Showing posts with label ವಿಜಯರಾಯರ ಪಾದಕಮಲ ಭಜಿಸಲಾಕ್ಷಣ keshavavittala. Show all posts
Showing posts with label ವಿಜಯರಾಯರ ಪಾದಕಮಲ ಭಜಿಸಲಾಕ್ಷಣ keshavavittala. Show all posts

Monday, 2 August 2021

ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ankita keshavavittala

 ವಿಜಯದಾಸರ ಸ್ತೋತ್ರ

ರಾಗ - : ತಾಳ -


ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ

ಗ್ವಿಜಯ ಮಾಡಿ ಸುಜನರನ್ನ ಪೊರೆವನನುದಿನ ll ಪ ll


ದಾಸಪ್ಪನೆಂಬ ನಾಮದಿಂದ ಕರಸುತ ಉದರ l

ಗೋಸುಗದಿ ಪರರ ಬಳಿಯ ಆಶ್ರಿಸುತ l

ಯೇಸು ಪರಿಯ ಬಡತನವು ಸೋಸಿದಣಿವುತ l

ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ ll 1 ll


ವಾಸವಾಗಿ ಸನ್ಯಾಸಿ ವೇಷ ಧರಿಸುತ ನಿತ್ಯ l

ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ l

ರಾಶಿರಾಶಿ ಜನರ ಕೂಡಿ ದೇಶಚರಿಸುತ ಮ್ಯಾಲೆ l

ಕಾಶಿ ಬಿಟ್ಟು ಸೇತುರಾಮೇಶನ್ನ ಹುಡುಕುತ ll 2 ll


ತಿರುಗಿ ತಿರುಗಿ ಚೀಕಲಪರಿಗೆ ಬಂದನು ಕಂಡು l

ಗುರುತು ಹಿಡಿದು ಆಕ್ಷಣದಿ ಕರೆದು ವೈದರು l

ಪರಮ ಸಂತೋಷದಿಂದ ಭರಿತರಾದರು ಮೈ l

ನೆರೆದ ಶೋಭನಾದಿಗಳನು ತ್ವರಿತ ಮಾಡ್ದರು ll 3 ll


ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ l

ಹತ್ತುಯೆಂಟು ಗ್ರಾಮವನ್ನುವತ್ತಿ ಆಳುತ್ತಾ l

ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳಲು ಇನ್ನು l

ಎತ್ತಸೇರಲೆಂದು ಭಾಗೀರಥಿಗೆ ಹೋಗುತ ll 4 ll


ಕಾಶಿಯೊಳಗೆ ಮಲಗಿರಲು ಸ್ವಪ್ನಕಂಡರು ಪುರಂದರ l

ದಾಸರೇವೆಂಬದು ವ್ಯಾಸಕಾಶಿಗೊಯ್ದರು l

ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು l

ವಿಜಯದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು ll 5 ll


ಕನಸಿನೊಳಗೆ ದೇವರ ದರುಶನಾಗುತ ಶ್ರೀ l

ಮನಸಿಜನಪಿತನ ದಯವು ಘನ ಘನಾಗುತ l

ಜಿನಸು ಜಿನಸು ಪದ ಸುಳಾದಿಗಳನು   ಪೇಳುತ ಆಗ l

ನೆನಿಸಿದಾಕ್ಷಣದಲಿ ಮುಖದಿ ಕವಿತೆ ಹೊರಡುತಾ ll 6 ll


ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು l

ಯೇನು ಹತ್ತು ಜನರಿಗೆ ಹೇಳಿದ ವಾಕ್ಯಸತ್ಯವೆಂದರು l

ಸುತ್ತುಮುತ್ತು ನೂರಾರು ದಾಸರು ನೆರೆದರು ಆನಿ l

ಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು ll 7 ll


ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ l

ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ l

ರಾತ್ರಿ ಹಗಲು ವಿಜಯವಿಟ್ಠಲನೆಂದು ಪಾಡುತ l

ಜನರ ಶ್ರೋತ್ರಿಂದ್ರಿಯಗಳ ಉದ್ಧಾರ ಮಾಡುತ ll 8 ll


ಪೂರ್ತಿ ಜ್ಞಾನದಿಂದ ಕರ್ಮವೆಲ್ಲ ಕಡಿದರು l ಸ l

ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು l

ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು l

ಶ್ರೀ ಸತ್ಯರಮಣ ಕೇಶವವಿಠಲನ್ನ ಕಂಡರು ll 9 ll

***


ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ- |ಗ್ವಿಜಯ ಮಾಡಿ ಸುಜನರನ್ನು ಪೊರೆವನನುದಿನ ಪ

