Showing posts with label ಗುರುರಾಘವೇಂದ್ರರಾಯನೆ ಬಾರೋ ಕರುಣವ ಬೀರೋ tandevenkatesha vittala ವೃತ್ತನಾಮ vruttanama. Show all posts
Showing posts with label ಗುರುರಾಘವೇಂದ್ರರಾಯನೆ ಬಾರೋ ಕರುಣವ ಬೀರೋ tandevenkatesha vittala ವೃತ್ತನಾಮ vruttanama. Show all posts

Monday 6 September 2021

ಗುರುರಾಘವೇಂದ್ರರಾಯನೆ ಬಾರೋ ಕರುಣವ ಬೀರೋ ankita tandevenkatesha vittala ವೃತ್ತನಾಮ vruttanama

 ankita ತಂದೆವೆಂಕಟೇಶವಿಠಲ

ರಾಗ: ಫರಜು ತಾಳ: ಆದಿ


ಗುರು ರಾಘವೇಂದ್ರರಾಯನೆ ಬಾರೋ

ಕರುಣವ ಬೀರೋ ತವರೂಪ ತೋರೋ


ಶ್ಲೋಕ 

ಶ್ರೀ ಮಧ್ವಾಖ್ಯ ಸುಮಾರುತ ಸುರಸ್ತೋಮಾರ್ಚಿತಾಂಘ್ರಿದ್ವಯ

ಪ್ರೇಮಾಂಭೋನಿಧಿ ವ್ಯಾಸಕೃಷ್ಣ ನೃಹರೀ ರಾಮಾದಿ ರೂಪಾಹ್ವಯ

ಭೂಮ್ಯಾಕಾಶ ದ್ವಿಸಪ್ತಲೋಕಮಹಿತ ಹೇಮಾಂಡವ್ಯಾಪ್ತಾದ್ವಯ

ಶ್ರೀಮಾನಿತಮಾನದಾಂಘ್ರಿಭ್ರಮರಂ ಶ್ರೀಮಂತ್ರಸದ್ಮಂ ಭಜೇ

ಪದ

ಕರ್ಮ ಭುವಿಯ ಕುಂಭಕೋಣದಿ | ಜನ್ಮ ತಾಳಿದಿ | ವೇಣಿವೆಂಕಟಾಖ್ಯದಿ |

ಮರ್ಮವರಿತು ವಿಷ್ಣುಧ್ಯಾನದಿ | ದೈನಂದಿನದಿ | ಪುಣ್ಯಪರಿಪಾಕಕತದಿ|

ಕರ್ಮಗ್ರಂಥಿಯ ಹರಿದು ಮೋದದಿ | ಗುರುಪೀಠದಿ | ಸುಧೀಂದ್ರಜನಾದಿ|

ಪೇರ್ಮೆಯಿಂದಲಿ ಮಧ್ವಶಾಸ್ತ್ರಾಬ್ಧಿ | ಮೀನನೆನಿಸಿದಿ | ಅಜಾತಪ್ರತಿವಾದಿ | 1

ಶ್ಲೋಕ 

ಪೂರ್ವಾಚಲಪುಣ್ಯಕ್ಷೇತ್ರನಿಲಯಾ ಸರ್ವೋತ್ತಮೂರ್ವಿಭೃತ

