Showing posts with label ಈಶ ನಿನ್ನ ಚರಣ ಭಜನೆ ankita neleyadikeshava ISHA EESHA NINNA CHARANA BHAJANE KESHAVA NAMA. Show all posts
Showing posts with label ಈಶ ನಿನ್ನ ಚರಣ ಭಜನೆ ankita neleyadikeshava ISHA EESHA NINNA CHARANA BHAJANE KESHAVA NAMA. Show all posts

Monday 30 December 2019

ಈಶ ನಿನ್ನ ಚರಣ ಭಜನೆ ankita neleyadikeshava ISHA EESHA NINNA CHARANA BHAJANE KESHAVA NAMA











ಈಶ ನಿನ್ನ ಚರಣ ಭಜನೆ Isha Ninna Charana Bhajane

ಕೇಶವಾಯ ನಮ:ದಿಂದ ಆರಂಭವಾಗುವ ಚತುರ್ವಿಂಶತಿ ನಾಮಗಳನ್ನು
ಉಪಯೋಗಿಸಿಕೊಂಡು ಕನಕದಾಸರು ಸರ್ವರಿಗೂ ಉಪಯೋಗ ವಾಗುವಂತೆ ಅನುಕೂಲವಾಗುವಂತೆ,  ಹೆಣ್ಣುಮಕ್ಕಳಿಗೂ ಸುಲಭವಾದ ಮಂತ್ರವನ್ನು ತಮ್ಮ ಕೃತಿಯ ಮೂಲಕ ಉಪದೇಶಿಸಿದ್ದಾರೆ.

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ || 1 ||

ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 2 ||

ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ||
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || 3 ||

ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 4 ||

ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 5 ||

ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 6 ||

ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ||
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || 7 ||

ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 8 ||

ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 9 ||

ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 10 ||

ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||
ಶ್ರೀಮಹಾನುಭಾವನಾದ ದಾಮೋದರ || 11 ||

ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 12 ||

ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 13 ||

ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಇನ್ನು ವಾಸುದೇವನೇ || 14 ||

ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 15 ||

ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 16 ||

ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 17 ||

ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 18 ||

ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕಿರುವೆ ನಿನಗೆ ನಾರಸಿಂಹನೇ || 19 ||

ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ||
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 20 ||

ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 21 ||

ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 22 ||

ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ||
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 23 ||

ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 24 ||

ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ||
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 25 ||

ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 26 ||
***

Isha ninna charaNa bhajane
Asheyinda mADu venu
dOsharAshi nAshamADu shreesha kEshava ||1||

sharaNu hokkenayya yenna
maraNa samayadalli ninna
carana smaraNe karuNisayya nArAyaNa ||2||

shOdhisenna bhavada kalusha
bhOdisayya gyAnavenage
bAdhisuva yamana bAdhe biDisu mAdhavA ||3||

hindanEka yOnigaLali
bandu bandu nondenayya
indu bhavada bandha biDisu tande gOvindA ||4||

bhrashTanenisa bEDa krishNa
ishTu mAtra bEDikombe
shishTaroDane ishTu kashTa biDisu vishNuvE ||5||

madananayya ninna mahime
vadanadalli nuDiyuvante
hrudayadoLage hudugisayya madhusUdhanA ||6||

kavidukonDu iruva pApa
savidu pOguvante mADo
javana bAdheyannu biDisu trivikramA ||7||

kAmajanaka ninna nAma
prEmadinda pADuvantha
nEmavenage pAlisayya swAmi vAmanA ||8||

modalu ninna pAda pUje
odaguvante mADO yenna
hrudayalli sadana mADo mudadi shriidara ||9||

husiyanADi hoTTe horeva
vishayadalli rasikanendu
husige hAkadiirayya hrushiikEshanE ||10||

biddu bhavadanEka januma
baddhanAgi kalushadinda
geddupOpa buddhi tOrO padmanAbhane ||11||

kAma krOdha biDisi ninna
nAma jihveyoLage nuDiso
shrii mahAnubhAvanAda dAmOdarA ||12||

pankajAksha nEnu yenna
manku buddhyannu biDisi
kinkaranna mADikoLLo sankarushaNA ||13||

yEsu januma bandarEnu
dAsanalla vEno nAnu
ghAsi mADadiru yenna vAsudEvanE ||14||

buddhi shOnyanAgi yenna
paddha kArya kuhakamanava
tiddi hrudaya shuddhi mADo pradyumnanE ||15||

