Showing posts with label ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ mohana vittala. Show all posts
Showing posts with label ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ mohana vittala. Show all posts

Sunday 1 August 2021

ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ankita mohana vittala

 ..

ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ


ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ.


ಸಂದರುಶನ ಮಾತ್ರದಿಂದ ಬಾಹೊದು ನದಿಸಿಂಧು ಸ್ನಾನದ ಫಲವೊ ಭಾವಶುದ್ಧದಿಂದ ವಂದನೆ ನಿರುತ ಮಾಡಲು ಭವಬಂಧನವ ಪರಿಹರವು ||(ದುಡುಕು) ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1

ನರಮಾತ್ರರಿವರೆಂದು ನೆರೆ ತಿಳಿಯದೆ ಸುಂ-ದರವಾದ ಗುಣಗಣಗಳಿಂದಲಿಸಿರಿವರನ ಚರಿತೆಯು ನಮಗೆ ಬಂದ ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ ||

(ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2

ಅವನಿಯೊಳಿವರನ ವೊಲಿಸಿದರೆಪಾವನವಾಗಿ ಪೋಗುವರುಭುವನದೊಳು ಕವಿಗಳೆನಿಸುತಿಪ್ಪರುಅವತರಿಸಿ ಮೂರು ||(ದುಡುಕು) ಭುವನ ಭವಕೆಪಾವಕರಾಗಿ ಭೂಸುರರಪಾವನವ ಮಾಡುವ ಭುವನ ನಿಧಿಸುತೆ ರಮಣಿ ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3

***