ಶರ್ವಾಹಿಪ ತಾಕ್ಷ್ರ್ಯ ವೇಧ ಲಕ್ಷ್ಮೀ ಗೀರ್ವಾಣ ಸಂಸೇವಿತಾ

ನಿರ್ವಾಹಿತಸರ್ವಕರ್ಮ ಶುಭದ ಸರ್ವಸ್ಥ ಸಾರಭೋಕ್ತ

ಸರ್ವಜ್ಞಾರ್ಚಿತಪಾದಪದ್ಮಭ್ರಮರಂ ಶ್ರೀ ವ್ಯಾಸರಾಜಂ ಭಜೇ 

ಪದ

ದಂಡ ಕಮಂಡಲುಧಾರಕಾ | ದುರಿತಹಾರಕ | ಜ್ಞಾನ ಭಕ್ತಿ ವಿವರ್ಧಕ |

ಪುಂಡರೀಕಾಂಬಕಪದಕೋಕ | ನದ ಸೇವಕ ವಿವರ್ಜಿತಕಾಮ ಶೋಕ |

ಖಂಡಾರ್ಥ ವಿವೃತ್ತಿದೀಪಿಕಾ | ಗ್ರಂಥ ಕರ್ತೃಕ | ಸೀತಾರಮಣಾರಾಧಕ |

ಪಂಡಿತತಂಡಚಕೋರಕ | ಶಶಧಾರಕ ರಾಘವೇಂದ್ರನಾಮಕ | 2

ಶ್ಲೋಕ 

ವಿಷ್ವಭುಗ್ಚಾಪವಿಭಂಜನಕರಾ ಝಶಕೇತುಮತಾವರ

ಋಷಿಯಾಗ ಸುಕರ್ಮಪಾಲನ ಪರ ಇಷುಚಾಪಧೃತ ಶ್ರೀಕರ

ಹೃಷೀಕೇಶಾಭಿಧ ಮತ್ಸ್ಯಕೂರ್ಮ ಕುಧರದ್ವೇಷೀವಿಪಾಟನಕರ

ಭೈಷ್ಮೀವಲ್ಲಭಪಾದಪದ್ಮಮಧುಪಂ ವಿಭೀಷಣಂ ಪಾಹಿಮಾಂ 

ಪದ

ಅಶೇಷಪಂಡಿತ ಪಾಮರ | ಜನಕುಪಕಾರ | ಮಾಡಿದ ಉದಾರ |

ವಿಶೇಷಸನ್ಮಹಿಮ ವಾನರ | ಸನ್ಮತಸಾರ | ವಿಸ್ತ್ರುತಗೈದ ಧೀರ | 

ವಸುಧೆಯೊಳ್ ದ್ವಾದಶವತ್ಸರ | ನರಪಗಾಹಾರ | ವಿತ್ತ ಕರುಣಾಕರ |

ಶಿಶು ಚೂತರಸದೊಳು ಗತಿಸಿರ | ಲದಪರಿಹಾರ | ಗೈದ ದಯಾಪಾರಾವಾರ| 3

ಶ್ಲೋಕ

ಕೋಟ್ಯಾವಧಿಕೋಟಿಜನ್ಮಘಟಿತಾ ಪಾಪಾಟವೀಪಾವಕ

ಪಾಠೀಣಾಕೃತಿ ಕೂರ್ಮ ಕ್ರೋಢ ನೃಹರೀ ವಟು ಭೃಗುಜ ಹತತಾಟಕಾ

ಖೇಟಸ್ಕಂದವಿಹಾರಿ ತ್ರಿಪುರೋತ್ಪಾಟನ ಹಯಾರೋಹಕ

ಹಾಟಕಾಂಬರಶ್ರೀಚರಣಸೇವಕ ಗುರುರಾಟ್ ರಾಘವೇಂದ್ರಂ ಭಜೇ

ಪದ

ಗರ್ಭಿಣಿ ಪ್ರಸವಿಸೆ ಮರಳಲ್ಲಿ | ಉದಕವನಲ್ಲಿ | ತೋರಿ ಪುಳಿನಕಳಸದಲೀ |