jananijanaka nIne yendu
nenevenayya diina bandhu
yenage mukti pAlisayya aniruddhanE ||16||

harushadinda ninna nAma
smarisuvate mADu nEma
virisu caraNa dalli pushOttamA ||17||

sAdhusanga koTTu ninna
pAdabhajaneyiTTu enna
bhEdamAdi nODadirO shri adhOkshajA ||18||

cAru caraNa tOri yenage
pArugANisayya konege
bhAra hAkutiruve ninage nArasimhanE ||19||

sancitArtha pApagaLanu
kincitAda piiDegaLanu
muncitavAgi kaLedu poreyo swAmi accyutA ||20||

gyAna bhakti koTTu ninna
dhyAnadalli yiTTu sadA
hiina buddhi biDisu munna shrii janArdhana ||21||

japatapAnushTAna villade
kupathAgAmiyAda yenna
krupeyamADi kshamisabEku upEndranE ||22||

moreya iDuvenayya ninage
sharadhi shayana shubhamatIya
irisu bhaktanendu paramapurusha shri harI ||23||

puTTisalEbEDa innu
puTTisidake pAlisenna
ishTu mAtra bEDikombe shrii krishNanE ||24||

satyavAda nAmagaLanu
nityadalli paThisuvavara
arthiyinda salahuvanu kartru kEshavA ||25||

mareyadale hariyanAma
baredu Odi kELidavage
karedu mukti koDuva neleyAdikEshavA ||26||
***



Isha ninna charana bhajane

Asheyinda madu venu
dosharashi nashamadu shreesha keshava ||1||

Sharanu hokkenayya yenna
marana samayadalli ninna
charana smarane karunisayya narayana ||2||

Shodhisenna bhavada kalusha
bhodisayya gyanavenage
badhisuva yamana badhe bidisu madhava ||3||

Hindaneka yonigalali
bandu bandu nondenayya
indu bhavada bandha bidisu tande govinda ||4||

Bhrashtanenisa beda krishna
ishtu matra bedikombe
shishtarodane ishtu kashta bidisu vishnuve ||5||

Madananayya ninna mahime
vadanadalli nudiyuvante
hrudayadolage hudugisayya madhusudhana ||6||

Kavidukondu iruva papa
savidu poguvante mado
javana badheyannu bidisu trivikrama ||7||

Kamajanaka ninna nama
premadinda paduvantha
nemavenage palisayya swami vamana ||8||

Modalu ninna pada puje
odaguvante mado yenna
hrudayalli sadana mado mudadi shriidara ||9||

Husiyanadi hotte horeva
vishayadalli rasikanendu
husige hakadiirayya hrushiikeshane ||10||

Biddu bhavadaneka januma
baddhanagi kalushadinda
geddupopa buddhi toro padmanabhane ||11||

Kama krodha bidisi ninna
nama jihveyolage nudiso
shrii mahanubhavanada damodara ||12||

Pankajaksha nenu yenna
manku buddhyannu bidisi
kinkaranna madikollo sankarushana ||13||

Yesu januma bandarenu
dasanalla veno nanu
ghasi madadiru yenna vasudevane ||14||

Buddhi shonyanagi yenna
paddha karya kuhakamanava
tiddi hrudaya shuddhi mado pradyumnane ||15||

Jananijanaka nine yendu
nenevenayya diina bandhu
yenage mukti palisayya aniruddhane ||16||

Harushadinda ninna nama
smarisuvate madu nema
virisu carana dalli pushottama ||17||

Sadhusanga kottu ninna
padabhajaneyittu enna
bhedamadi nodadiro shri adhokshaja ||18||

Caru carana tori yenage
paruganisayya konege
bhara hakutiruve ninage narasimhane ||19||

Sancitartha papagalanu
kincitada piidegalanu
muncitavagi kaledu poreyo swami accyuta ||20||

Gyana bhakti kottu ninna
dhyanadalli yittu sada
hiina buddhi bidisu munna shrii janardhana ||21||

Japatapanushtana villade
kupathagamiyada yenna
krupeyamadi kshamisabeku upendrane ||22||

Moreya iduvenayya ninage
sharadhi shayana shubhamatiya
irisu bhaktanendu paramapurusha shri hari ||23||

