Showing posts with label ಕರುಣದಿ ಕಾಯಬೇಕೆನ್ನಾ ನೀಪರಮದಯಾಳು ankita raghavendra. Show all posts
Showing posts with label ಕರುಣದಿ ಕಾಯಬೇಕೆನ್ನಾ ನೀಪರಮದಯಾಳು ankita raghavendra. Show all posts

Thursday 5 August 2021

ಕರುಣದಿ ಕಾಯಬೇಕೆನ್ನಾ ನೀಪರಮದಯಾಳು ankita raghavendra

 ..

kruti by radhabai

ಕರುಣದಿ ಕಾಯಬೇಕೆನ್ನಾ ನೀಪರಮದಯಾಳು

ವೆಂದೆನುತ ಬಂದೆನು ನಾ ಪ


ಬಂದಾ ಬಂದಜನಕಾನಂದ ಕೊಡುತಲಿ

ಬೃಂದಾವನ ದೊಳು ಬಂದು ನಿಂದಿರುವೇ

ವಂದಿಸಿ ಭಜಿಪರಘಂಗಳ ಕಳೆದು

ಸಲಹುವಿಯೋ ಸದ್ಗುರು ರಾಘವೇಂದ್ರಾ 1

ಭೂತÀ ಪ್ರೇತಗಳಿಂದ ಬಾಧೆ ಪಡುವಜನ

ಭೀತರಾಗುತ ನಿನ್ನಡಿಗಳ ಸೇವಿಸಲು

ಆದರದಿಂದಲವರ ಭವ-ಭಯವ ಪರಿಹರಿಸಿ

ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2

ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ

ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು

ಜೀವ ವಿದ್ದವನ ನಿರ್ಜೀವನೆನುತ ತರಲು

ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3

ಕುಹಕಿ ಜನರು ಎಲ್ಲಿ ವನಕೆತುಂಡನು ತಂದು

ಚಿಗುರಿಸ ಬೇಕೆನುತಲಿ ಕೇಳಲು

ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ

ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4

ಮಾವಿನರಸದೊಳು ಮುಳುಗಿ ಮೃತನಾದಾ

ಬಾಲಕನಿಗೆ ಪ್ರಾಣಗಳನಿತ್ತೆ ದಯದೀ

ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ

ಮಂತ್ರಾಲಯದೊರೆ ಗುರು ರಾಘವೇಂದ್ರಾ 5

``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ

ಮನುಜನು ಪ್ರತಿದಿನ ಭಜಿಸುತ್ತಲಿರಲು

ಘೋರ ದುರಿತಗಳೆಲ್ಲ ದೂರವ ಮಾಡಿ

ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6

ಶ್ರೀ ರಘುರಾಮನ ಪ್ರಿಯಭಕ್ತನಾದ

ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ

ನಂಬಿದ ಭಕ್ತರ ಬೆಂಬಿಡದೆ ಸಲಹುವ

ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7

***

kruti by radhabai

ಕರುಣೆ ತೋರಬಾರದೇನೋ ಮಾಧವಾ

ಹರಿಯೇ ಧೊರೆಯೇ ಪ

ಕಂದನ ನುಡಿಕೇಳಿ ಕಂಬದಿಂದ ಬಂದೆ

ಅಂದು ಅಹಲ್ಯೆಯ | ಬಂಧನ ಬಿಡಿಸಿದೆ

ಕರಿಮೊರೆಯಿಡಲಾಕ್ಷಣ ಬಂದು ನೀ

ನಕ್ರನ್ನ ಸೀಳಿದ ಚಕ್ರಧರನೆ ನೀನು 1

ತರಳ ಧೃವನ್ನಾ ತೊಡೆಯಿಂದ ನೂಕಲು

ಕಡುಭಯದಿಂದ ವನದಲ್ಲಿ ಚರಿಸುತ್ತ

ಘನತಪಗೈಯಲು ಧೃಡ ಭಕುತಿಗೆ ಮೆಚ್ಚಿ

ಒಡನೆ ಓಡಿ ಬಂದು ಘನತರ ಸಂಪದವತ್ತೆ 2

ಪರಿಪರಿಯಲಿ ದೇವ ಭಕ್ತರ ಕಾವ

ಪರಮ ಪುರುಷೋತ್ತಮ ನೀನಲ್ಲವೆ

ಮೊರೆಹೊಕ್ಕೆನು ನಿನ್ನ ಕರುಣಿಗಳರಸನ್ನ

ತ್ವರಿತದಿಂದಲಿ ಕಾಯೊ ವೆಂಕಟವಿಠಲಾ 3

***