ದುರ್ಭರಾತಪಕೆ ಕಂಗೆಡುತಲಿ | ಶಿಶುವಿರಲಲ್ಲಿ | ಬಾಧೆ ಬಿಡಿಸಿ ಚೈಲದಲೀ |

ನಿರ್ಭರದಿ ಆಮೀಷಾದಿಗಳಲ್ಲಿ | ಮಂತ್ರ ಜಲದಲ್ಲಿ | ನಿರ್ಮಿಸಿ ಪುಷ್ಪ ಕದಳೀ | 

ಸರ್ಬರ ಆನಂದ ಕಡಲಲ್ಲಿ| ಮುಳುಗಿಸುವಲ್ಲೀ| ನಿನ್ನ ಸಮರಿಲ್ಲೀಕ್ಷಿತಿಯಲ್ಲೀ| 4

ಶ್ಲೋಕ

ಸಿಂಧೂರಾಜಸುತಾಸುನೇತ್ರಾರವಿಂದಾಂಬರಸ್ಥಿತಮಣಿ

ಸಾಂದೀಪದ್ವಿಜಕುವರಪೋಷಕ ಚಿದಾನಂದಾತ್ಮ ದಿವಿಭಮಣಿ

ಸಿಂಧೂರಕ್ಲೇಶನಾಶಕ ಮಹಾನಂದತೀರ್ಥಾರ್ಚಿತಘೃಣಿ

ಬೃಂದಾರಕವಂದ್ಯನಂಘ್ರಿಶರಣಬೃಂದಾರ್ಚಿತ ಯತಿಮಣಿ

ಪದ

ತಾರತಮ್ಯಜ್ಞಾನ ಬೋಧಿಸಿ | ಶಾಸ್ತ್ರ ಶೋಧಿಸಿ | ಮಿಥ್ಯಾಸಮಯ ಖಂಡಿಸೀ |

ತಾರಕ ಹರಿಯೆಂದು ಸ್ಥಾಪಿಸಿ | ಮರುತನೊಪ್ಪಿಸಿ | ದಿಗ್ದೇಶದಿ ಮೆರೆಸೀ |

ಸಾರಿದವರಿಷ್ಟಾರ್ಥ ಪೂರ್ತಿಸಿ | ಆಶೀರ್ವದಿಸಿ ಮನ್ರೋಗೊಲಿದ ವಿಲಾಸೀ |

ನೂರೆಂಟ ಬೇಡೆನಿದನಾಲಿಸಿ | ಪಂಥ ಪಾಲಿಸಿ | 

ಭಕ್ತಿ ಬೆಳೆಸೋಸಂನ್ಯಾಸೀ | 5

ಶ್ಲೋಕ

ಕೇಶೀಭಂಜನ ಶ್ವಸನಹೃದಯಾಕಾಶಾಭಿರಾಜಿತರವೀ

ಕ್ಲೇಶಾಜ್ಞಾನ ವಿಮೋಹ ವಿಹ್ವಲ ಭಯ ದೋಷಾಗಪಾಟನಪವೀ

ದಾಸೀಕೃತ ಸರ್ವಜೀವನಿಚಯ ಆಶಸ್ಥ ನತಶಾಂಭವೀ

ವ್ಯಾಸಾದ್ಯನಂತರೂಪಗಮಹಾಶ್ರೀಪಾದಭಜಕಂ ಭಜೇ

ಪದ

ಕೃತಮಹಾಯುಗದಲ್ಲಿ ಪ್ರಹ್ಲಾದ | ನಾಗಿ ಪಿತೃಮೇಧ |

ಗೈಸಿ ಕಂಡೆ ಹರಿಪಾದ |

ದ್ವಿತೀಯಾದೊಳ್ ರಾಕ್ಷಸಾಧಮನಾದ | ರಾವಣವಧ | 

ಗೈದ ರಘುಜ ಪ್ರಿಯನಾದ |

ತ್ರುತಿಯಯುಗದಿ ಬಾಹ್ಲೀಕನಾದ | ಕಲಿವಪುವಧ |

ಕಾರಿಚರಣಷಟ್ಪದ |

ಅತಿಶಯಕಲಿಯೊಳು ಯತಿಯಾದ | ಮಾಯಾಮತವಧ |

