Showing posts with label ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು helavana katte. Show all posts
Showing posts with label ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು helavana katte. Show all posts

Tuesday 1 June 2021

ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ankita helavana katte

 ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ

ದೇವ ಬ್ರಾಹ್ಮರ ಮನ್ನಿಸುತಲೆ ರಾಜ್ಯವ ಆಳು ನೀ

ಸುತನ ಮುಂದಿಟ್ಟು 151

ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ

ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152

ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ

ನಾನು ಅಂಜಿ ಮಾನವರಪವಾದಕ್ಕೆ ದೇಹತ್ಯಾಗವನೆ

ಮಾಡುವೆನು 153

ರಣದೊಳು ಬಿದ್ದರೆ ಜಗದೊಳು ಕೀರ್ತಿಯು

ಅಮರಲೋಕಕ್ಕೆ ವಶವಹರು

ಬರಿದು ಸಾಯುವರೆ ನಿನ್ನಂಥ ಪರಾಕ್ರಮಿ ಯಮನ

ಭಾಧೆಗೆ ಗುರಿಯಾಗಿ 154

ಪೃಥುವೀಶರೊಳು ತಲೆ ತಗ್ಗಿಸಿದಂತಾಯಿತು

ವ್ಯರ್ಥವಾಯಿತು ಎನ್ನ ಬದುಕು

ಹೊತ್ತಿರಲಾರೆ ದೇಹವ ನೀಕ್ಷಣದಲಿ ಹತ್ಯೆ

ಮಾಡಿಕೊಂಬೆನೆಂದ 155

ನಿಂದ್ಯಕೆ ಅಂಜಿ ನೀಗುವರೆ ಶರೀರವ ಹಿಂದಣ

ಕಥೆಯ ಕೇಳರಿಯಾ

ಇಂದ್ರಾದಿ ಮುನಿಗಳಿಗೆ ಬಂದಿತು ಅಪವಾದ

ಕುಂದನೊದ್ದವರಾರು ಜಗದಿ 156

ತಾನೆ ಪುಟ್ಟಿಸಿದ ವಾಗ್ದೇವಿಯ ಕಮಲಜ

ಲಾವಣ್ಯ ಕಂಡು ಸೈರಿಸದೆ

ಮೂಜಗವರಿತು ಪಾಣಿಗ್ರಹಣ ಮಾಡಿದ

ಮೀರಿದರಾರೊ ಕಲ್ಪನೆಯ 157

ಮುನಿಸತಿಯೆನದೆ ದೇವೇಂದ್ರ ತಾನಳುಕಿದ

ಸರ್ವಾಂಗದಿಂದ ಸುಂದರಿಯು

ಶಿಲೆಯಾಗಿ ಬಿದ್ದಳಾತನ ಸತಿ ಧರೆ ಮೇಲೆ ಮೃಗದ

ಲಾಂಛನೆಯ ತಾಳಿದನು 158

ಗುರುಸತಿಯೆನದೆ ಅಂಬುಜಮಿತ್ರ ಅಳುಪಿದ

ಸೆರೆತಂದ ತಾರಾದೇವಿಯನು