Puttisalebeda innu
puttisidake palisenna
ishtu matra bedikombe shrii krishnane ||24||

Satyavada namagalanu
nityadalli pathisuvavara
arthiyinda salahuvanu kartru keshava ||25||

Mareyadale hariyanama
baredu Odi kelidavage
karedu mukti koduva neleyadikeshava ||26||
***

ಕೇಶವಾದಿ ನಾಮಗಳ ಅರ್ಥ (24 ನಾಮಗಳು)
1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ,
2. ನಾರಾಯಣ - ಗುಣಪೂರ್ಣ
3. ಮಾಧವ -  ಲಕ್ಷ್ಮೀ ರಮಣ,
4. ಗೋವಿಂದ - ವೇದ ವೇದ್ಯ
5. ಮಧುಸೂದನ - ಮಧು ದೈತ್ಯನನ್ನು ಕೊಂದವ
6. ವಿಷ್ಣು - ಸರ್ವ ವ್ಯಾಪಿ
7. ತ್ರಿವಿಕ್ರಮ - ಮೂರು ಹೆಜ್ಜೆ ಇಟ್ಟವನು
8. ವಾಮನ - ಮಂಗಳಕರ
9. ಶ್ರೀಧರ - ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದವನು
10. ಹೃಷಿಕೇಶ - ಇಂದ್ರಿಯಗಳ ದೇವತೆ.
11. ಪದ್ಮನಾಭ - ನಾಭಿಯಲ್ಲಿ ಪದ್ಮ (ತಾವರೆ) ವನ್ನು ಹೊಂದಿರುವವನು.
12. ದಾಮೋದರ - ಹೊಟ್ಟೆಯಲ್ಲಿ ಹಗ್ಗದಿಂದ ಕಟ್ಟಲ್ಪಟ್ಟವನು.
13. ಸಂಕರ್ಷಣ - ಪ್ರಳಯಕಾಲದಲ್ಲಿ ಎಲ್ಲರನ್ನೂ ಸೆಳೆಯುವವನು
14. ವಾಸುದೇವ - ಜಗದಾಧಾರ
15. ಪ್ರದ್ಯುಮ್ನ - ಉತ್ತಮ ಐಶ್ವರ್ಯ ನೀಡುವವನು
16. ಅನಿರುದ್ಧ - ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು
17. ಪುರುಷೋತ್ತಮ - ಎಲ್ಲಾ ಜೀವರಿಗಿಂತಲೂ ಲಕ್ಷ್ಮಿಗಿಂತಲೂ ಉತ್ತಮ
18. ಅಧೋಕ್ಷಜ - ಇಂದ್ರಿಯಗಳಿಗೆ ನಿಲಕದವನು
19. ನಾರಸಿಂಹ - ನರ ಮತ್ತು ಸಿಂಹ ಆಕೃತಿ ಉಳ್ಳವನು
20. ಅಚ್ಯುತ - ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು
21. ಜನಾರ್ಧನ - ಜನನವಿಲ್ಲದಂತೆ ಮಾಡುವವನು
22. ಉಪೇಂದ್ರ - ಎಲ್ಲಾ ಇಂದ್ರರಿಗಿಂತ ಉತ್ತಮ
23. ಹರ - ಪಾಪ ಪರಿಹಾರಕ
24. ಶ್ರೀ ಕೃಷ್ಣ - ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದುಕೊಳ್ಳು ವವನು...
||ಶ್ರೀ ಕೃಷ್ಣಾರ್ಪಣಮಸ್ತು||
***


               || ಪದ್ಯ -1 - ವಿವರಣೆ||

ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು |
ದೋಷರಾಶಿ  ನಾಶ ಮಾಡು
ಶ್ರೀಶ ಕೇಶವ || 1 ||

ಈಶ ನಿನ್ನ ಚರಣಸೇವೆ ಮಾಡುವೆನು.
ನೀನು ಈಶ ಸರ್ವನಿಯಾಮಕ. ನಾನು ನಿನ್ನ ದಾಸ -ನಿಯಮ್ಯ . ಆದುದರಿಂದ ನಿನ್ನ ಸೇವೆ ನಾನು ಮಾಡಬೇಕು .ನಾನೇನು ? ಈ ಪ್ರಕೃತಿ 
ಸಹಿತವಾದ ಪ್ರಪಂಚವೇ  ನಿನ್ನದು.

ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚ  ಜಗತ್ಯಾಂ ಜಗತ್ |
       ಈಶವಾಸ್ಯ ಉಪನಿಷತ್

ಯ ಏತತ್ ಪರತಂತ್ರ ಚ
ಸರ್ವಮೇವ ಹರೇಃ ಸದಾ
ವಶಮಿತ್ಯೇವ ಜಾನಾತಿ ಸಂಸಾರಾನ್ಮುಚ್ಯತೇ ಹಿ ಸಃ
            ತತ್ವವಿವೇಕ

ಈ ಪರತಂತ್ರ  ಪ್ರಪಂಚವೆಲ್ಲವೂ 
ಸರ್ವದಾ  ಶ್ರೀಹರಿಯ ವಶ  ಎಂದು ತಿಳಿದವನೆ ಮುಕ್ತಿ ಪಡೆಯುವುದು ತಾನೆ .
ಕ -ಬ್ರಹ್ಮ ಈ -ಲಕ್ಷ್ಮೀ  ಇ -ಕಾಮ , ಈಶ -ರುದ್ರ ಇವರಿಗೆಲ್ಲ ನಿಯಾಮಕ
ಆದುದರಿಂದಲೇ ನೀನು  ಕೇಶವ -ಕಂ  ಬ್ರಹ್ಮಾಣಂ , ಈಂ -ಲಕ್ಷ್ಮೀಂ  ಇಂ -ಕಾಮ , ಈಶಂ -ರುದ್ರಂವರ್ತಯತಿ ಇತಿ ಕೇಶವಃ ಬ್ರಹ್ಮಾದಿಗಳಿಗಿಂತ ಹಿರಿಯಳಾದ ಶ್ರೀದೇವಿಗೂ ನಿನು ಈಶ . ಹೀಗೆ ಸರ್ವೋತ್ತಮನು . ಸರ್ವನಿಯಾಮಕನು .  ಆಗಿ ಕೇಶವ ಎನಿಸಿದ ಶ್ರೀಶ ನಿನ್ನ ಚರಣಭಜನೆ ಮಾಡುವೆನು.
***

ಈಶ !ನಿನ್ನ ಚರಣಗಳಲ್ಲಿ  ಒಂದು  ಚರಣ ಮುಕ್ತಿಯಲ್ಲಿ ಭಜಕರಿಗೆ  ಸುಖವನ್ನು ಕೊಡುವುದರಿಂದ  ಸು ಎನಿಸಿದರೆ. ಮತ್ತೊಂದು ಚರಣ  ಜ್ಞಾನವನ್ನು ಕೊಡುವುದರಿಂದ. ವರ್ ಎನಿಸುವುದು. ಜ್ಞಾನ ಆನಂದಗಳನ್ನು  ಪಡೆಯಲು ನಿನ್ನ ಚರಣ ಭಜನೆ ಮಾಡುವೆನು .

ಎನ್ನ ಸೇವೆ ಬೆಸರದೆ  ದಿನ
ದಿನ್ನ ಮಾಡುವ ಮಾನವರಿಗೆ
ಪ್ರಸನ್ನ ನಾಹೆ ಕೃಪಾಳು ಎಂಬುದು ಎನಗೆ ಬಲು ಬಿರುದು
ಮನ್ನದಲ್ಲಿ  ಬೇಸತ್ತು ಕೊಂಡರೆ  ಮಣ್ಣು ಹೊಯಿಸದೆ ಮಾಣೆನದರಿಂ - ದುನ್ನತೋನ್ನತ ಪೂಜೆಗಳನು ದಿನ್ನ ಮಾಡುತಿರು.
ಸ್ವಪ್ನಪದ -ಶ್ರೀವಾದಿರಾಜರು

ಎಂದು ನಿನ್ನ ಆದೇಶ ಆದುದರಿಂದಲೆ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು.
***