ಗೈದು ಮಧ್ವೇಶಗರ್ಪಿಸಿದ | 6

ಶ್ಲೋಕ

ಹೇಮಾಕ್ಷಾರಿ ಸುದಾಮ ಸುಮನಸ್ತೋಮಾಬ್ಜಮಿತ್ರೋದಯಾ

ಪ್ರೇಮಾಂಭೋರುಹಲೋಚನಯುಗ ಧೀಮಂತಜನ ಸಂಪ್ರಿಯಾ

ಸೀಮಾತೀತ ವಿಚಿತ್ರಚರ್ಯ ನಿಗಮಸ್ತೋಮಾರ್ಚಿತಾಂಘ್ರಿದ್ವಯಾ

ಭಾಮಾವರಸಾರಸಾಂಘ್ರಿಭ್ರಮರಂ ಶ್ರೀಮಂತ್ರನಿಲಯಂ ಭಜೇ

ಪದ

ಸಕಲಪುಣ್ಯಕ್ಷೇತ್ರ ಚರಿಸೀದೆ | ಕೀರ್ತಿ ಮೆರೆಸೀದೇ | ಕೃತಾರ್ಥನೆನಿಸೀದೆ|

ವಿಕಲದುರ್ಮತಗಳನೊರೆಸೀದೆ | ಭಕ್ತಿ ಬೆಳೆಸೀದೇ | ಇಷ್ಟಾರ್ಥಪ್ರದನಾದೆ|

ಮುಕುತಿಚಾರ್ವಂಗಿಯನೊಲಿಸೀದೆ | ತಾಪದಹಿಸೀದೇ | ದಾಸದೀಕ್ಷೆ ವಹಿಸೀದೆ|

ಸುಕಲಾಭಿಜ್ಞನೆ ಯೋಗವಾರಿಧೆ | ಮಂತ್ರನಿಲಯದೇ | ದೇಹತ್ಯಾಗಮಾಡಿದೆ | 7

ಶ್ಲೋಕ

ಗೋಪಾಲಕ ಗೋಪ ಗೋಪಿವನಿತಾತಾಪಾಪಹಾರಕವರ 

ತಾಪತ್ರಯನಾಶಕ ದುರ್ವಿಭಾವ್ಯ ಸ್ವರತಾ ಕೂಪಾರಸುಗುಣಾಗರ

ಕಾಪಾಲೀ ದಿವಿಜೇಶ ಚಿತ್ಸುಖಪ್ರಾಪಕ ಕ್ಷಮಾಶ್ರೀವರಾ

ರೂಪಾಭಿದಾನಂತ ಪೂರ್ಣಮಹಿಮಶ್ರೀಪಾದಭಜಕಂ ಭಜೇ

ಪದ

ಸುವಿರೋಧಿವರ್ಷ ಶ್ರಾವಣಮಾಸಾ | ಸಿತ ಕವಿದಿವಸ | 

ಬೃಂದಾವನದಿಪ್ರವೇಶಾ |

ಪವಿಧರನಗರಿಗೆ ಸಮಭಾಸಾ | ಯಾಗಪ್ರದೇಶ | 

ಮಂತ್ರಾಲಯಮುಕ್ತಿಕೋಶಾ |

ನವನವಮಹಿಮೆಯು ಅಹರ್ನಿಶಾ | ಉತ್ಸವ ಘೋಷ | 

ನಮ್ಮ ತಂದೆವೆಂಕಟೇಶ |

ಶ್ರೀವಿಠಲಕೊಡಿಸುವ ವರ ಜಸ | ಸಪ್ತಶತವರ್ಷ |

ಸಾಕ್ಷೀ ಹಯಾಸ್ಯ | 8

***

ಹೇಮಾಂಡ=ಬ್ರಹ್ಮಾಂಡ; 

ಶ್ರೀಮಾನಿತಮಾನದಾಂಘ್ರಿ=ಶ್ರೀಲಕ್ಷ್ಮೀದೇವಿಯಿಂದ 

ವಂದ್ಯನಾದ ಸಕಲರ ಮಾನ ಸಂರಕ್ಷಕನಾದ 

ಪರಮಾತ್ಮನ ಪಾದಗಳು; 