ಮುನಿಗಳು ಅಮರರೊಡನೆ ಕಾದಿಗೆಲಿದರು ನರರ

ಪಾಡೇನು ಭೂಪಾಲ 159

ಯಮನ ದಾಡೇಲಿಪ್ಪ ತೆರನಂತೆ ಕಾವಲು ನಿನ್ನ

ಕುಮಾರತಿಯ ಮಂದಿರಕೆ

ಮರುಳಗೊಂಡ್ಯೊ ಮಾನವೆಂದು ಈ ಸುದ್ದಿಯ

ಅರುಹಿದರಾರು ನಿನ್ನೊಡನೆ 160

ಪರಿಪರಿ ದುಃಖದಿ ಹೊರಳುವ ರಾಯನ ಮನವ

ನಿಲ್ಲಿಸಿದ ಪ್ರಧಾನಿ

ತಿಳಿದು ಬಹೆನು ಕುಮಾರಿಯನೆಂದೆನುತಲೆ

ನಡೆತಂದ ಸೆಜ್ಜೆವಾಹರಿಗೆ 161

ಉರಿ ಸೋಂಕಿದ ಕೆಂದಳಿರಂತೆ ಮುಖಬಾಡಿ

ಮಲಿನವನುಟ್ಟ ಮಾನಿನಿಯ

ಕಳೆಗುಂದಿ ನೆಲದಲ್ಲಿ ಬಿದ್ದ ಕುಮಾರಿಯ

ಸೆಳೆವಿಡಿದೆತ್ತಿದ ರಾಯ 162

ಏಳವ್ವ ತಾಯಿ ಚಿಂತಿಸಲೇಕೆ ವರನ್ಯಾರು

ಮಾಜುವದೇಕೆ ಎನ್ನೊಡನೆ

ಧಾರೆಯನೆರೆದು ಕೊಡುವೆ ಕನ್ಯಾಚೋರಗೆ ದೇವ

ಬ್ರಾಹ್ಮರು ಮೆಚ್ಚುವಂತೆ 163

ಮರೆತು ಮಲಗಿದ್ದಾಗ ಸುರರಡ್ಡಸುಳಿದರೊ

ಸುರರೊ ನರರೊ ಕಿನ್ನರರೊ

ಧರಣೀಶಗ್ಹೇಳಿ ಮಾಡುವೆ ನಿನ್ನ ಮದುವೆಯ

ಗಿರಿಜೇಶನಾಣೆ ಹೇಳೆಂದ 164

ಎತ್ತಣ ಮದುವೆ ಮಾಡುವಿರೆನ್ನ ದೇಹವ

ಇತ್ತೆ ನಾ ಹವ್ಯವಾಹನಗೆ

ಮತ್ತೊಬ್ಬ ಪುರಷನ ಕೂಡಿ ಬಾಳುವಳಲ್ಲ

ವಿಶ್ವಲೋಚನನಂಘ್ರಿಯಾಣೆ 165

ಹಗರಣವಾಯಿತು ಜಗಮೂರರೊಳಗೆಲ್ಲ ನಗುವರು

ಸರಿಯ ನಾರಿಯರು

ಸೊಗಸವು ನಿಮ್ಮ ವಾಕ್ಯವು ಎನ್ನ ಕರ್ಣಕ್ಕೆ ಹೊಗುವೆನು

ಉರಿವ ಪಾವಕನ 166

ಶ್ವಾನ ಮುಟ್ಟಿದ ಭಾಂಡ ಬಾಹದೆ ನಿಳಯಕ್ಕೆ ದೇವ

ಬ್ರಾಹ್ಮರಿಗ್ಯೊಗ್ಯವಹುದೆ

ಮಾನಿನಿಯೆಂದು ಸ್ನೇಹದಲೆನ್ನನುಳುಹಲು ಹಾನಿ

ಬರುವುದು ನಿಮ್ಮ ಕುಲಕೆ 167

ಪುತ್ರಿಯೆಂದು ಸ್ನೇಹದಲೆನ್ನ ಉಳುಹದೆ ಕೆಟ್ಟ

ಪಾತಕಿಯೆಂದು ತಿಳಿದು

ಎತ್ತಿ ಕೊಂಡ್ಹೋಗಿ ತುಂಬಿದ ನದಿಯೊಳಗೆ ಬಿಟ್ಟು

ಬರುವುದೆ ಉಚಿತವು 168

ಮದುವೆಯ ಮಾಡಲಿಲ್ಲವೆಂದು ಎನ್ನೊಳು

ಮುನಿದು ಅರಣ್ಯಕ್ಹೋಗುವರೆ

ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169

ಪಕ್ವವಾಯಿತು ಎನ್ನ ಪಾತಕ ಇಂದಿಗೆ ಹೊತ್ತೆನು

ಬರಿದೆ ನಿಂದ್ಯವನು (ಅ)

