Showing posts with label ವೃಂದಾವನದಿ ವಿರಾಜಿಪ ಯತಿವರನಾರೇ ಪೇಳಮ್ಮಯ್ಯ sridhara vittala vyasatatwajna teertha stutih. Show all posts
Showing posts with label ವೃಂದಾವನದಿ ವಿರಾಜಿಪ ಯತಿವರನಾರೇ ಪೇಳಮ್ಮಯ್ಯ sridhara vittala vyasatatwajna teertha stutih. Show all posts

Saturday 1 May 2021

ವೃಂದಾವನದಿ ವಿರಾಜಿಪ ಯತಿವರನಾರೇ ಪೇಳಮ್ಮಯ್ಯ ankita sridhara vittala vyasatatwajna teertha stutih

 ಶ್ರೀ ವ್ಯಾಸತತ್ತ್ವಜ್ಞರು -     " ಆಶ್ರಮ ಸ್ವೀಕಾರ "

ರಾಗ : ದರ್ಬಾರ್  ತಾಳ : ತ್ರಿಪುಟ 


ವೃಂದಾವನದಿ ವಿರಾಜಿಪ 

ಯತಿವರನಾರೇ ಪೇಳಮ್ಮಯ್ಯ ।। ಪಲ್ಲವಿ ।।


ವೊಂದಿದೆ ಸುಜನರ ವೃಂದ 

ಪೊರೆದ । ಭುವ ।

ನೇಂದ್ರರ ಕರಕಂಜಜ 

ಯತಿವರರೆ ।। ಅ ಪ ।।


ಉದಿತ ಭಾಸ್ಕರನ ತೆರದಿ 

ಸುಶೋಭಿತನಾರೆ ಪೇಳಮ್ಮಯ್ಯ ।

ಪದುಮಾಕ್ಷ ತುಳಸೀ ದಂಡ 

ದ್ವಿಮುಖಿ ಇಹನಾರೆ ಪೇಳಮ್ಮಯ್ಯ ।

ಒದಗಿ ಬರುವ 

ದುರ್ಮದ ತಿಮಿರ ಕಳೆವ ।

ಸುದುದಿತ ಜಲಜಾಪ್ತನು 

ಕಾಣಮ್ಮ ।। ಚರಣ ।।


ಮದ ವಿರಹಿತ ಶಮದಮೆಗಳಿಂ-

ದೊಪ್ಪುವನಾರೇ ಪೇಳಮ್ಮಯ್ಯ ।

ಮೃದುಮಧುರ ವಚನ ಸುಧೆಯ 

ಗರೆವ ಮುನಿದಾರೆ ಪೇಳಮ್ಮಯ್ಯ ।

ವಿದುಷರ ಮನ-

ಕುಮುದಗಳರಳಿಸುತಿಹ ।

ವಿಧು ವರ ವ್ಯಾಸತತ್ತ್ವಜ್ಞ-

ತೀರ್ಥರೇ ।। ಚರಣ ।।


ಮೋದ ಬೀರುವ ಕಳೆವರ-

ದೊಪ್ಪುವನಾರೆ ಪೇಳಮ್ಮಯ್ಯ ।

ಬೋಧಪೂರ್ಣರ ಸುಶಾಸ್ತ್ರ 

ಪೇಳ್ವ ಮುನಿಯಾರೇ ಪೇಳಮ್ಮಯ್ಯ ।

ಶ್ರೀಧರ ವಿಠಲನ ದಾಸೋತ್ತಮರೇ । 

ಕು । ವಾದಿ ಪರ್ವತ 

ಭೇದನಪವೀಧರ ।। ಚರಣ ।।     

***

ಸಾಕ್ಷಾತ್ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾಡಾ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ಸಾಮ್ರಾಜ್ಯಾಧಿಪತಿಗಳಾದ ಶ್ರೀ ಭುವನೇಂದ್ರತೀರ್ಥರು ತುರ್ಯಾಶ್ರಮ ನೀಡಿ " ವ್ಯಾಸತತ್ತ್ವಜ್ಞತೀರ್ಥ " ರೆಂದು ನಾಮಕರಣ ಮಾಡಿ ದ್ವೈತ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು

*****