ದಾಸಪ್ಪನೆಂಬ ನಾಮದಿಂದ ಕರೆಸುತ ಉದರ ಗೋಸುಗದಿ ಪರರ ಬಳಿಯ ಆಶ್ರಿಸುತ ||ಯೇಸುಪರಿಯ ಬಡತನವು ಸೋಸಿ ದಣಿವುತ |ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ 1

ವಾಸವಾಗಿ ಸನ್ಯಾಸಿ ವೇಷ ಧರಿಸುತ ನಿತ್ಯ ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ ||ರಾಶಿ ರಾಶಿ ಜನರ ಕೂಡಿ ದೇಶ ಚರಿಸುತ ಮ್ಯಾಲೆಕಾಶಿ ಬಿಟ್ಟು ಸೇತು ರಾಮೇಶನ್ನ ಹುಡುಕುತ 2

ತಿರುಗಿ ತಿರುಗಿ ಚೀಕಲಾಪರಿಗೆ ಬಂದನು ಕಂಡುಗುರುತು ಹಿಡಿದು ಆ ಕ್ಷಣದಿ ಕರೆದು ವೈದ್ಯರು ||ಪರಮ ಸಂತೋಷದಿಂದ ಭರಿತರಾದರು ಮೈನೆರೆದ ಶೋಭನಾದಿಗಳನು ತ್ವರಿತ ಮಾಡ್ದರು 3

ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ ಹತ್ತು ಎಂಟು ಗ್ರಾಮವನ್ನು ವತ್ತಿ ಆಳುತಾ ||ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳುತ ಯಿನ್ನುಎತ್ತ ಸೇರಲೆಂದು ಭಾಗೀರಥಿಗೆ ಹೋಗುತ 4

ಕಾಶಿಯೊಳಗೆ ಮಲಗಿರಲು ಸ್ವಪ್ನ ಕಂಡರು ಪುರಂದರ-ದಾಸರೇವೆಂಬುದು ವ್ಯಾಸ ಕಾಶಿಗೊಯ್ದರು ||ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು ವಿಜಯ ದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು 5

ಕನಸಿನೊಳಗೆ ದೇವರ ದರುಶನಾಗುತ ಶ್ರೀ-ಮನಸಿಜನ ಪಿತನ ದಯವು ಘನ ಘನಾಗುತ ||ಜಿನಸು ಜಿನಸು ಪದ ಸುಳಾದಿಗಳನು ಪೇಳುತ ಆಗನೆನಿಸಿದಾಕ್ಷಣದಲಿ ಮುಖದಿ ಕವಿತ ಹೊರಡುತಾ 6

ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು ಏನುಹತ್ತು ಜನರಿಗೆ ಪೇಳಿದ ವಾಕ್ಯ ಸತ್ಯವೆಂದರು ||ಸುತ್ತು ಮುತ್ತು ನೂರಾರು ದಾಸರು ನೆರೆದರು ಆನಿಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು 7

ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ-ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ ||ರಾತ್ರಿ ಹಗಲು ವಿಜಯ ವಿಠ್ಠಲನೆಂದು ಪಾಡುತ ಜನರಶ್ರೋತ್ರಿಯಿಂದ್ರಿಯಗಳ ಉದ್ಧಾರ ಮಾಡುತ 8

ಪೂರ್ತಿ e್ಞÁನದಿಂದ ಕರ್ಮವೆಲ್ಲ ಕಡಿದರು ಸ-ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು ||ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು ಶ್ರೀಸತ್ಯರಮಣ ಕೇಶವ ವಿಠಲನ್ನ ಕಂಡರು9

****