ಸತ್ಯವಾಗದು ಎನ್ನ ಆಡಿದ ವಾಕ್ಯವು ಮೃತ್ಯು

ಬಂದೊದಗಿದ ಮೇಲೆ 170

ದೃಷ್ಟಿಸಿ ನೋಡಲು ದೃಷ್ಟಿತಾಕೀತೆಂದು ಎತ್ತಿ

ತೂಪಿರಿದು ಮಂತರಿಸಿ

ಇಷ್ಟು ಪರಿಯಿಂದಲೆಸಲಹಿದ ಮಗಳನು ಇತ್ತೆ ನಾ

ಘೋರ ಕಾನನಕೆ 171

ಕಾರುಣ್ಯದಿಂದಲೆ ಸಲಹಿದ ಮಗಳನು ಅರಣ್ಯಕೆ

ಗುರಿಮಾಡಿ ನಾರಿ

ನಿನ್ನನಗಲಿ ನಾನೆಂತು ಜೀವಿಪೆನೆಂದÀು ತಾಯಿ

ಕಂಬನಿದುಂಬಿದಳು 172

ಮಿಸುನಿಯ ಅಲಗೆಂದು ಬಸಿರೊಳಗಿಡುವರೆ

ವಶವಲ್ಲದಂಥ ಮೂಗುತಿಯ

ಹಸನಾಯಿತೆಂದು ಇಟ್ಟರೆ ನಾಸಿಕ್ಹರಿವೋದು

ಬಿಸುಸುಯ್ವದೇತಕೆ ತಾಯೆ 173

ಏಳುತ್ತಲೊಮ್ಮೆ ಬಿಮ್ಮನೆ ತಾ ಮರುಗಿದಳು

ಕುಮಾರಿಯ ಮೇಲೆ ಸ್ನೇಹದಲಿ

ಆಲೋಚನೆ ಮಾಡುವ ಹಿರಿಯರ ಕಾಣೆನು ಹಾ

ವಿಧಿಯೆಂದ್ಹೊರಳಿದಳು 174

ಉಲುಹ ಕೇಳಿದರೆ ಎಚ್ಚರ ‘ವಹರು’ ಜನರೆಲ್ಲ

ಅಳುವುದೇತಕೆ ತಾಯೆ ನೀನು

ಅರುಣನ ಉದಯವಾಗದ ಮುನ್ನ ಕಳುಹಿಸು

ಕಲ್ಮಾಡು ನಿನ್ನ ದೇಹವನು 175

ರಾಯನು ಕರೆಸಿದ ತನ್ನ ಊಳಿಗದವರನು

ಹೇಳಿದನೇಕಾಂತದಲಿ

ಬಾಲೆಯನೊಯ್ದು ಅರಣ್ಯದಿ ಶಿರವರಿದುನಾಳೆ

ಉದಯಕೆ ಬನ್ನಿರೆಂದ 176

ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ

ಅರಸನ ಮಗಳನು ಅರಣ್ಯದೊಳಗಿಟ್ಟು ಮರೆಸಿ

ಬನ್ನಿರಿ ಶೀಘ್ರದಿಂದ 177

ರಾಯನ ಮಗಳನು ಅರಣ್ಯದೊಳಗಿಟ್ಟು

ಮಾಡಿರಿಮನಕೆ ಬಂದುದನು

ಬಾಲೆಯ ಮುದ್ರೆಯುಂಗುರ ತನ್ನಿ ಗುರುತಿಗೆ

ನಾನಿಡುವೆ ರಾಯನ ಮುಂದೆ 178

ಏರಿದಳೊಜ್ರದಂದಣವ ಕುಮಾರಿಯು

ಮೇಲೆ ಪನ್ನಂಗ ಕವಿದವು

ವ್ಯಾಘ್ರ ಬಂದು ಹರಿಣನ ಕಚ್ಚಿ ಒಯಿದಂತೆ

ಶೀಘ್ರದಿ ಪೊತ್ತು ನಡೆದರು 179

ಶಶಿಮುಖಿ ಮನದಲಿ ನಸುಬೆದುರಿಡುತಲೆ