ಸೂರ್ಯಸ್ಯ ತಪತೊ ಲೋಕಾನಗ್ನೇಃ  ಸೋಮಸ್ಯ ವಾಪ್ಯುತಃ  ಅಂಶವೋ ಯತ್ ಪ್ರಕಾಶಂತೇ ಮಮ ತೇ ಕೇಶಸಂಜ್ಞಿತಾಃ | ಸರ್ವಜ್ಞಾಃ ಕೇಶವಂ ತಸ್ಮಾನ್ಮಾಮಾಹುರ್ದ್ವಿಜಸತ್ತಮಾಃ | ತೇನ ಕೇಶವನಾಮಾಹಂ ಖ್ಯಾತೋ ಲೋಕೇ ಯುಗೇ ಯುಗೇ ||

ಲೋಕಗಳನ್ನು ಸುಡುವ ಸೂರ್ಯನ ಅಗ್ನಿಯ ಹಾಗೂ ಚಂದ್ರನ  ಪ್ರಕಾಶಿಸುವ ಕಿರಣಗಳೇ ವಿಶ್ವವ್ಯಾಪಿಯಾದ ನನ್ನ ಕೇಶ ಎನ್ನಿಸಿದ್ದು ಅವುಗಳನ್ನು ಮುಖ್ಯವಾಗಿ ನಾನು ಹೊಂದಿರುವುದರಿಂದ ಜ್ಞಾನಿಗಳು ನನ್ನನ್ನು ಕೇಶವ ಎಂದು ಕರೆಯುವರು . ಆದುದರಿಂದ ಲೋಕದಲ್ಲಿ ಪ್ರತಿಯೊಂದು ಯುಗದಲ್ಲೂ ನಾನು ಕೇಶವ ಎಂಬ ಹೆಸರಿನಿಂದ ಪ್ರಸಿದ್ದನಾಗಿರುವೆನು -ಎಂದು ಭಗವಂತನೇ ತಾನು ಕೇಶವ ಏಂದೆನಿಸಿರುವುದ ಔಚಿತ್ಯವನ್ನು ಮಹಾಭಾರತ ಶಾಂತಿಪರ್ವದಲ್ಲಿ ತಿಳಿಸಿದ್ದಾನೆ 
***

ಕೇಶವೋsನ್ಯತರಸ್ಯಾಮ್ ಇತಿ ಸೂತ್ರಾನುಸಾರೇಣ ಪ್ರಶಸ್ತಾಃ ಕೇಶಾಃ ಅಸ್ಯ ಸಂತೀತಿ ಪ್ರಶಂಸಾಯಾಮ್ ಕೇಶಾದ್ ವಪ್ರತ್ಯಯೇ ಸತಿ ಕೇಶವ ಇತಿ ಸಿದ್ಧ್ಯತಿ .

ಪ್ರಶಸ್ತವಾದ ತಲೆಗೊದಲನ್ನು ಹೊಂದಿರುವವನು ಆದ್ದರಿಂದ ಕೇಶವ. ಎಂದು ಕರೆಯಃಲ್ಪಡುತ್ತಾನೆ .

ಆನಂದಶ್ಮಶ್ರುರಾನಂದಕೇಶ ಆಪಾದನಖಾತ್ಸರ್ವ ಏವಾನಂದಃ

ಭಗವಂತನ ತಲೆಗೂದಲು ಯಾವಾಗಲೂ ಅವನಂತೆಯೇ ಆನಂದಸ್ವರೂಪಿ 
-ಮಾಧ್ಯಂದಿನ ಶ್ರುತಿ ಭಾಗವತತಾತ್ಪರ್ಯನಿರ್ಣಯ10-3-49

ಯತಃ ಪ್ರಾಣಾದಿ ಶಕ್ತಿಮಾನ್ ಕೇಶಾದಿ ಸರ್ವತ್ರ ||

ಭಗವಂತನ ಸ್ವರೂಪಾತ್ಮಕವಾದ ತಲೆಗೂದಲು ಅವನಷ್ಟೇ ಸಮರ್ಥ .ಅವನ ಕೈಕಾಲುಗಳಲ್ಲಿರುವ ಕೇಶಾದಿ ಸ್ವಸಾಮರ್ಥ್ಯವು ಅದರಲ್ಲಿದೆ .
      --ಗೀತಾತಾತ್ಪರ್ಯ

ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು
ಈ ವಿಷಯವನ್ನು  ತಿಳಿಸಿದ್ದಾನೆ .

ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸ ದುಚ್ಯತೇ |
ಸರ್ವತಃ ಪಾಣಿಪಾದಂ ತತ್ ಸರ್ವತೋsಕ್ಷಿಶಿರೋಮುಖಂ |
ಸರ್ವತಃ ಶ್ರುತಿಮಾಲ್ಲೋಕೇ ಸರ್ವಮೋವೃತ್ಯ ತಿಷ್ಠತಿ ||

ಭಗವಂತನಿಗೆ ಪ್ರಾಕೃತದೇಹವಾಗಲಿ ಪ್ರಾಕೃತ ಇಂದ್ರಿಯವಾಗಲಿ ಇರುವುದಿಲ್ಲ .ಅವನ ದೇಹ ಇಂದ್ರಿಯಾದಿಗಳೂ ಅವನ ಸ್ವರೂಪವೇ ಅವನ ಎಲ್ಲ ಅವಯವಗಳಲ್ಲಿಯೂ ಕೈಕಾಲುಗಳುಳ್ಳ ಶಕ್ತಿ ಉಳ್ಳವನು . ಎಲ್ಲ ಅವಯವಗಳಲ್ಲಿಯೂ ಕಿವಿಯ ಕಾರ್ಯಶಕ್ತಿ ಉಳ್ಳವನು .ಪ್ರತಿಯೊಂದು ಅವಯವೂ ಎಲ್ಲ ಅವಯವಗಳ  ಕಾರ್ಯಮಾಡಬಲ್ಲದು . ಜಗತ್ತಿನಲ್ಲಿರುವ ಎಲ್ಲ ವಸ್ತುವನ್ನು ವ್ಯಾಪಿಸಿರುತ್ತಾನೆ ಆತ .

ಅತ್ಯಂತ ಸೂಕ್ಷ್ಮವಾದ ಕೈಕಾಲು ಮುಂತಾದ ಎಲ್ಲ ಅವಯವಗಳಿಂದ ಕೂಡಿದ ಅಣುರೂಪಗಳಿಂದ ಎಲ್ಲ ಅಣುಪದಾರ್ಥಗಳಲ್ಲಿಯೂ ಇದ್ದು ವ್ಯಾಪ್ತರೂಪದಿಂದ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನೂ ವ್ಯಾಪಿಸಿರುತ್ತಾನೆ .
  -ಶ್ರೀಮದ್ ಭಗವದ್ಗೀತೆ 13- 13 ,14

ಕೃಷ್ಣ ಕೇಶೋ ಹಿ ಯಾದವಃ ||
                                -ಗೀತಾತಾತ್ಪರ್ಯ
ಹರಿಶುಕ್ಲಕೇಶಯುತಶ್ಶೇಷೋ ದೇವಕಿರೋಹೀಣಿಜಃ   ||

ಭಗವಂತನ ಕಪ್ಪು ತಲೆ ಗೂದಲೇ ಶ್ರೀಕೃಷ್ಣನಾಗಿ ಅವತರಿಸಿದ್ದರೆ 
 ಬಿಳಿತಲೆಗೂದಲು ಶೇಷನಲ್ಲಿ ಅವೇಶ ಹೊಂದಿ ಬಲರಾಮನಾಗಿ ಅವತರಿಸಿದೆ ..ಇಷ್ಟು ಉತ್ಕೃಷ್ಟವಾದ ತಲೆಗೂದಲು ಭಗವಂತನದ್ದು .
-ಶ್ರೀಮಹಾಭಾರತತಾತ್ಪರ್ಯನಿರ್ಣಯ 12-112

ಕೇಶೇನ ಕೃಷ್ಣರೂಪಿ ಸನ್ ಜಗತಿ ವರ್ತತ ಇತಿ ಕೇಶವಃ ||

ಕಪ್ಪು ತಲೆಗೂದಲಿಂದ ಶ್ರೀಕೃಷ್ಣನಾಗಿ ಭೂಮಿಯಲ್ಲಿ ಇರುವವನ.
            -ವಾದಿರಾಜೀಯ

ಕೇಶೇನ ಕೃಷ್ಣ ಕೇಶೇನ ವಾತಿ ಗಂಧಯತಿ ದೈತ್ಯಾನಿತಿ ಕೇಶವಃ |

ಕಪ್ಪು ತಲೆಗೂದಲಿನ ಮೂಲಕ ಕಂಸನೇ ಮೊದಲಾದ  ಅಸುರರನ್ನು ಸಂಹರಿಸಿದವನು. 
-ಶ್ರೀಸತ್ಯಸಂಧೀಯ ವಿಷ್ಣುಸಹಸ್ರನಾಮ ಸಹಸ್ರನಾಮ ವ್ಯಾಖ್ಯಾನ

ಕೇಶಿವಧಾತ್ ಕೇಶವ
ಕೇಶಿ ಎಂಬ ಅಸುರರನ್ನು ಸಂಹರಿಸಿದವನು .

