ ದೇವತೆ, ಶ್ರೀ ವಿಶ್ವಂಭರನಾಮಕನ ಪರಮೋಪಾಸಕ, ಮೊದಲಿಗೆ ಪೂಜೆಗಳನ್ನು ಗೈವ, ವಿಘ್ನಗಳನ್ನು ಕಳೆಯುವ, ಶ್ರೀ  ವೇದವ್ಯಾಸದೇವರ ಪ್ರೀತಿಪಾತ್ರನಾದ, ಶ್ರೀ  ಮಹಾ ಗಣಪತಿಯ ವಿಶೇಷ ದಿನವಾದ ಗಣೇಶ ಚತುರ್ಥಿಯ ಶುಭಾಶಯಗಳು... , ಮಹಾಗಣಾಧಿಪತಿ  ಸದಾ ನಮಗೆ  ಪರಮಾತ್ಮನಲಿ  ನಿಜ ಭಕ್ತಿ ವೈರಾಗ್ಯಗಳು ನೀಡುವಂತೆ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತಾ......ನಮ್ಮ ಹರಿದಾಸ ಸಾಹಿತ್ಯದ ಹಿರಿಯ ಅಪರೋಕ್ಷಜ್ಞಾನಿಗಳು, ಯತಿಗಳು,  ದಾಸಾರ್ಯರು ಆಕಾಶಾಧಿಪತಿಯನ್ನು  ತಮ್ಮ ಕೃತಿಗಳಲ್ಲಿ ವಿಧವಿಧವಾಗಿ ಹಾಡಿ ಹೊಗಳಿ, ಸ್ತುತಿಸಿ ನಮಗೆ ನೀಡಿರುವುದು ನಮ್ಮ ಸೌಭಾಗ್ಯವೇ ಸರಿ... ಆ ಎಲ್ಲ ಕೃತಿಗಳ ಅವಲೋಕನ, ಗಾಯನದ ಸೇವೆ ನಡೆಯುವಂತಾಗಲಿ.... 

ವಿಶೇಷ :- ಇಂದು ಶ್ರೀ ಜಗನ್ನಾಥ ದಾಸರ ವಿಘ್ನೇಶಸಂಧಿಯನ್ನು ಪಾರಾಯಣ ಮಾಡುವುದು ಶ್ರೇಷ್ಠ... ತತ್ವಸುವ್ವಾಲಿಯ ಗಣಪತಿಯ ಸ್ತುತಿಯೂ..... 
ಶ್ರೀಮದಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ತಿಳಿಸಿ ಕೊಟ್ಟಂತಹಾ ಕ್ಷಿಪ್ರಪ್ರಸಾದಾಯನಮಃ ಎನ್ನುವ ಮಂತ್ರವನ್ನೂ ಪಠಣೆ ಮಾಡೋಣ..... 

ಮತ್ತೆ ಶ್ರೀಮದ್ವ್ಯಾಸರಾಜ ಮಠದ ಪರಮ ಯೋಗೀಶ್ವರಾದ, ಶ್ರೀಮದ್ ವಿದ್ಯಾರತ್ನಾಕರ ತೀರ್ಥರ ಪ್ರೀತಿಯ ಕಂದ, ಶ್ರೀಮದ್ ವಿದ್ಯಾಪ್ರಸನ್ನತೀರ್ಥರ ಗುರುಗಳು ಆದ ಶ್ರೀಮದ್ ವಿದ್ಯಾವಾರಿಧಿತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ ಶ್ರೀರಂಗಂ ದಲ್ಲಿ... 

ಹಾಗೆಯೇ ಮಾನವಿ ಗುಂಡಾಚಾರ್ಯರ ಗುರುಗಳು, ಆಸುಕವಿಗಳು, ಅಭಿಮನ್ಯುವಿನ ಅಂಶಜರೆಂದೇ ಸ್ತುತಿಸಲ್ಪಡುವ ಶ್ರೀ  ಅಸ್ಕಿಹಾಳ ಗೋವಿಂದದಾಸರ  ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ.. ನಾಳೆ ಮಧ್ಯಾರಾಧನೆ ಹೀಗಾಗಿ ದಾಸರ ಅನುಗ್ರಹವೂ ಪಡೆಯಲು ಸೇವೆ ಸಲ್ಲಿಸುವಂತಾಗಲಿ..... 