ಬಸವಳಿದಳು ಶ್ರೀ ಹರಿಯ

ಅರಸುಮರ್ದನ ಗೋವಿಂದನೆ ಸಲಹೆಂದು

ಸ್ತುತಿಸುತಿರ್ದಳೆ ತನ್ನ ಮನದಿ 180

ನೋಡದೆ ಎನ್ನವಗುಣವ ಪಾತಕಿಯೆಂದು

ಕಾಲನ ವಶಕೆÉ ಒಪ್ಪಿಸದೆ

ಕ್ಷೀರಾಬ್ಧಿಶಯನ ನಾರಾಯಣ ಹರಿ ನಿಮ್ಮ

ಪಾದಾರವಿಂದೊಳಿರಿಸು 181

ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ

ಹಾದಿ ತಪ್ಪಿ ಹಳ್ಳಕೊಳ್ಳ ಕಾನನದೊಳು

ಬಾಲೆಯ ತಂದಿಳುಹಿದರು 182

ಅಂದಣ ಇಳುಹಿ ಕೆಂದಳಿರ್ಹಾಸಿದರಾಗ ತಂಗಿ

ಬಾ ಬಳಲಿದೆಯೆನುತ

ಕುಂದಣಗಿಂಡೀಲಿ ತುಂಬಿಟ್ಟರುದಕವ

ರಂಭೆಯನುಪಚರಿಸಿದರು 183

ಪುಷ್ಪ ಸೋಕಿದರೆ ಬಾಡುವ ಕೋಮಲಾಂಗವ

ತೊಪ್ಪಲ ಮೇಲ್ಹರಹಿದರು

ಅಚ್ಯುತಾನಂತ ಶ್ರೀ ಕೃಷ್ಣನೆ ಗತಿಯೆಂದು

ಕತ್ತಿಗೆ ಮಯ್ಯನಿಕ್ಕಿದಳು 184

ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ

ಅಂಬುಜಮಿತ್ರ ಗೋವಿಂದನೆ ಗತಿಯೆಂದು ರಂಭೆ ತಾ

ಸ್ತುತಿಯ ಮಾಡಿದಳು 185

ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು

ಪ್ರಹಲ್ಲಾದವರದ ಪಾಲಿಸಿದನು ಹಸುಳೆಗೆ ಮಾಯದ

ನಿದ್ರೆ ಕವಿದವು 186

ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ

ನಿತ್ಯ ನಿರ್ಮಳ ಅಚ್ಯುತಾನಂತ ನರಹರಿ ಪೊಕ್ಕನೆ

ದೂತರ ಮನವ 187

ಎತ್ತಿದರು ಕೊಲೆಘಟಿಕರಾಯುಧವನ್ನು ಮತ್ತೆ

ಯೋಚಿಸಿ ತಮ್ಮ ಮನದಿ

ಪುತ್ರಿಯ ಕೊಂದ ಪಾತಕ ತಮಗೆನುತಲೆ

ಎತ್ತಿದಾಯುಧವನಿಳುಹಿದರು 188

ಗರ್ಭಾಂಗಿಯ ಕೊಂದರೆ ಪಾಪ ತಮಗೆಂದು

ಒಬ್ಬರೊಬ್ಬರು ಮಾತನಾಡಿ

ಕೊಬ್ಬಿದ ಮೃಗವ ಕಡಿದು ಶೋಣಿತವನ್ನು

ಉರ್ವೀಶಗೊಯ್ದು ಒಪ್ಪಿಸುವ 189