ಯಸ್ಮತ್ತ್ವಯೈವ ದುಷ್ಟಾತ್ಮ ಹತಃ ಕೇಶಿ ಜನಾರ್ದನ |
ತಸ್ಮಾತ್ ಕೇಶವನಾಮ್ನಾ ತ್ವಂ ಲೋಕೆ ಖ್ಯಾತಿಂ ಗಮಿಷ್ಯಸಿ ||
ಕೇಶಿ ಎಂಬ ಅಸುರನನ್ನು ಸಂಹರಿಸಿರುವುದರಿಂದಲೇ ನೀನು ಕೇಶವ ಎಂದೆನಿಸಿರುವಿ ಎಂದು ಭಗವಂತನಲ್ಲಿ ನಿವೇದಿಸಿಕೋಳ್ಳಲಾಗಿದೆ .
         -ವಿಷ್ಣುಪುರಾಣ

ಕಸ್ಯ ಬ್ರಹ್ಮಣಃ ಈಶಃ ಕೇಶಃ |ವರಿತಿ ಜ್ಞಾನಮುಚ್ಯತೇ ಇತಿ ಜ್ಞಾನ ರೂಪತ್ವಾತ್ ವಃ |  ಕೇಶಶ್ಚಾ ಸೌ ವಶ್ಚ ಕೇಶವಃ ||

ಚತುರ್ಮುಖ ಬ್ರಹ್ಮದೇವರ ಒಡೆಯ ಮತ್ತು ಜ್ಞಾನಸ್ವರೂಪಿ .ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ .

-ಸುಖಶ್ರೇಷ್ಠಃ  ವಹತಿ ವರ್ತಯತೀತಿ ಕೇಶವಃ

(ಯೋಗ್ಯರಿಗೆ ) ಸುಖಶ್ರೇಷ್ಠವಾದ ಮೋಕ್ಷ ಸುಖವನ್ನು ತಲುಪೀಸುವವನು ಅಥವ ಪ್ರವರ್ತಿಸುವವನು ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ .

-ಶ್ರೀವಿದ್ಯಾದಿರಾಜೀಯ ವಿಷ್ಣುಸಹಸ್ರನಾಮ ವ್ಯಾಖ್ಯಾನ
***

ಅರ್ಚಿತಃ ಸಂಸ್ಮೃತೋ ಧ್ಯಾತಃ
ಕೀರ್ತಿತಃ ಕಥಿತಃ ಶ್ರುತಃ
ಯೋ ದದಾತ್ಯಮೃತತ್ವಂ ಹಿ
ಸಮಾಂ ರಕ್ಷತು ಕೇಶವಃ

 ನಿನ್ನ ಅರ್ಚನ ಸಂಸ್ಮರಣೆ ,ಧ್ಯಾನ ,ಕೀರ್ತನೆ ,
ಮಾಹಾತ್ಮ್ಯ  ,ಕಥನ ಶ್ರವಣಗಳನ್ನು ಮಾಡಿದವನಿಗೆ ನೀನು ಮುಕ್ತಿಯನ್ನು .ಕೊಡುವಿ ಅಂಥ ಕೇಶವ ! ನೀನು ರಕ್ಷಣೆ ಮಾಡು
         -ಶ್ರೀಕೃಷ್ಣಾಮೃತ ಮಹಾರ್ಣವ
****