ಪರಿಪಾಕಕತದಿ=ಪೂರ್ವ ಪುಣ್ಯ ಪಕ್ಷದ ನಿಮಿತ್ತ; 

ಕರ್ಮ ಗ್ರಂಥಿ=ಕರ್ಮದ ಗಂಟು; 

ಊರ್ವಿಭೃತ= ಭೂಮಿಯನ್ನು ಹೊತ್ತ ವರಾಹ ದೇವರು; 

ಶರ್ವಾಹಿಪ=ಶೇಷ, ಶಿವ; 

ತಾಕ್ಷ್ರ್ಯ=ಗರುಡ; ವೇಧ=ಬ್ರಹ್ಮ; 

ಗೀರ್ವಾಣ=ದೇವತೆ; ; 

ಶಶಧಾರಕ=ಚಂದ್ರ; 

ವಿಷ್ವಭುಗ್ಚಾಪ=ಶೈವ ಧನುಸ್ಸು (ಶ್ರೀರಾಮನು ಮುರಿದದ್ದು); 

ಇಷು ಚಾಪಧೃತ=ಬಾಣ ಬಿಲ್ಲು ಹಿಡಿದಿರುವ; 

ವಿಪಾಟನಕರ=ಕೊಂದ; ವಸುಧೆಯೊಳ್ ದ್ವಾದಶ 

ವತ್ಸರ ನರಪಗಾಹಾರವಿತ್ತ=ರಾಜನ ಕೋರಿಕೆಯಂತೆ 

12 ವರ್ಷ ಕ್ಷಾಮವಿಲ್ಲದಂತೆ ರಕ್ಷಿಸಿದ; 

ಸಿಂಧೂರಾಜಸುತಾ=ಶ್ರೀ ಲಕ್ಷ್ಮೀದೇವಿ; 

ಕೇಶೀ=ಕಂಸನ ಹಸ್ತಕನಾದ ಒಬ್ಬ ದೈತ್ಯ; 

ಭಂಜನ=ನಾಶ; ಶ್ವಸನ=ವಾಯುದೇವರು; 

ವಿಹ್ವಲ=ಹತಾಶ; ದೋಷಾಗಪಾಟನಪವೀ=ದೋಷಗಳೆಂಬ 

ಬೆಟ್ಟಗಳನ್ನು ಸೀಳುವ ವಜ್ರಾಯುಧ; 

ಕಲಿ ವಪು ವಧಕಾರಿ=ಭೀಮಸೇನ; 

ಹೇಮಾಕ್ಷಾರಿ=ಹಿರಣ್ಯಾಕ್ಷನ ಶತ್ರು-ವರಾಹ ದೇವರು; 

ಸುದಾಮ=ವೈಕುಂಠ (ವೈಕುಂಠವೇ ಮನೆಯಾಗುಳ್ಳ); 

ಸುಮನ ಸ್ತೋಮಾಬ್ಜ ಮಿತ್ರೋದಯಾ=ದೇವತೆಗಳ 

ಸಮೂಹವೆಂಬ ಕಮಲಕ್ಕೆ ಉದಯ ಸೂರ್ಯನಂತಿರುವ; 

ಭಾಮಾವರ=ಸತ್ಯಭಾಮೆಯ ಗಂಡ ಶ್ರೀಕೃಷ್ಣ;; 

ಮುಕುತಿ ಚಾರ್ವಂಗಿ=ಮುಕ್ತಿ ಎಂಬ ಸುಂದರ ಕನ್ಯೆ; 

ಸುಕಲಾಭಿಜ್ಞ=ಅನೇಕ ಕಲೆಗಳಲ್ಲಿ ಪಂಡಿತರಾದವರು; 

ಪವಿಧರ ನಗರ=ಇಂದ್ರನ ಅಮರಾವತಿ; ಜಸ=ಕೀರ್ತಿ;