ವ್ಯಾಘ್ರ ಕಾಡು ಕೋಣ ಮೃಗವಿದ್ದಯಡೆಯಲ್ಲಿ

ವಾರಿಜಗಂಧಿಯ ಬಿಟ್ಟು

ಜೀವಗಳಳಿದು ಅಯೋಧ್ಯಕ್ಕೆ ಬಂದರು

ರಾಯಗೆ ಗುರುತ ತೋರಿದರು 190

ಕಪ್ಪೋಡಲಿನ ಪುಳಿಂದರು ಬಂದರು

ತಪ್ಪದೆ ರಾಯನೋಲಗಕೆ

ಹತ್ಯಮಾಡಿ ಬಂದೆವು ನಿನ್ನ ಕುಮಾರಿಯ

ಚಿತ್ತೈಸು ಜೀಯವಧಾನ 191

ಕೊಂದು ಬಂದೆವು ನಿನ್ನ ಆತ್ಮಸಂಭವೆಯನ್ನು

ತಂದೆವು ಮುದ್ರೆಯುಂಗುರವ

ಕೊಂಡಿಳುಹಿದರು ನೆತ್ತರು ಪೂಸಿದಲಗನು ಕಂಡು

ಮನದಲಿ ಮರುಗಿದನು 192

ಕುಂ(ಜವ)ಗಿಣಿಯನು ಪಂಜರದೊಳಗಿಟ್ಟು

ಅಂಜೂರ ಕೊಯ್ದು ಕೊಟ್ಟಂತೆ

ಕುಂಜರಗಮನೆಯ ಕೈಯಿಂದ ಕೊಲಿಸಿದೆ

ಬೆಂದೊಡಲನೆಂತು ಪೊರೆಯಲಿ 193

ತುಂಬೂರಗೊಳ್ಳಿಯ ಒಲೆಯೊಳಗಿಟ್ಟಂತೆ

ಕೆಂಡದೊಳಾಜ್ಯ ಬಿದ್ದಂತೆ

ತಂದೆ ತಾಯಿ ಪ್ರಧಾನಿಪರಿವಾರವು

ಬೆಂದರು ಶೋಕಾಗ್ನಿಯಿಂದ 194

ಇತ್ತಲಾರಾಯ ಹಂಬಲಿಸಿ ತಾನಳುತಿರೆ ಪುತ್ರಿಯ

ಮೇಲೆ ಸ್ನೇಹದಲಿ

ಹಕ್ಕಿ ಪಕ್ಷಿಯು ನಲಿದವು ಮೂಡüರಾತ್ರೇಲಿ

ತಲೆಯೆತ್ತಿದವಬ್ಜ ಬಂಧುಗಳು 195

ಎಚ್ಚೆತ್ತು ನೋಡಿದಳಾಗ ಚಂದ್ರಾವತಿ ಸುತ್ತಲ

ಮೃಗದ ಸಂಚರವ

ಬಿಟ್ಟುಹೋದರು ಪಾತಕರೆನ್ನ ಅಡವೀಲಿ ತುತ್ತಾದೆ

ಹಸಿದ ಹೆಬ್ಬುಲಿಗೆ 196

ಘುಡುಘುಡಿಸುವ ಸಿಂಹನಾದಕ್ಕೆ ಅಂಜುವಳು

ಬೆದರುವಳು ವ್ಯಾಘ್ರದಟ್ಟುಳಿಗೆ

ಮೊರೆವ ಸರ್ಪವ ಕಂಡು ನಯನವ ಮುಚ್ಚುವಳು

ಮರಳಿ ಧೈರ್ಯವನೆ ಮಾಡುವಳು 197

ನಾನ್ಯಾರೊ ತಾಯಿ ತಂದ್ಯಾರೊ ಭಾವಿಸಿದರೆ

ಮಾಯಪಾಶಕೆ ಗುರಿಮಾಡಿ

ಮಾರಜನಕ ದಾನವಾರಿಯ ನೆನೆದರೆ ಅಹುದು

ಮುಕ್ತಿ ಸಾಧನವು 198

ಜಲವ ಪೊಕ್ಕು ದೈತ್ಯನ ಸಂಹರಿಸಿದೆ ಅಜಗೆ

(one or two lines incomplete?)

****