ಶ್ರೀ ದಾಸಾರ್ಯರ, ಶ್ರೀ ವಾರಿಧಿತೀರ್ಥರ ಅಂತರ್ಗತ ಗಣಪತಿಯ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಶ್ವಂಭರ ನಾಮಕ ಪರಮಾತ್ಮನು ಸದಾ ನಮಗೆ ಸಾಧನೆ ಮಾರ್ಗದಲಿ ನಡೆಯಲು ವಿಘ್ನಗಳನ್ನು ಕಳೆಯುವಂತೆ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 

***


ಹರಿಕಥಾಮೃತಸಾರದ ವಿಘ್ನೇಶ್ವರಸ್ತೋತ್ರಸಂಧಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು
ಪೇಳುವೆ ಪರಮ ಭಗವದ್ ಭಕ್ತರಿದನಾದರದಿ ಕೇಳುವುದು

ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು
ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ ಮಹದಾ
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ೧

ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ
ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು
ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ
ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ೨

ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ
ಮಹದೋಷಘ್ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಿಸು ನಿತ್ಯಾನರಕಭಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ೩

ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ
ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ
ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆ ಲಕುಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ೪

ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿ
ತ್ವತ್ಪಾದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ೫

ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭ
ಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ ೬

ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು
ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು
ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳ
ಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ೭

ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಗಂಧಾ
ತೀಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಿಕವರವಾಹನ ಪ್ರಾಣಾವೇಶಯುತ ಪ್ರಖ್ಯಾತ ಪ್ರಭು
ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ ೮

ಶಂಕರಾತ್ಮಜ ದೈತ್ಯರಿಗತಿಭಯಂಕರಗತಿಗಳೀಯಲೋಸುಗ
ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು
ಮಂಕುಗಳ ಮೋಹಿಸುವೆ ಚಕ್ರಧರಾಂಕಿತಗೆ ಅತಿಪ್ರಿಯ ತ್ವತ್ಪದ
ಪಂಕಜಗಳಿಗೆರಗಿ ಬಿನ್ನಯಿಸುವೆನು ಪಾಲಿಪುದು ೯

ಸಿದ್ಧವಿದ್ಯಾಧರಗಣಸಮಾರಾಧ್ಯ ಚರಣಸರೋಜ ಸರ್ವಸು
ಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ
ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿವಿರಕ್ತಿನಿರುತನ
ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ೧೦

ರಕ್ತವಾಸದ್ವಯವಿಭೂಷಣ ಉಕ್ತಿ ಲಾಲಿಸು ಪರಮಭಗವ
ದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ
ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ೧೧

ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು
ಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತಿಪ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು ೧೨

ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ
ಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ
ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮ
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ೧೩

ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೆ
ಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು
ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ
ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ೧೪

ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯನಿಯಮನ
ಜ್ಞಾನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು ೧೫

ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು
ಪಂಚವಕ್ತ್ರನ ತನಯ ಭವದೊಳುವಂಚಿಸದೆ ಸಂತಯಿಸು
ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ ೧೬

ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ
ಪ್ರಾಣಪತಿತ್ತ್ವೇಶರಿಂದೊಡಗೂಡಿ ಗುಣಕಾರ್ಯ ತಾನೆ ಮಾಡುವನೆಂಬ
ಈ ಸು ಜ್ಞಾನವೆ ಕರುಣಿಸುವುದೆಮಗೆ
ಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು ೧೭

ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರ ಕಲ್ಪ
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ
ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯಗಳಾಕ್ರಮಿಸಿ
ದಣಿಸುತಲಿಹವು ಭವದೊಳಗಾವಕಾಲದಲಿ ೧೮

ಜಯಜಯತು ವಿಘ್ನೇಶ ತಾಪತ್ರಯವಿನಾಶನ ವಿಶ್ವಮಂಗಳ
ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯಜಯತು ಚಾರ್ವಾಂಗ ಕರುಣಾನಯನದಿಂದಲಿ ನೋಡಿ
ಜನ್ಮಾಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ ೧೯

ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ
ಬೆಂಡಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು
ನಡುನಡುವೆ ಬರುತಿಪ್ಪ ವಿಘ್ನವತಡೆದು ಭಗವನ್ನಾಮಕೀರ್ತನೆ
ನುಡಿದು ನುಡಿಸು ಎನ್ನಿಂದ ಪ್ರತಿದಿವಸದಲಿ ಮರೆಯದಲೆ ೨೦

ಏಕವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ
ಮೈನಾಕಿತನಯಾಂತರ್ಗತ ಶ್ರೀಪ್ರಾಣಪತಿಯೆನಿಪ
ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೊಡಲಿ ಸೌಖ್ಯಗಳ ಭಕುತರಿಗಾವ ಕಾಲದಲಿ ೨೧

ಶ್ರೀಕೃಷ್ಣಾರ್ಪಣಮಸ್ತು.

