Showing posts with label ಅರಿಯಾರೋ ಅಂದಿಗ೦ದಿಗನ್ಯ ankita gurujagannatha vittala. Show all posts
Showing posts with label ಅರಿಯಾರೋ ಅಂದಿಗ೦ದಿಗನ್ಯ ankita gurujagannatha vittala. Show all posts

Sunday 18 April 2021

ಅರಿಯಾರೋ ಅಂದಿಗ೦ದಿಗನ್ಯ ankita gurujagannatha vittala

ರಾಗ : ಅಸಾವೇರಿ ತಾಳ : ಏಕ


ಅರಿಯಾರೋ ಅಂದಿಗ೦ದಿಗನ್ಯ । ಈ ।

ಧರೆಯೊಳಿರುವ ಮಹಿಮೆ ಘನ್ನ ।। ಪಲ್ಲವಿ ।।

ಮರುತಾವೇಶಯುತ ಉರಗಾಂಶರನ್ನ ।। ಅ ಪ ।।


ಪ್ರಹ್ಲಾದ ಬಾಹ್ಲೀಕ ವ್ಯಾಸನು ।

ಇಲ್ಲೀಗ ರಾಘವೇಂದ್ರ ।

ಉಲ್ಲಾಸ ಬಡುವನು ।। ಚರಣ ।।

ಇನ್ನೂರ ನಾಲ್ವತ್ತು ।

ಮುನ್ನೀಗ ಪೋದದ್ದು ।
ನನ್ನೂರ ಅರವತ್ತು ।
ಇನ್ನು ಉಳಿದಿಹದು ।। ಚರಣ ।।

ಎಲ್ಲೀ ನೋಡಲಿವ- ।
ರಿಲ್ಲದ ಸ್ಥಳವಿಲ್ಲ ।
ಬಲ್ಲಾ ಭಕುತಗೆ ।
ಅಲ್ಲಲ್ಲೇ ತೋರುವದು ।। ಚರಣ ।।

ಖುಲ್ಲ ನರರಿಗೆ ।
ಎಲ್ಲೆಲ್ಲಿ ಇಲ್ಲವೋ ।
ಸಲ್ಲೋದು ನಿಶ್ಚಯ ।
ಸುಳ್ಳಲ್ಲ ಈ ಮಾತು ।। ಚರಣ ।।

ದುಷ್ಟ ಜನರಿಗೆ ।
ಇಷ್ಟಾರ್ಥ ಕೊಡವೊನೊಮ್ಮೆ ।
ಶಿಷ್ಟ ಜನರಿಗ- ।
ಭೀಷ್ಟವ ಕೊಡುವುದು ।। ಚರಣ ।।

ಇವರ ಪೂಜಿಪ ಜನ ।
ದಿವಿಜರು ನಿಶ್ಚಯ ।
ಭುವನದೊಳಗೆ ಇನ್ನು ।
ಇವರಿಗೆ ಸರಿಯುಂಟೆ ।। ಚರಣ ।।

ಇವರನು ಒಲಿಸಲು ।
ಪವನನು ಒಲಿವನು ।
ದಿವಿಜಾರುತ್ತಮ । ಮಾ ।
ಧವ ತಾನೇ ಒಲಿವಾ ।। ಚರಣ ।।

ಅಮಿತ ಮಹಿಮರೆಂದು ।
ಪ್ರಮಿತರು ಪೇಳೋರು ।
ಸುಮತಿಗಳ ಮನಕೆ ।
ಗಮಿಸಿ ತಿಳಿಸುವುದು ।। ಚರಣ ।।

ದಾತಾ ಗುರು ಜಗ ।
ನ್ನಾಥ ವಿಠಲ ಬಹು ।
ಪ್ರೀತಿಯಿಂದಲಿ ಇವರ ।
ಖ್ಯಾತಿಯ ಮಾಡೋದು ।। ಚರಣ ।।
**
ರಾಗ : ಅಸಾವೇರಿ ತಾಳ : ಏಕ


ಅರಿಯಾರೋ ಅಂದಿಗ೦ದಿಗನ್ಯ । ಈ ।

ಧರೆಯೊಳಿರುವ ಮಹಿಮೆ ಘನ್ನ ।। ಪಲ್ಲವಿ ।।

ಮರುತಾವೇಶಯುತ ಉರಗಾಂಶರನ್ನ ।। ಅ ಪ ।।

ಪ್ರಹ್ಲಾದ ಬಾಹ್ಲೀಕ ವ್ಯಾಸನು ।

ಇಲ್ಲೀಗ ರಾಘವೇಂದ್ರ ।

ಉಲ್ಲಾಸ ಬಡುವನು ।। ಚರಣ ।।

ಇನ್ನೂರ ನಾಲ್ವತ್ತು ।

ಮುನ್ನೀಗ ಪೋದದ್ದು ।
ನನ್ನೂರ ಅರವತ್ತು ।
ಇನ್ನು ಉಳಿದಿಹದು ।। ಚರಣ ।।
ಎಲ್ಲೀ ನೋಡಲಿವ- ।
ರಿಲ್ಲದ ಸ್ಥಳವಿಲ್ಲ ।
ಬಲ್ಲಾ ಭಕುತಗೆ ।
ಅಲ್ಲಲ್ಲೇ ತೋರುವದು ।। ಚರಣ ।।
ಖುಲ್ಲ ನರರಿಗೆ ।
ಎಲ್ಲೆಲ್ಲಿ ಇಲ್ಲವೋ ।
ಸಲ್ಲೋದು ನಿಶ್ಚಯ ।
ಸುಳ್ಳಲ್ಲ ಈ ಮಾತು ।। ಚರಣ ।।
ದುಷ್ಟ ಜನರಿಗೆ ।
ಇಷ್ಟಾರ್ಥ ಕೊಡವೊನೊಮ್ಮೆ ।
ಶಿಷ್ಟ ಜನರಿಗ- ।
ಭೀಷ್ಟವ ಕೊಡುವುದು ।। ಚರಣ ।।
ಇವರ ಪೂಜಿಪ ಜನ ।
ದಿವಿಜರು ನಿಶ್ಚಯ ।
ಭುವನದೊಳಗೆ ಇನ್ನು ।
ಇವರಿಗೆ ಸರಿಯುಂಟೆ ।। ಚರಣ ।।
ಇವರನು ಒಲಿಸಲು ।
ಪವನನು ಒಲಿವನು ।
ದಿವಿಜಾರುತ್ತಮ । ಮಾ ।
ಧವ ತಾನೇ ಒಲಿವಾ ।। ಚರಣ ।।
ಅಮಿತ ಮಹಿಮರೆಂದು ।
ಪ್ರಮಿತರು ಪೇಳೋರು ।
ಸುಮತಿಗಳ ಮನಕೆ ।
ಗಮಿಸಿ ತಿಳಿಸುವುದು ।। ಚರಣ ।।
ದಾತಾ ಗುರು ಜಗ ।
ನ್ನಾಥ ವಿಠಲ ಬಹು ।
ಪ್ರೀತಿಯಿಂದಲಿ ಇವರ ।
ಖ್ಯಾತಿಯ ಮಾಡೋದು ।। ಚರಣ ।।
********