Showing posts with label ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ madhwesha krishna ENTHA VAIBHAV NODE MALAKHEDA KSHETRADI. Show all posts
Showing posts with label ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ madhwesha krishna ENTHA VAIBHAV NODE MALAKHEDA KSHETRADI. Show all posts

Thursday 2 December 2021

ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ ankita madhwesha krishna ENTHA VAIBHAV NODE MALAKHEDA KSHETRADI



..ಜಯತೀರ್ಥರ ಸ್ಮರಣೆ

ಶ್ರೀಮತಿ ಸುಶೀಲ ಬಾಯಿ ಅಮ್ಮ (ಮಧ್ವೇಶ ಕೃಷ್ಣ ಅಂಕಿತ ) ಅವರ ಕೃತಿ 


 ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ 

ಇಂಥಾ ಯತಿಗಳ ದರುಶನವು ಸಂತಸವ ತರುವದೆಂಥಾ ವೈಭ

ವವು ನೋಡೆ||ಪಲ್ಲ||


 ಹಾದೀಗ್ಹಂದರ ಹಾಕಿ

 ಬೀದಿ ತೋರಣಕಟ್ಟಿ

ಸಾಧು ಜನರೆಲ್ಲ ಒಡಗೂಡಿ ಮಳಖೇಡದಲ್ಲಿ

 ಮೋದದಿ ಭಜಿಸುವರೆಷ್ಟೊ

ವೇದ ಓದುವರೆಷ್ಟೊ

ಮಾಧವನ ಮನಸಾರ ನೆನೆಯುತ್ತ ಕುಣಿಯುವರೆಷ್ಟೊ||೧||

 ಗುಂಪು ಗುಂಪಿಲಿ ಜನರು

ತಂಪಾಗಿ ಬರುವರು

ಇಂಪಾಗಿ ಗಾನ ಮಾಡುತಲಿ ಮಳಖೇಡದಲ್ಲಿ

 ಸಂಪಾಗಿ ಕೇಳುವ

ಮಂತ್ರದ ಮಹಿಮೆಯ

ಶಾಂತ ಚಿತ್ತದಲಿ ಆಲಿಸುತ ಕುಳಿತವರೆಷ್ಟೊ||೨||

 ಸಾಗಿ ಬರುತಾಲಿದ್ದು

 ಬಾಗೀ ವಂದನೆ ಮಾಡಿ

 ಕಾಗಿನಿ ತಟದ ಯತಿಗಳಿಗೆ ಬಹು ಭಕುತಿಯಿಂದ

 ಯೋಗಿ ಟಿಕಾರ್ಯರ ದಾಸ

ನಾಗುವ ಭಾಗ್ಯ

ಬ್ಯಾಗ ಬರಲಿಂದು ನಮಗೆಂದು ಬೇಡುವರೆಷ್ಟೊ||೩||

ಬಂಗಾರ ಮಂಟಪದಿ

ಶೃಂಗಾರವಾದಂಥ

ರಂಗು ಮಾಣಿಕ್ಯ ಭರಣಿಟ್ಟ ಮೂಲ ರಾಮನಿಗೆ

 ಮಂಗಳ ಮಹಿಮನ

 ಕಂಗೊಳಿಸುವ  ಸ್ವಚ್ಛ

ಬಂಗಾರ ಭರಣಕಾಂತಿಯು ಹೊಳೆಯುತಲಿಹುದು||೪||

 ನಿತ್ಯ ತೃಪ್ತನಿಗೆ 

ಸತ್ಯಾತ್ಮತೀರ್ಥರು

ಅತ್ಯಂತ ವಿನಯದಲಿ ಪೂಜಿಸುತ ಮಳಖೇಡದಲ್ಲಿ

 ಸುತ್ತಿ ಬಂದಿರುವಂಥ

ಭಕ್ತ ಜನರಿಗೆ ಎಲ್ಲ

ಮಧ್ವೇಶಕೃಷ್ಣನ  ದಯದಿಂದ ಮಂತ್ರಾಕ್ಷತೆಯ ನೀಡಿ||೫||

***