*********


|| ೨೮ನೇಯ ಸಂಧಿ ||
ಶ್ರೀಜಗನ್ನಾಥದಾಸ ವಿರಚಿತ ಶ್ರೀವಿಘ್ನೇಶ್ವರ ಸಂಧಿ

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೇ
ಪರಮಭಗವದ್ಭಕ್ತರಿದನಾದರದಿ ಕೇಳುವುದು ॥೧॥

ಶ್ರೀಶನಂಘ್ರಿಸರೋಜಭೃಂಗ ಮ-
ಹೇಶಸಂಭವ ಮನ್ಮನದೋಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೇ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ-
ವ್ಯಾಸಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೇಮ್ಮನುದ್ಧರಿಸು ॥೨॥

ಏಕದಂತ ಇಭೇಂದ್ರಮುಖ ಚಾ-
ಮೀಕರಕೃತಭೂಷಣಾಂಗ ಕೃ-
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೇ ಇನಿತೇಂದು
ನೋಕನೀಯನ ತುತಿಸುತಿಪ್ಪ ವಿ-
ವೇಕಿಗಳ ಸಹವಾಸಸುಖಗಳ
ನೀ ಕರುಣಿಸುವದೇಮಗೇ ಸಂತತ ಪರಮಕರುಣದಲಿ॥೩॥

ವಿಘ್ನರಾಜನೇ ದುರ್ವಿಷಯದೋಳು
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಲಿ ನಿತ್ಯ ನರಕಭ-
ಯಾಗ್ನಿಗಳಿಗಾನಂಜೇ ಗುರುವರ
ಭಗ್ನಗೈಸೇನ್ನವಗುಣಗಳನು ಪ್ರತಿದಿವಸದಲ್ಲಿ॥೪॥


ಧನಪ ವಿಷ್ವಕ್ಸೇನ ವೈದ್ಯಾ-
ಶ್ವಿನಿಗಳಿಗೇ ಸರಿಯೇನಿಪ ಷಣ್ಮುಖ-
ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ-
ವಿನುತ ವಿಶ್ವೋಪಾಸಕನೇ ಸ-
ನ್ಮನದಿ ವಿಜ್ಞಾಪಿಸುವೇ ಲಕುಮಿ
ವನಿತೇಯರಸನ ಭಕ್ತಿಜ್ಞಾನವ ಕೋಟ್ಟು ಸಲಹುವದು॥೫॥

ಚಾರುದೇಷ್ಣಾಹ್ವಯನೇನಿಸಿ ಅವ-
ತಾರ ಮಾಡಿದೇ ರುಗ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂ-
ಭಾರವಿಳುಹಿದ ಕರುಣಿ ತ್ವತ್ಪಾ-
ದಾರವಿಂದಕೇ ನಮಿಪೇ ಕರುಣಿಪುದೇಮಗೇ ಸನ್ಮತಿಯ॥೬॥

ಶೂರ್ಪಕರ್ಣದ್ವಯ ವಿಜಿತಕಂ-
ದರ್ಪಶರ ಉದಿತಾರ್ಕಸನ್ನಿಭ
ಸರ್ಪವರಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ-
ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ॥೭॥

ಖೇಶ ಪರಮಸುಭಕ್ತಿಪೂರ್ವಕ
ವ್ಯಾಸಕೃತಗ್ರಂಥಗಳನರಿತು ಪ್ರ-
ಯಾಸವಿಲ್ಲದೇ ಬರೇದು ವಿಸ್ತರಿಸಿದೇಯೋ ಲೋಕದೋಳು
ಪಾಶಪಾಣಿಯೇ ಪ್ರಾರ್ಥಿಸುವೇ ಉಪ-
ದೇಶಿಸೇನಗದರರ್ಥಗಳ ಕರು-
ಣಾಸಮುದ್ರ ಕೃಪಾಕಟಾಕ್ಷದಿ ನೋಡು ಪ್ರತಿದಿನದಿ॥೮॥