ಅಥಾಂಘ್ರಯೇ ಪ್ರೋನ್ನಮಿತಾಯ ವಿಷ್ಣೋ
ರುಪಾಹರತ ಪದ್ಮಭವೋsರ್ಹಣಾದಿಕಮ್ |
ಸಮರ್ಚ್ಯ ಭಕ್ತ್ಯಾsಭ್ಯಗೃಣಾಚ್ಛುಚಿಶ್ರವಾ
ಯನ್ನಾಭಿಪಂಕೇರುಹಸಂಭವಃ ಸ್ವಯಮ್ ||
ಧ್ಯಾತುಃ ಕಮಂಡಲಜಲಂ ತದುರುಕ್ರಮಸ್ಯ
ಪಾದಾವನೇಜನಪವಿತ್ರ ತಯಾ ನರೇಂದ್ರ||
ಸ್ವರ್ಧುನ್ಯಭೂನ್ನಸಿ ಸಾ ಪತತೀ ನಿರ್ಮಾಷ್ಟಿ
ಲೋಕತ್ರಯಂ ಭಗವತೋ ವಿಶದೇವ ಕೀರ್ತಿಃ ||

ವಾಮನ ರೂಪಿ ಪರಮಾತ್ಮನು  ತ್ರಿವಿಕ್ರಮನಾಗಿ ಬೆಳೆದಾಗ ಸತ್ಯಲೋಕಕ್ಕೆ  ಬಿಜಯಂ ಗೈದ ನಿನ್ನ ಪಾದಕ್ಕೆ ನಿನ್ನ ಪಾದನಖಾಗ್ರ ಸ್ಪರ್ಶಮಾತ್ರದಿಂದ ಸ್ಪೋಟಗೊಂಡ ಬ್ರಹ್ಮಾoಡದ ಹೊರಗಿಂದ ಬಂದ ನೀರನ್ನು ತನ್ನ ಕಮಂಡಲುವಿನಲ್ಲಿ ಹಿಡಿದು ಜೀವೋತ್ತಮರಾದ ಬ್ರಹ್ಮ ದೇವರು ಪೂಜೆಗೈದು ಕೃತಾರ್ಥರಾದರಲ್ಲವೇ ? ಅದೇ ನೀರು ನಿನ್ನ ಪಾದ ಸಂಗದಿಂದ ಪವಿತ್ರ ಗಂಗೆಯಾಗಿ ಭುವನ ಪಾವನವೆನಿಸಿದೆ . 
  -ಶ್ರೀಮದ್ ಭಾಗವತಪುರಾಣ 8-20-3,4,5


ಯಚ್ಛೌಚ ನಿಸೃತ ಸರಿತ್ಪ್ರವರೋದಕೇನ ತೀರ್ಥೇನ
ಮೂರ್ಧ್ನ್ಯ ಧೀಧೃತೇನ ಶಿವಃ ಶಿವೋ ಭೂತ್ ||

ಪರಶಿವನೂ ನಿನ್ನ ಈ ಪಾದೋದಕವನ್ನು ಧರಿಸಿ ಸದಾಶಿವ(ಮಂಗಲ)ನಾದನಲ್ಲವೇ ಪ್ರಭು ! .
    -ಶ್ರೀಮದ್ ಭಾಗವತಪುರಾಣ

 ಹೀಗೆ ಕ -ಬ್ರಹ್ಮ -ಈಶ -ರುದ್ರರನ್ನು ತನ್ನ ಪಾದಸೇವನೆಯಲ್ಲಿ  ತೊಡಗಿಸಿದ ಕೇಶವ ನೀನು .  (ಈ )ಲಕ್ಸ್ಮೀ ದೇವಿಗೆ (ಶ) ಚರಣಭಜನೆಯ ಸೌಖ್ಯ ಕೊಟ್ಟ ಈಶ  ನೀನು .ನನ್ನಿಂದಲೂ
 ನಿನ್ನ ಚರಣಭಜನೆ ಮಾಡಿಸಿಕೊ ಎಂದು ಶ್ರೀಕನಕದಾಸಾರ್ಯರು

ಈಶ ನಿನ್ನ ಚರಣಾ ಭಜನೆ ಆಶೆಯಿಂದ ಮಾಡುವೇನು |
ದೋಷರಾಶಿ ನಾಶಮಾಡು ಶ್ರೀಶ ಕೇಶವ || 
ಎಂದು ಕೇಶವರೂಪಿ ಪರಮಾತ್ಮನನನ್ನು ಮೊದಲ ಪದ್ಯದಲ್ಲಿ ವರ್ಣಿಸಿದ್ದಾರೆ
        || ಶ್ರೀಕೃಷ್ಣಾರ್ಪಣಾಮಸ್ತು ||
    ಮೊದಲನೇ ಪದ್ಯದ ವಿವರಣೆ ಮುಗಿಯಿತು
***