Showing posts with label ಏಳಯ್ಯ ಬೆಳಗಾಯಿತು ಬೆಳಗಾಯಿತೇಳಯ್ಯ ಬಿಸಿಲು purandara vittala ELAYYA BELAGAAYITU BELAGAAYITELAYYA BISILU. Show all posts
Showing posts with label ಏಳಯ್ಯ ಬೆಳಗಾಯಿತು ಬೆಳಗಾಯಿತೇಳಯ್ಯ ಬಿಸಿಲು purandara vittala ELAYYA BELAGAAYITU BELAGAAYITELAYYA BISILU. Show all posts

Monday 6 December 2021

ಏಳಯ್ಯ ಬೆಳಗಾಯಿತು ಬೆಳಗಾಯಿತೇಳಯ್ಯ ಬಿಸಿಲು purandara vittala ELAYYA BELAGAAYITU BELAGAAYITELAYYA BISILU

ರಾಗ: ಮೋಹನ  ತಾಳ: ಚಾಪು

ಪುರಂದರದಾಸರು

ಏಳಯ್ಯ ಬೆಳಗಾಯಿತು ||ಪ||

ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ
ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ
ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ
ಸೆಳೆಮಂಚದಿಂದ ಏಳೊ ||

ವೇದವನು ತರಲೇಳು ಮಂದರವ ಪೊರಲೇಳು
ಭೇದಿಸುತ ಅಸುರರನು ದಾಡೆಯಿಂ ತರಲೇಳು
ಕಾದಿ ಹಿರಣ್ಯಕನ ಕರುಳು ಕೊರಳೊಳಗೆ ಧರಿಸೇಳು
ಕಾಯ್ದು ಬಲಿ ಬಾಗಿಲದೊಳು ||

ಭೇದಿಸಿ ಭೂಮಿ ತ್ರಿಪಾದದಿಂದಳೆಬೇಕು
ಛೇದಿಸಿ ಕ್ಷತ್ರಿಯರ ಕೊದಲಿಂದ ಕಡಿಯೇಳು
ಸಾಧಿಸಿ ಶರಧಿಯಲಿ ಸೇತುವೆಯ ಕಟ್ಟೇಳು
ನಂದಗೋಪನ ಉದರದಿ ||

ಪುರಮೂರು ಗೆಲ್ಲಬೇಕು ಅರಿವೆಯನೆ ಕಳೆಯೇಳು
ದುರುಳನ ಕೊಲ್ಲಬೇಕು ತುರಗವಾಹನನಾಗು
ಪರಿಪರಿಯ ಕೆಲಸಗಳನು ಮಾಡಲುದ್ಯೋಗಿಸಿ
ಮರೆತು ನಿದ್ರೆಯ ಗೆಯ್ವರೆ ||

ಆಲದೆಲೆಯಿಂದೇಳು ಮಹಲಕುಮಿ ಬಂದಾಳೆ
ಹಾಲನದಿಯಿಂದೇಳು ಶ್ರೀದೇವಿ ಬಂದಾಳೆ
ಕಾಲನದಿಯಿಂದೇಳು ಭೂದೇವಿ ಬಂದಾಳೆ
ಸಾಲಮಂಚಗಳಿಂದಲಿ ||

ನಾಭಿಕಮಲದಿ ಜನಿಸಿದ ಬ್ರಹ್ಮ ಬಂದಾನೆ
ಗಂಭೀರಗಾಯನದ ನಾರದ ಬಂದಾನೆ
ರಂಭೆ ಮೇನಕೆ ಮೊದಲು ನರ್ತನದಿ ಐದಾರೆ
ಶಂಬರಾರಿಪಿತನೆ ಏಳೊ ||

ರಾಜಸೂಯವ ಕೇಳೆ ವಾಯುಸುತ ಬಂದಾನೆ
ಅರ್ಜುನನು ರಥ ಹೂಡಬೇಕೆಂದು ನಿಂದಾನೆ
ಸಾಜ ಧರ್ಮಜ ಅಗ್ರಪೂಜೆಯ ಮಾಡುವೆನೆಂದು
ಮೂಜಿಯನೆ ಪಿಡಿದುಕೊಂಡು ||

ಉರಿಹಸ್ತನಟ್ಟಿದರೆ ಹರ ಓಡಿ ಬಂದಾನೆ
ಗಿರಿಜೆ ವರವನು ಬೇಡೆ ಬಂದು ಇದ್ದಾಳೆ
ಪಾರಿಜಾತವ ಕೊಂಡು ಸುರರಾಜ ಬಂದಾನೆ
ಗರುಡವಾಹನಕಾಗಿ ||

ಸತ್ಯನಾಥ ನೀನೇಳು ಸತ್ಯಭಾಮೆ ಬಂದಾಳೆ
ಮತಿವಂತ ನೀನೇಳು ಜಾಂಬವತಿ ಬಂದಾಳೆ
ಗತಿವಂತ ನೀನೇಳು ಶ್ರೀತುಲಸಿ ಬಂದಾಳೆ
ಕಾಂತಸೇವೆಯ ಮಾಡಲು ||

ದೇವ ನಿನ್ನಂಘ್ರಿಪೂಜೆಯ ಮಾಡಬೇಕೆಂದು
ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಾಪಹಾರಿ
ಸಾವಧಾನದಿ ಯಮುನೆ ತುಂಗೆ ಸರಸ್ವತಿ
ಭೀಮರಥಿಯು ನೇತ್ರಾವತಿಯು ||

ದುರಿತ ಕಲಿ ಕರ್ಮವನು ತ್ವರಿತದಲಿ ಕೆಡಿಸುವನು
ದುರಿತಾರಿ ಮೇಲುಗಿರಿ ಶಿಖರದಲಿ ನಿಂತಿಹನು
ಪುರಂದರವಿಠಲರಾಯ ನೀ
ಬೆಲಗಯಿತೇಳಯ್ಯ ||
***


ರಾಗ ಭೂಪಾಳಿ ಝಂಪೆತಾಳ
ಏಳಯ್ಯ ಬೆಳಗಾಯಿತು ಪ.

ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪ

ವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1

ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2

ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3

ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4

ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
*******