ಶ್ರೀಶನತಿನಿರ್ಮಲಸುನಾಭೀ-
ದೇಶವಸ್ಥಿತ ರಕ್ತಶ್ರೀಗಂ-
ಧಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಕಾಸುರವಹನ ಪ್ರಾಣಾ-
ವೇಶಯುತ ಪ್ರಖ್ಯಾತ ಪ್ರಭು ಪೂ-
ರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿದಿನದಿ॥೯॥

ಶಂಕರಾತ್ಮಜ ದೈತ್ಯರಿಗತಿಭ-
ಯಂಕರ ಗತಿಗಳೀಯಲೋಸುಗ
ಸಂಕಟಚತುರ್ಥಿಗನೇನಿಸಿ ಅಹಿತಾರ್ಥಗಳ ಕೋಟ್ಟು
ಮಂಕುಗಳ ಮೋಹಿಸುವೇ ಚಕ್ರದ-
ರಾಂಕಿತನೇ ದಿನದಿನದಿ ತ್ವತ್ಪದ-
ಪಂಕಜಗಳಿಗೇ ಬಿನ್ನಯಿಸುವೇನು ಪಾಲಿಪುದು ಏಮ್ಮ ॥೧೦॥

ಸಿದ್ಧವಿದ್ಯಾಧರ ಗಣಸಮಾ-
ರಾಧ್ಯಚರಣಸರೋಜ ಸರ್ವಸು-
ಸಿದ್ಧಿದಾಯಕ ಶೀಘ್ರದಿಂ ಪಾಲಿಪುದು ಬಿನ್ನಯಿಪೇ
ಬುದ್ಧಿವಿದ್ಯಾಜ್ಞಾನಬಲ ಪರಿ-
ಶುದ್ಧಭಕ್ತಿವಿರಕ್ತಿ ನಿರುತನ-
ವದ್ಯನ ಸ್ಮೃತಿಲೀಲೇಗಳ ಸುಸ್ತವನ ವದನದಲಿ॥೧೧॥

ರಕ್ತವಾಸದ್ವಯ ವಿಭೂಷಣ
ಉಕ್ತಿ ಲಾಲಿಸು ಪರಮಭಗವ-
ದ್ಭಕ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯವಿ-
ರಕ್ತಿ ಪಾಲಿಸು ವಿದ್ವದಾದ್ಯ ವಿ-
ಮುಕ್ತನೇಂದೇನಿಸೇನ್ನ ಭವಭಯದಿಂದಲನುದಿನದಿ॥೧೨॥

ಶುಕ್ರಶಿಷ್ಯರ ಸಂಹರಿಪುದಕೇ
ಶಕ್ರ ನಿನ್ನನು ಪೂಜಿಸಿದನು ಉ-
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತೀಪ ಧರ್ಮರಾಜನು
ಚಕ್ರಪಾಣಿಯ ನುಡಿಗೇ ಭಜಿಸಿದ
ವಕ್ರತುಂಡನೇ ನಿನ್ನೋಳೇಂತುಟೋ ಈಶನುಗ್ರಹವು ॥೧೩॥

ಕೌರವೇಂದ್ರನು ನಿನ್ನ ಭಜಿಸದ
ಕಾರಣದಿ ನಿಜಕುಲಸಹಿತ ಸಂ-
ಹಾರವೈದಿದ ಗುರುವರ ವೃಕೋದರನ ಗದೇಯಿಂದ
ತಾರಕಾಂತಕನನುಜ ಏನ್ನ ಶ-
ರೀರದೋಳು ನೀ ನಿಂತು ಧರ್ಮ-
ಪ್ರೇರಕನು ನೀನಾಗಿ ಸಂತೈಸೇನ್ನ ಕರುಣದಲಿ॥೧೪॥

ಏಕವಿಂಶತಿಮೋದಕಪ್ರಿಯ
ಮೂಕರನು ವಾಗ್ಮಿಗಳ ಮಾಳ್ಪೇ ಕೃ-
ಪಾಕರೇಶ ಕೃತಜ್ಞ ಕಾಮದ ಕಾಯೋ ಕೈಪಿಡಿದು
ಲೇಖಕಾಗ್ರಣಿ ಮನ್ಮನದ ದು-
ರ್ವ್ಯಾಕುಲವ ಪರಿಹರಿಸು ದಯದಿ ಪಿ-
ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೇ ನಿನ್ನ॥೧೫॥

ನಿತ್ಯಮಂಗಳಚರಿತ ಜಗದು-
ತ್ಪತ್ತಿಸ್ಥಿತಿಲಯನಿಯಮನ ಜ್ಞಾ-
ನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೇ ನಡೇವ ಪ್ರ-
ಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೇನೇ ನೇನೇದು ಸುಖಿಸುವ ಭಾಗ್ಯ ಕರುಣಿಪುದು॥೧೬॥

ಪಂಚಭೇದಜ್ಞಾನವರುಪು ವಿ-
ರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಓಲುಮೇಯಿಂದಲಿ ದಾಸನೇಂದರಿದು
ಪಂಚವಕ್ತ್ರನ ತನಯ ಭವದೋಳು
ವಂಚಿಸದೇ ಸಂತೈಸು ವಿಷಯದಿ
ಸಂಚರಿಸದಂದದಲಿ ಮಾಡು ಮನಾದಿಕರಣಗಳ॥೧೭॥

ಏನು ಬೇಡುವದಿಲ್ಲ ನಿನ್ನ ಕು-
ಯೋನಿಗಳು ಬರಲಂಜೇ ಲಕಮಿ-
ಪ್ರಾಣಪತಿ ತತ್ತ್ವೇಶರಿಂದೋಡಗೂಡಿ ಗುಣಕಾರ್ಯ
ತಾನೇ ಮಾಡುವನೇಂಬ ಈ ಸು-
ಜ್ಞಾನವನೇ ಕರುಣಿಸುವದೇಮಗೇ ಮ-
ಹಾನುಭಾವ ಮುಹುರ್ಮುಹುಃ ಪ್ರಾರ್ಥಿಸುವೇ ಇನಿತೇಂದು ॥೧೮॥

ನಮೋ ನಮೋ ಗುರುವರ್ಯ ವಿಬುಧೋ-
ತ್ತಮ ವಿವರ್ಜಿತನಿದ್ರ ಕಲ್ಪ-
ದ್ರುಮನೇನಿಪೇ ಭಜಕರಿಗೇ ಬಹುಗುಣಭರಿತ ಶುಭಚರಿತ
ಉಮೇಯ ನಂದನ ಪರಿಹರಿಸಹಂ-
ಮಮತೇ ಬುಧ್ದ್ಯಾದಿಂದ್ರಿಯಗಳಾ-
ಕ್ರಮಿಸಿ ದಣಿಸುತಲಿಹವು ಭವದೋಳಗಾವಕಾಲದಲಿ॥೧೯॥

ಜಯಜಯತು ವಿಘ್ನೇಶ ತಾಪ-
ತ್ರಯವಿನಾಶನ ವಿಶ್ವಮಂಗಳ
ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯ ಜಯತು ಚಾರ್ವಂಗ ಕರುಣಾ-
ನಯನದಿಂದಲಿ ನೋಡಿ ಜನುಮಾ-
ಮಯ ಮೃತಿಗಳನು ಪರಿಹರಿಸು ಭಕ್ತರಿಗೇ ಭವದೋಳಗೇ॥೨೦॥

ಕಡುಕರುಣಿ ನೀನೇಂದರಿದು ಹೇ-
ರೋಡಲ ನಮಿಸುವೇ ನಿನ್ನಡಿಗೇ ಬೇಂ-
ಬಿಡದೇ ಪಾಲಿಸು ಪರಮಕರುಣಾಸಿಂಧು ಏಂದೇಂದು
ನಡುನಡುವೇ ಬರುತಿಪ್ಪ ವಿಘ್ನವ
ತಡೇದು ಭಗವನ್ನಾಮ ಕೀರ್ತನೇ
ನುಡಿದು ನುಡಿಸೇನ್ನಿಂದ ಪ್ರತಿದಿವಸದಲಿ ಮರೇಯದಲೇ ॥೨೧॥

ಏಕವಿಂಶತಿ ಪದಗಳೇನಿಸುವ
ಕೋಕನದ ನವಮಾಲಿಕೇಯ ಮೈ-
ನಾಕಿತನಯಾಂತರ್ಗತಶ್ರೀಪ್ರಾಣಪತಿಯೇನಿಪ
ಶ್ರೀಕರ ಜಗನ್ನಾಥವಿಠ್ಠಲ
ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೋಡುವ ಸೌಖ್ಯಗಳ ಭಕ್ತರಿಗಾವಕಾಲದಲಿ॥೨೨॥
***